Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಜೆಡಿಎಸ್ ಯಾವತ್ತೂ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲ್ಲ: ಚಲುವರಾಯಸ್ವಾಮಿ

Public TV
Last updated: June 16, 2025 8:38 pm
Public TV
Share
3 Min Read
CHALUVARAYASWAMY
SHARE

– ರೇವಣ್ಣ, ಸೂರಜ್, ಪ್ರಜ್ವಲ್ ಯಾರ ನೇತೃತ್ವದಲ್ಲಿ ಬೇಕಾದ್ರೂ ಪಕ್ಷ ಕಟ್ಟಲಿ

ಬೆಂಗಳೂರು: ಜೆಡಿಎಸ್ ಯಾವತ್ತೂ ಸ್ವಂತ ಬಲದಿಂದ ಅಧಿಕಾರಕ್ಕೆ ಬರೋಕೆ ಸಾಧ್ಯವೇ ಇಲ್ಲ ಎಂದು ಹೆಚ್‌ಡಿಕೆಗೆ ಸಚಿವ ಚಲುವರಾಯಸ್ವಾಮಿ (Chaluvaraya Swamy), ಕೇಂದ್ರ ಸಚಿವ ಹೆಚ್‌ಡಿಕೆಗೆ ತಿರುಗೇಟು ನೀಡಿದ್ದಾರೆ.

2028 ಅಧಿಕಾರಕ್ಕೆ ಬರುತ್ತೇವೆ ಎಂಬ ಕುಮಾರಸ್ವಾಮಿ (H D Kumaraswamy) ಹೇಳಿಕೆಗೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ನಮ್ಮನ್ನ ಹೊಗಳೋದಿಲ್ಲ. ಅವರು ವಿಪಕ್ಷದಲ್ಲಿ ಇದ್ದಾರೆ. ಅವರಿಗೆ ಅಧಿಕಾರ ಕೊಟ್ಟಾಗ ಏನು ಮಾಡಲಿಲ್ಲ. 2018ರಲ್ಲಿ ಪೂರ್ಣ ಪ್ರಮಾಣದ ಬಹುಮತ ಬಾರದೇ ಹೋದರೆ, ಪಕ್ಷ ವಿಸರ್ಜನೆ ಮಾಡ್ತೀನಿ ಅಂದ್ರು, ಮಾಡಿದ್ರಾ? 2023ರಲ್ಲೂ ಅದೇ ಹೇಳಿದ್ರು. ನಾನು ಯಾರ ಜೊತೆ ಮೈತ್ರಿಗೆ ಹೋಗಲ್ಲ ಅಂದ್ರು. ಜೆಡಿಎಸ್ ಪಕ್ಷ ಬಿಜೆಪಿ, ಕಾಂಗ್ರೆಸ್‌ನ್ನು ಓವರ್ ಟೇಕ್ ಮಾಡಿ ಅಧಿಕಾರಕ್ಕೆ ಬರಲು ಆಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಶಬರಿಮಲೆ ಬೆಟ್ಟ ಇಳಿಯುವಾಗ ಹೃದಯಾಘಾತ – 18 ವರ್ಷದ ಅಯ್ಯಪ್ಪ ಭಕ್ತ ಸಾವು

ಬಿಜೆಪಿ, ಜೆಡಿಎಸ್‌ನ್ನು (JDS) ಜನ ತಿರಸ್ಕಾರ ಮಾಡಿದ್ದಾರೆ. ಅವರಿಗೆ ಯಾವತ್ತು ಬಹುಮತ ಬಂದಿಲ್ಲ. ಬಹುಮತ ಬಾರದೇ ಇರೋರು ಮಾತಾಡೋದು ಗಾಳಿಯಲ್ಲಿ ಗುಂಡು ಹೊಡೆಯುವ ಹೇಳಿಕೆ ಅಲ್ವಾ? ಕುಮಾರಸ್ವಾಮಿ ಅವರು ಏನೇ ಹೇಳಿದ್ರು ನೀವು ಹಾಕ್ತೀರಾ. ಕುಮಾರಸ್ವಾಮಿ ನಾಯಕತ್ವ ಬಂದ ಮೇಲೆ ಯಾವತ್ತು ಬಹುಮತ ಬಂದಿಲ್ಲ ಎಂದಿದ್ದಾರೆ. ಇದನ್ನೂ ಓದಿ: 3 ದಿನದೊಳಗೆ ಉತ್ತರಿಸಿ – ಕಾಂತಾರ ತಂಡಕ್ಕೆ ನೋಟಿಸ್

