ಶ್ರೀನಗರ: ಬಹಿರ್ದೆಸೆಯ ವಿರುದ್ಧ ಸಮರ ಸಾರಿರುವ ಜಮ್ಮು ಕಾಶ್ಮೀರ ಸರ್ಕಾರ ಕಿಶ್ತ್ವಾರ್ ಜಿಲ್ಲೆಯ ಸುಮಾರು 600 ಸರ್ಕಾರಿ ನೌಕರರು ಮನೆಯಲ್ಲಿ ಶೌಚಾಲಯವನ್ನು ಕಟ್ಟಿಸಿಕೊಂಡಿಲ್ಲ ಎಂದು ಎಲ್ಲರ ಸಂಬಳವನ್ನು ತಡೆಹಿಡಿಯಲಾಗಿದೆ.
ಸಹಾಯಕ ಕಮಿಷನರ್ ಅನಿಲ್ ಕುಮಾರ್ ಚಂದೈಲ್ ಅವರ ವರದಿಯಾನುಸಾರ ಪಡ್ಡರ್ ಬ್ಲಾಕ್ ನ 616 ಸರ್ಕಾರಿ ನೌಕರರ ಮನೆಯಲ್ಲಿ ಶೌಚಾಲಯವಿಲ್ಲ. ವರದಿಯಾನುಸಾರ ಜಿಲ್ಲಾ ಅಭಿವೃದ್ಧಿ ಆಯುಕ್ತರಾದ ಅಂಗ್ರೇಜ್ ಸಿಂಗ್ ರಾಣಾ ಅವರು ಸಂಬಳವನ್ನು ತಡೆಯುವಂತೆ ಆದೇಶವನ್ನು ನೀಡಿದ್ದಾರೆ.
ಚಂದೈಲ್ ಅವರ ವರದಿ ಬಳಿಕ ಬಹಳ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ಸ್ವಚ್ಚ ಭಾರತ ಯೋಜನೆ ಅಡಿಯಲ್ಲಿ ರಾಜ್ಯದ 71.95% ರಷ್ಟು ಮನೆಗಳಲ್ಲಿ ಶೌಚಾಲಯಗಳಿವೆ ಎಂದು ರಾಣಾ ತಿಳಿಸಿದರು.
ಕಿಶ್ತ್ವಾರ್ ಜಿಲ್ಲೆಯಲ್ಲಿ 57.23%, ಲದಾಖ್ ನ ಲೇಹ್ ಮತ್ತು ಕಾರ್ಗಿಲ್ ಜಿಲ್ಲೆ, ದಕ್ಷಿಣ ಕಾಶ್ಮೀರದ ಶೋಪಿಯನ್ ಮತ್ತು ಶ್ರೀನಗರವನ್ನು ಬಯಲು ಮುಕ್ತ ನಗರಗಳಾಗಿ ಘೋಷಿಸಲಾಗಿದೆ. ಆದರೆ ದಕ್ಷಿಣ ಕಾಶ್ಮೀರದಲ್ಲಿ ಅನಂತ್ ನಾಗ್ ಮತ್ತು ಪುಲ್ವಾಮಾ ಜಿಲ್ಲೆಗಳನ್ನು ಏಪ್ರಿಲ್ ಅಂತ್ಯದ ವೇಳೆಗೆ ಬಯಲು ಮುಕ್ತ ನಗರಗಳಾಗಿ ಘೋಷಿಸುವ ಸಾಧ್ಯತೆಗಳಿವೆ.
ಶೌಚಾಲಯ ನಿರ್ಮಾಣದಲ್ಲಿ ಪುಲ್ವಾಮಾ 98.64%, ಅನಂತ್ ನಾಗ್ 98.43%, ಕುಪ್ವಾರಾ 91.92%, ರಾಜೌರಿ 84.53% ಮತ್ತು 72.95% ಕುಲ್ಗಮ್, ದೋಡಾ 68.26%, ಬರಾಮುಲ್ಲಾ 67.59%, ಬಂಡಿಪೊರಾ 67.44%, ರಂಬನ್ 66.74%, ಸಾಂಬಾ 64.21%, ಜಮ್ಮು 63.93%, ಬಡ್ಗಮ್ 62.99%, ಗಂಡರ್ಬಲ್ 62.20%, ಪೂಂಚ್ 61.45%, ರಿಯಾಸಿ 56.09%, ಉಧಮ್ಪುರ್ 48.41%, ಕಥುವಾ ಜಿಲ್ಲೆಯಲ್ಲಿ 45.69% ರಷ್ಟು ಗುರಿ ಸಾಧಿಸಲಾಗಿದೆ ಎಂದು ಹೇಳಿದ್ದಾರೆ.