ಕಬಿನಿ ರಭಸಕ್ಕೆ ನೂರಾರು ಎಕರೆ ಜಮೀನು ಬೆಳೆ ನಾಶ- ರೈತರು ಕಂಗಾಲು

Public TV
1 Min Read
MYS 6

-ಪರಿಹಾರಕ್ಕಾಗಿ ಸರ್ಕಾರಕ್ಕೆ ಆಗ್ರಹ

ಮೈಸೂರು: ಕಬಿನಿ ರಭಸಕ್ಕೆ ನೂರಾರು ಎಕರೆ ಜಮೀನು ಬೆಳೆ ನಾಶವಾಗಿದ್ದು, ಇದೀಗ ಹೆಚ್.ಡಿ.ಕೋಟೆ ಬೆಳ್ತೂರು ಗ್ರಾಮದ ರೈತರು ಕಂಗಾಲಾಗಿದ್ದಾರೆ.

ಕೃಷಿ ಮಾಡಲೆಂದು ಇಲ್ಲಿನ ರೈತರು ಬ್ಯಾಂಕ್ ಹಾಗೂ ಸ್ತ್ರೀ ಶಕ್ತಿ ಸಂಘಗಳಿಂದ ಸಾಲ ತಂದು ನಾಟಿ ಮಾಡಿದ್ದರು. ಆದ್ರೆ ಇದೀಗ ಪ್ರವಾಹದ ರಭಸಕ್ಕೆ ಬೆಳೆ ಸಂಪೂರ್ಣ ನಾಶವಾಗಿದ್ದು, ರೈತರು ಆತಂಕಗೊಂಡಿದ್ದಾರೆ.

vlcsnap 2018 08 11 09h23m57s142

ಬೆಳೆ ನಾಶದಿಂದ ಕಂಗೆಟ್ಟ ರೈತರು ಇದೀಗ ನಮಗೆ ಪರಿಹಾರ ಕೊಡಿ ಅಂತ ಆಗ್ರಹಿಸುತ್ತಿದ್ದಾರೆ. ಒಂದು ವೇಳೆ ಸರ್ಕಾರ ನಮಗೆ ಸೂಕ್ತ ಪರಿಹಾರ ನೀಡದೇ ಇದ್ದಲ್ಲಿ ಆತ್ಮಹತ್ಯೆಯ ಮಾರ್ಗ ಹಿಡಿಯುವುದಾಗಿ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಕಬಿನಿ ಜಲಾಶಯದಿಂದ ದಾಖಲೆ ಪ್ರಮಾಣದಲ್ಲಿ ನೀರು ಹೊರಕ್ಕೆ

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಜಲಾಶಯದ ಒಳಹರಿವು 73.300 ಕ್ಯೂಸೆಕ್- ಹೊರಹರಿವು 80.000 ಕ್ಯೂಸೆಕ್ ಆಗಿದ್ದು, ಜಲಾಶಯದಿಂದ ನಾಲೆಗಳಿಗೆ 1200 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇನ್ನು ಜಲಾಶಯದ ಇಂದಿನ ನೀರಿನ ಮಟ್ಟ 2281.41 ಅಡಿಯಾಗಿದ್ದು, ಜಲಾಶಯದ ಗರಿಷ್ಠ ನೀರಿನ ಮಟ್ಟ 2284 ಅಡಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

04 Kabini 1

Share This Article
Leave a Comment

Leave a Reply

Your email address will not be published. Required fields are marked *