ಕೆಲ್ಸ ಮಾಡದೇ ಇದ್ರೆ ನನ್ನನ್ನು ಕಿತ್ತೊಗೆಯಿರಿ: ಕಮಲ್ ಹಾಸನ್

Public TV
1 Min Read
KAMAL

ಚೆನ್ನೈ: ತಮಿಳು ರಾಜಕೀಯ ಪರಿಸ್ಥಿತಿಗಳು ದಿನನಿತ್ಯ ಹೊಸ ತಿರುವುಗಳು ಪಡೆದುಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ತಮಿಳು ರಾಜಕೀಯ ರಂಗಕ್ಕೆ ಕಾಲಿವುಡ್ ಮೆಗಾ ಸ್ಟಾರ್ ಖ್ಯಾತ ನಟ ಕಮಲ್ ಹಾಸನ್ ಪ್ರವೇಶಿಸುವುದು ಖಚಿತವಾಗಿದೆ.

ತಮಿಳು ರಾಜಕೀಯದಲ್ಲಿ ಕೆಲವು ಬದಲಾವಣೆಗಳನ್ನು ತರುವ ಅಗತ್ಯವಿದ್ದು, ಈ ಬದಲಾವಣೆಗಳನ್ನು ನಾನು ತರಲು ನಿರ್ಧರಿಸಿದ್ದೇನೆ. ಆದರೆ ಇದು ಎಷ್ಟು ಸಮಯವನ್ನು ತೆಗೆದುಕೊಳ್ಳಲಿದೆ ಎನ್ನುವುದನ್ನು ತಿಳಿಸುವುದು ಕಷ್ಟಸಾಧ್ಯ ಎಂದು ತಮ್ಮ ರಾಜಕೀಯ ಪ್ರವೇಶವನ್ನು ವಿಷಯದ ಬಗ್ಗೆ ಕಮಲ್ ಹಾಸನ್ ಸ್ಪಷ್ಟಪಡಿಸಿದರು.

ರಾಜಕೀಯದಲ್ಲಿ ತೀವ್ರ ಬದಲಾವಣೆಯನ್ನು ತರುವುದು ಸತ್ಯ ಸಂಗತಿಯಾಗಿದ್ದು, ಆದರೆ ಈ ಪ್ರಕ್ರಿಯೆಯನ್ನು ಯಾವಾಗ ಆರಂಭಿಸುತ್ತೇನೆ ಎಂದು ಭರವಸೆ ನೀಡುವುದು ಕಷ್ಟಸಾಧ್ಯ ಎಂದು ತಿಳಿಸಿದರು.

ಚುನಾವಣೆ ಭರವಸೆಗಳ ಬಗ್ಗೆ ನನಗೆ ಯಾವುದೇ ನಂಬಿಕೆ ಇಲ್ಲ. ಭರವಸೆಗಳನ್ನು ಆಧರಿಸಿ ನನಗೆ ಮತವನ್ನು ನೀಡಬೇಡಿ, ನಾನು ಸರಿಯಾಗಿ ಕೆಲಸ ನಿರ್ವಹಿಸದಿದ್ದಾರೆ ತಕ್ಷಣ ನನ್ನನ್ನು ಕಿತ್ತೊಗೆಯಿರಿ ಎಂದಿದ್ದಾರೆ.

ಪ್ರಸ್ತುತ ರಾಜಕೀಯದಲ್ಲಿ ಭ್ರಷ್ಟಚಾರ ಪ್ರಮುಖ ಸಮಸ್ಯೆಯಾಗಿದೆ. ಭ್ರಚ್ಟಚಾರವನ್ನು ರಾಜಕೀಯದಿಂದ ನಿರ್ಮೂಲನೆ ಮಾಡುತ್ತೇನೆ, ಇಲ್ಲವಾದಲ್ಲಿ ನಾನು ಹೊರ ನಡೆಯುತ್ತೇನೆ. ಪ್ರತಿ ರಾಜಕೀಯ ಪಕ್ಷವು ಒಂದು ಸಿದ್ಧಾಂತವನ್ನು ಹೊಂದಿರುತ್ತದೆ. ಆದರೆ ನನ್ನ ಯಾವುದೇ ಸಿದ್ಧಾಂತಗಳು, ಗುರಿಗಳು ಯಾವುದೇ ರಾಜಕೀಯ ಪಕ್ಷಕ್ಕೆ ಹೊಂದಿಕೆ ಯಾಗುವುದಿಲ್ಲ ಎಂದರು.

ಮಾಧ್ಯಮದವರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು ನಾನು ಪ್ರಸ್ತುತ ತಮಿಳುನಾಡಿನಲ್ಲಿರುವ ಯಾವುದೇ ಪಕ್ಷವನ್ನು ಸೇರುವುದಿಲ್ಲ, ಕೆಲವು ದಿನಗಳಲ್ಲಿ ಹೊಸ ಪಕ್ಷವನ್ನು ಘೋಷಿಸುವುದಾಗಿ ಉತ್ತರಿಸಿದರು.

ಪ್ರಸ್ತುತ ಕಮಲ್ ಹಾಸನ್ ಸಿಪಿಎಂ ಪಕ್ಷದ ಕಾರ್ಯದರ್ಶಿಗಳಾದ ಸೀತಾರಾಮ್ ಯಚೂರಿ ಜೊತೆ ಸಂಪರ್ಕದಲ್ಲಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಕೇರಳ ರಾಜ್ಯ ಸಿಎಂ ಪಿಣರಾಯಿ ವಿಜಯನ್ ಅವರ ಜೊತೆ ಕಳೆದ ತಿಂಗಳು ಮಾತುಕತೆ ನಡೆಸಿದ್ದರು.

ಕೆಲ ದಿನಗಳ ಹಿಂದೆ ತಮ್ಮ ರಾಜಕೀಯ ಪ್ರವೇಶದ ಕುರಿತು ಮಾತಾನಾಡಿದ್ದ ಕಮಲ್ ಹಾಸನ್, ನನ್ನ ಬಣ್ಣವು ಎಂದು ಕೇಸರಿ ಬಣ್ಣದೊಂದಿಗೆ ಗುರುತಿಸಿಕೊಂಡಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *