ಬೀದಿಗೆ ಬಂದ ಕಲಬುರಗಿಯ ಹೊಸಮಠದ ಜಗಳ

Public TV
1 Min Read
glb peeta f

ಕಲಬುರಗಿ: ತೊಗರಿ ಕಣಜ ಕಲಬುರಗಿಯಲ್ಲಿ ಮಠದ ಪೀಠಕ್ಕಾಗಿ ದಶಕದ ಹಿಂದೆ ರಕ್ತದೋಕುಳಿ ಹರಿದಿದ್ದು ಇತಿಹಾಸ. ಇದೀಗ ಅದೇ ಸಾಲಿಗೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ನರೋಣಾ ಗ್ರಾಮದ ಹೊಸಮಠ ಇದೀಗ ಸುದ್ದಿಯಲ್ಲಿದೆ. ಅಕ್ಟೋಬರ್ 29ರಂದು ಈ ಮಠದ ಪೀಠಾಧಿಪತಿಯಾಗಲು ಶ್ರೀ ಚೆನ್ನಮಲ್ಲದೇವರು ಸಜ್ಜಾಗಿದ್ದಾರೆ.

ಶ್ರೀ ಚೆನ್ನಮಲ್ಲದೇವರು ಪೀಠಾಧಿಪತಿ ಆಗೋದನ್ನು ಈ ಮಠದ ಮೂಲ ಮಠವಾದ ಶ್ರೀಗುರುಬಸವೇಶ್ವರ ಬ್ರಹನ್ಮಠದ ಭಕ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಸ್ವಾಮೀಜಿಯ ಮೇಲೆ ಲೈಂಗಿಕ ಕಿರುಕುಳದ ಆರೋಪವಿದೆ. ಹೀಗಾಗಿ ಮಠದ ಪೀಠ ಸ್ವಿಕರಿಸಲು ಸ್ವಾಮೀಜಿಯನ್ನು ಬಿಡಲ್ಲ ಅಂತಿದ್ದಾರೆ.

GLB Peeta 2 1

ಒಂದೆಡೆ ಚೆನ್ನಮಲ್ಲದೇವರು ಸ್ವಾಮೀಜಿಗೇ ವಿರೋಧವಿದ್ರೆ, ಇತ್ತ ನರೋಣಾ ಗ್ರಾಮದ ಜನ ಶ್ರೀಗಳ ಬೆನ್ನಿಗೆ ನಿಂತಿದ್ದಾರೆ. ಮೂಲ ಮಠದ ವಿರೋಧ ಕುರಿತು ಚೆನ್ನಮಲ ಸ್ವಾಮೀಜಿಯನ್ನು ಕೇಳಿದ್ರೆ, ನಾನೇ ಮೂಲ ಮಠದ ಸ್ವಾಮಿ ಆಗಬೇಕಿತ್ತು. ಆದರೆ ಷಡ್ಯಂತ್ರ ಮಾಡಿ ನನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಲಾಗುತ್ತಿದೆ. ಇದರ ಹಿಂದೆ ಇನ್ನಿತರ ಮಠಾಧೀಶರ ಕೈವಾಡವಿದೆ ಎಂದು ಶ್ರೀ ಚೆನ್ನಮಲ್ಲದೇವರು ಆರೋಪಿಸುತ್ತಾರೆ.

ಮೂಲ ಮಠ ಮತ್ತು ಶಾಖಾ ಮಠದ ಜಗಳದಿಂದ ಇದೀಗ ಗ್ರಾಮದಲ್ಲಿ ಆತಂಕ ಮೂಡಿದೆ. ಈ ಎರಡು ಮಠಗಳ ಜಗಳ ತಾರಕಕೆರುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *