ಹಾಸನ: ಮುಂದಿನ ಚುನಾವಣೆ (Election) ಯಲ್ಲಿ ಜೆಡಿಎಸ್ (JDS) ಪಕ್ಷ ಬಹಳ ಮುಖ್ಯವಾದ ಪಾತ್ರ ವಹಿಸುತ್ತೆ, ಸರ್ಕಾರ ನಡೆಸುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ (Brahmanda Guruji) ಭವಿಷ್ಯ ನುಡಿದಿದ್ದಾರೆ.
ಎರಡನೇ ಬಾರಿ ಹಾಸನಾಂಬೆ ದೇವಿ (Hasanamba Devi) ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇವೇಗೌಡರಿಗೆ ಪರಿಪೂರ್ಣವಾದಂತಹ ಆರೋಗ್ಯ ಸಿಗಲು ಸಲಹೆ ಕೇಳಿದ್ರು. ದೇವೇಗೌಡರ ಆರೋಗ್ಯಕ್ಕೆ ದೇವಿಯಲ್ಲಿ ಪ್ರಾರ್ಥನೆ ಮಾಡಿ ಅಂತ ಕೇಳಿದ್ರು. ನಾನು ಎರಡು ಮೂರು ಸಲಹೆ ಕೊಟ್ಟಿದ್ದೇನೆ ಎಂದರು.
ರೇವಣ್ಣ (H.D Revanna) ಅವರು ಮೊದಲಿನಿಂದಲೂ ಬಹಳ ಆಸ್ತಿಕರು. ಅವರ ತಂದೆಯವರ ಆರೋಗ್ಯ ಸುಧಾರಿಸುವುದಕ್ಕೋಸ್ಕರ ಏನು ಮಾಡಬಹುದು ಎಂದು ಪರಿಹಾರ ಹೇಳಿ ಎಂದರು. ಅವರ ಆರೋಗ್ಯ ಬಹಳ ಚೆನ್ನಾಗಿರಲಿ. ಯಡಿಯೂರಪ್ಪ (B S Yediyurappa), ಸಿದ್ದರಾಮಯ್ಯ (Siddaramaiah) ಬಂದರು ಆರೋಗ್ಯ ನೋಡಿಕೊಳ್ಳಿ ಅಂತ ಹೇಳ್ತಾರೆ ಎಂದು ಹೇಳಿದರು. ಇದನ್ನೂ ಓದಿ: ದೇವ್ರಾಣೆ ಹೇಳ್ತೀನಿ, 31 ವರ್ಷದೊಳಗೆ ಕರ್ನಾಟಕ ಮೂರು ಭಾಗ ಆಗುತ್ತೆ : ಬ್ರಹ್ಮಾಂಡ ಗುರೂಜಿ ಭವಿಷ್ಯ
ಕರ್ನಾಟಕದಿಂದ ಒಬ್ಬ ರೈತರ ಮತ್ತು ಪ್ರಧಾನಮಂತ್ರಿ ಆಗಿದ್ದಾರೆ. ಲೋಕೋಪಯೋಗಿ ಸಚಿವರಾಗಿ, ಪ್ರಧಾನಮಂತ್ರಿಯಾಗಿ ಎಲ್ಲಾ ಪ್ರಾಜೆಕ್ಟ್ ಗಳಿಗೆ ಅನುಮತಿ ನೀಡಿರುವವರು ದೇವೇಗೌಡರು ಒಬ್ಬರೇ ಎಂದರು. ಇದನ್ನೂ ಓದಿ: ಚೇತನ್ ವಿವಾದಾತ್ಮಕ ಹೇಳಿಕೆಗೆ ನೋ ಕಾಮೆಂಟ್ಸ್ ಎಂದ `ಕಾಂತಾರ’ ನಟ ರಿಷಬ್