ಕಲಬುರಗಿ: ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಬಂದ ಬಾರಿ ಸದ್ದಿನಿಂದ ಜನರಿಗೆ ಕಂಪನದ ಅನುಭನ ಉಂಟಾಗಿದೆ.
ಮಧ್ಯಾಹ್ನ 1.27ಕ್ಕೆ ದೊಡ್ಡ ಪ್ರಮಾಣದ ಸದ್ದಿನಿಂದ ಹೆದರಿದ ಅಲ್ಲಿನ ಜನ ಮನೆಯೊಳಗಿಂದ ಹೊರಬಂದಿದ್ದಾರೆ. ಕಳೆದ ವರ್ಷ ಕೂಡಾ ಚಳಿಗಾಲದಲ್ಲಿ ಭೂಮಿಯಿಂದ ವಿಚಿತ್ರ ಸದ್ದು ಬಂದಿತ್ತು. ಇದೀಗ ಮತ್ತೆ ಭೂಮಿಯಿಂದ ಸದ್ದು ಬಂದಿರುವದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.
ರಿಕ್ಟರ್ ಮಾಪನದಲ್ಲಿ ಭೂಕಂಪ ಆಗಿರುವ ಬಗ್ಗೆ ದಾಖಲಾಗಿಲ್ಲ. ಹೀಗಾಗಿ ಗ್ರಾಮದ ಸುತ್ತಮುತ್ತಲಿನಲ್ಲಿರುವ ಕಲ್ಲು ಗಣಿಗಾರಿಕೆಯಲ್ಲಿನ ಸ್ಫೋಟಿಸಿರುವ ಶಬ್ದ ಇರಬಹದು ಎಂದು ಶಂಕಿಸಲಾಗಿದೆ.