ಆನೇಕಲ್/ಚೆನ್ನೈ: ಕಬಡ್ಡಿ ಆಟಗಾರನೊಬ್ಬ ಮೈದಾನದಲ್ಲೇ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ಪಂರುತಿ ಎಂಬಲ್ಲಿ ನಡೆದಿದೆ.
ಮೃತನನ್ನು ವಿಮಲ್ ರಾಜ್ ಎಂದು ಗುರುತಿಸಲಾಗಿದ್ದು, ಇವರು ಪರಂತಿ ಪಕ್ಕದ ಕಾಟಂಪಲಿಯೂರಿನ ಪೆರಿಯಪುರಾಂಗಣಿ ನಿವಾಸಿಯಾಗಿದ್ದು, ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ 2ನೇ ವರ್ಷ ಓದುತ್ತಿದ್ದರು. ನಿನ್ನೆ ಪರುಂತಿ ಸಮೀಪದ ಮಂಡಿಕುಪ್ಪಂನಲ್ಲಿ ತಮಿಳುನಾಡಿನ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿ ರೈಡ್ನಲ್ಲಿದ್ದ ವೇಳೆ ವಿಮಲ್ರಾಜ್ಗೆ ಹೃದಯಾಘಾತವಾಗಿದೆ.
ಎದುರಾಳಿ ಆಟಗಾರನೊಬ್ಬ ಹಿಡಿಯಲು ಹೋದಾಗ ವಿಮಲ್ ರಾಜ್ ಎದೆ ಮೇಲೆ ಬಿದ್ದಿದ್ದ. ಈ ವೇಳೆ ಕೆಳಗೆ ಬಿದ್ದ ವಿಮಲರಾಜ್ ಮೇಲೇಳಲು ಯತ್ನಿಸಿದ್ದಾರೆ. ಆದರೆ ಆಟ ಆಡುತ್ತಲೇ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಕೂಡಲೇ ಆಘಾತಗೊಂಡ ಸಹ ಆಟಗಾರರು ವಿಮಲರಾಜ್ ರಕ್ಷಣೆ ಮಾಡಲು ಯತ್ನಿಸಿದ್ದಾರೆ. ಇದನ್ನೂ ಓದಿ: ಒಪ್ಪಿಗೆಯಿಲ್ಲದೆ ಮದುವೆಯಾಗಿದ್ದ ಅಳಿಯ-ಮಗಳನ್ನ ಕುಡುಗೋಲಿನಿಂದ ಕೊಚ್ಚಿದ ತಂದೆ
ಸಮೀಪದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಕ್ರೀಡಾಪಟು ಕೊನೆಯುಸಿರೆಳೆದಿದ್ದಾರೆ. ವಿಮಲರಾಜ್ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.