ಸೂಪರ್ ಸ್ಟಾರ್ ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರ ಜೂನ್ 3ಕ್ಕೆ ತೆರೆಗೆ ಅಬ್ಬರಿಸಲು ಸಜ್ಜಾಗಿದೆ. ಈ ವೇಳೆ ಕಮಲ್ ಹಾಸನ್ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಈ ವೇಳೆ ಡಾ.ರಾಜ್ಕುಮಾರ್ ಕುಟುಂಬದ ಬಗ್ಗೆ ಮಾತನಾಡಿದ್ದಾರೆ.
`ವಿಕ್ರಮ್’ ಚಿತ್ರದ ಪೋಸ್ಟರ್ ಲುಕ್, ಟ್ರೇಲರ್ನಿಂದ ಸಿಕ್ಕಾಪಟ್ಟೆ ಮೋಡಿ ಮಾಡುತ್ತಿದೆ. ಇನ್ನೇನು ತೆರೆಗೆ ಅಪ್ಪಳಿಸಲು ಒಂದೇ ದಿನ ಬಾಕಿಯಿದೆ. ಈ ಸಂದರ್ಭದಲ್ಲಿ ನಟ ಕಮಲ್ ಹಾಸನ್ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಕಮಲ್ ಹಾಸನ್ಗೆ ಕನ್ನಡ ಚಿತ್ರರಂಗದ ಜತೆ ಮತ್ತು ಇಲ್ಲಿನ ಸ್ಟರ್ಸ್ಗಳ ಜೊತೆ ಉತ್ತಮ ಬಾಂದವ್ಯವಿದೆ. ಹಾಗೇಯೇ ಡಾ.ರಾಜ್ಕುಮಾರ್ ಜೊತೆ ಒಳ್ಳೆಯ ಸ್ನೇಹ ಸಂಬಂಧ ಹೊಂದಿರುವ ನಟ ಈಗ ಅಣ್ಣಾವ್ರ ಜತೆಗಿನ ಹಳೆಯ ನೆನಪನ್ನು ತೆರೆದಿಟ್ಟಿದ್ದಾರೆ. ಇದನ್ನೂ ಓದಿ: ಹಿಂದಿ ಕಿರುತೆರೆಗೆ ಜಯರಾಂ ಕಾರ್ತಿಕ್ ಕಂಬ್ಯಾಕ್
- Advertisement3
- Advertisement
ಕಾಲಿವುಡ್ ಸ್ಟಾರ್ ಆಗಿರುವ ಕಮಲ್ ಹಾಸನ್ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಅಣ್ಣಾವ್ರು ನಾನು 21ನೇ ವಯಸ್ಸಿನಲ್ಲಿದ್ದಾಗ ನನ್ನ ನಟನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. `ಪುಷ್ಪಕವಿಮಾನ’ ಚಿತ್ರದ ಮೊದಲ ದಿನದ ಶೂಟಿಂಗ್ಗೆ ಡಾ.ರಾಜ್ಕುಮಾರ್ ಅವರು ಬಂದು ಬೆನ್ನು ತಟ್ಟಿದ್ದರು ಎಂದು ಹಳೆಯ ನೆನಪನ್ನ ಕಮಲ್ ಹಾಸನ್ ಮೆಲುಕು ಹಾಕಿದ್ದಾರೆ.
ನನಗೆ ಕರ್ನಾಟಕ ಸಾಕಷ್ಟು ಗುರುಗಳನ್ನು ಕೊಟ್ಟಿದೆ. ಬೇರೆ ಅವರನ್ನು ನಾವು ಹೇಗೆ ಗೌರವಿಸಬೇಕು ಅಂತಾ ಕಲಿತಿದ್ದೆ ಡಾ.ರಾಜ್ಕುಮಾರ್ ಅವರಿಂದ, ಅವರ ಈ ಗುಣವನ್ನು ಅವರ ಮಕ್ಕಳಿಗೂ ಕಲಿಸಿದ್ದಾರೆ. ನಾನು ಪುನೀತ್ ಮತ್ತು ಅಣ್ಣಾವ್ರು ಇಬ್ಬರನ್ನು ಮಿಸ್ ಮಾಡಿಕೊಳ್ಳುತ್ತೇನೆ ಈ ವೇಳೆ ವಿಕ್ರಮ್ ಚಿತ್ರದ ನಟ ಕಮಲ್ ಹಾಸನ್ ಮಾತನಾಡಿದ್ದಾರೆ.