ಜೈಪುರ: ಮಾಡೆಲ್ ಒಬ್ಬರು ಹೋಟೆಲ್ ಟೆರೇಸ್ನಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ರಾಜಸ್ಥಾನದ ಜೋಧ್ಪುರದಲ್ಲಿ ನಡೆದಿದೆ.
ಯುವತಿಯನ್ನು ಗುಂಗುನ್ ಉಪಾಧ್ಯಾಯ ಎಂದು ಗುರುತಿಸಲಾಗಿದ್ದು, ಈಕೆ ಓರ್ವ ಮಾಡೆಲ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಜೋಧ್ಪುರ ನಗರದ ನಿವಾಸಿಯಾಗಿದ್ದಾರೆ. ಉದಯಪುರದಿಂದ ಜೋಧ್ಪುರಕ್ಕೆ ಆಗಮಿಸಿದ ಯುವತಿ ಅದೇ ರಾತ್ರಿ ಜೋಧ್ಪುರದ ರತನಾಡ ಪ್ರದೇಶದ ಹೋಟೆಲ್ ಲಾಡ್ರ್ಸ್ ಇನ್ನ ಆರನೇ ಮಹಡಿಯಿಂದ ಜಿಗಿದಿದ್ದಾರೆ.
ಟೆರೇಸ್ ಮೇಲಿನಿಂದ ಜಿಗಿಯುವ ಮುನ್ನ, ಗುಂಗುನ್ ತಂದೆಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ, ತನ್ನನ್ನು ಕೊನೆಯದಾಗಿ ನೋಡುವಂತೆ ಮುಖವನ್ನು ತೋರಿಸಿದ್ದಾರೆ. ಇದನ್ನೂ ಓದಿ: ಪುರುಷರ ಟಾಯ್ಲೆಟ್ಗೆ ನುಗ್ಗಿದ್ದ ದೀಪಿಕಾ ಪಡುಕೋಣೆ, ಆಲಿಯಾ ಭಟ್!
ಈ ವೇಳೆ ಗುಂಗುನ್ ಅವರ ತಂದೆ ಗಣೇಶ್ ಉಪಾಧ್ಯಾಯ ಅವರು ಕೂಡಲೇ ಪೊಲೀಸರಿಗೆ ಕಡೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಗುಂಗುನ್ ಇರುವ ಸ್ಥಳ ಪತ್ತೆ ಹಚ್ಚಿದ ಪೊಲೀಸರು ಸ್ಥಳಕ್ಕೆ ಹೋಗುವ ಮುನ್ನವೇ ಹೋಟೆಲ್ನ ಆರನೇ ಮಹಡಿಯಿಂದ ಜಿಗಿದಿದ್ದಾರೆ. ಇದೀಗ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಲ್ಲದೇ ಗುಂಗುನ್ ಅವರ ಕಾಲು ಮತ್ತು ಎದೆ ಮುರಿದು ಹೋಗಿದೆ. ಸಾಕಷ್ಟು ರಕ್ತಸ್ರಾವವಾಗಿದ್ದರಿಂದ ಇದೀಗ ಅವರಿಗೆ ವೈದ್ಯರು ರಕ್ತ ಕೊಡಿಸುತ್ತಿದ್ದಾರೆ.
ಸದ್ಯ ಗುಂಗುನ್ ಸಾಯುವ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎಂಬುವುದು ಇನ್ನೂ ತಿಳಿದುಬಂದಿಲ್ಲ. ಗುಂಗುನ್ ಸ್ಥಿತಿ ಸದ್ಯ ಗಂಭೀರವಾಗಿದ್ದು, ಈಗಲೇ ಏನನ್ನು ಹೇಳುವ ಸ್ಥಿತಿಯಲ್ಲಿ ಇಲ್ಲ. ಆಕೆಗೆ ಪ್ರಜ್ಞೆ ಬಂದ ನಂತರವಷ್ಟೇ ಸತ್ಯ ಬಹಿರಂಗವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಣಿಪುರ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಟಿಕೆಟ್ ವಂಚಿತರ ಬೆಂಬಲಿಗರಿಂದ ಪ್ರತಿಭಟನೆ