ಕುಮಾರಸ್ವಾಮಿ ಗೆಲ್ಲೋಕೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರು. ಉಪ ಚುನಾವಣೆಯಲ್ಲಿ ನಮಗೆ ಜನ ಆಶೀರ್ವಾದ ಮಾಡಿದ್ರು. ಎಂಪಿ ಎಲೆಕ್ಷನ್‌ನಲ್ಲಿ 9 ಸ್ಥಾನ ಜಾಸ್ತಿ ಮಾಡಿಕೊಂಡಿದ್ದೇವೆ. ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಯಾರು ಮಾತಾಡಿಲ್ಲ. ಅವರನ್ನು ಯಾರು ಕಾಂಗ್ರೆಸ್‌ಗೆ ಕರೆದಿಲ್ಲ. ಕುಮಾರಸ್ವಾಮಿ ಅರೋಗ್ಯ ಚೆನ್ನಾಗಿ ಇರಲಿ. ಆರೋಗ್ಯಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಅವರ ತಂದೆ ಸಕ್ರಿಯವಾಗಿ ಇದ್ದಾರೆ. ಹೀಗಿದ್ರು ರಾಜ್ಯದಲ್ಲಿ ಜೆಡಿಎಸ್ ಶಕ್ತಿ ಕ್ಷೀಣವಾಗಿದೆ ಎಂದು ತಿಳಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನೇತೃತ್ವದ ಪಕ್ಷ ಕಟ್ಟುತ್ತೇನೆ ಎಂದರೆ ಕಟ್ಟಲಿ. ರೇವಣ್ಣ, ಸೂರಜ್, ಪ್ರಜ್ವಲ್ ಯಾರ ನೇತೃತ್ವದಲ್ಲಿ ಬೇಕಾದರೂ ಪಕ್ಷ ಕಟ್ಟಲಿ. ಅದು ಅವರ ಪಕ್ಷದ ವಿಚಾರ. ಅವರಲ್ಲಿ ಆ ಕುಟುಂಬ ಹೇಳಿದ್ದೇ ನಡೆಯೋದು. ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್‌ನ್ನು ಟೀಕೆ ಮಾಡುವ ನೈತಿಕತೆ ಇಲ್ಲ. ಕುಮಾರಸ್ವಾಮಿ ಯಾವ ಗ್ಯಾರಂಟಿ ಕೊಡೋಕೆ ಆಗಲಿಲ್ಲ. ಕುಮಾರಸ್ವಾಮಿ ಸಾಲಮನ್ನಾ ಮಾಡಿದ್ದು, ಇನ್ನೂ 8 ಸಾವಿರ ಕೋಟಿ ರೂ. ಬಾಕಿ ಇದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಜನಗಣತಿಗೆ ಕೇಂದ್ರದಿಂದ ಅಧಿಸೂಚನೆ – ಸರ್ಕಾರದ ನಿರ್ಧಾರ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸಿದ್ದರಾಮಯ್ಯ (Siddaramaiah) ಅವರು ಘೋಷಣೆ ಮಾಡಿದ್ರೆ, ಅದೇ ವರ್ಷ ಜಾರಿ ಮಾಡ್ತೇವೆ. ಅವರು ಯಾವ ನೈತಿಕತೆಯಿಂದ ನಮ್ಮ ಪಕ್ಷವನ್ನ ಟೀಕೆ ಮಾಡ್ತಾರೆ ಗೊತ್ತಿಲ್ಲ. ನಮ್ಮ ಪಕ್ಷ ಸದೃಢವಾಗಿದೆ. ನಮ್ಮ ನಾಯಕತ್ವ ಗಟ್ಟಿಯಾಗಿದೆ. ಜೆಡಿಎಸ್ ರಾಮನಗರದಲ್ಲಿ ಝೀರೋ ಲೆವೆಲ್‌ಗೆ ಬಂದಿದೆ. ತಮ್ಮ ಮಗನನ್ನ ಗೆಲ್ಲಿಸಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ಜೆಡಿಎಸ್‌ಗೆ ಹಿನ್ನಡೆ ಆಗಿದೆ. ಕುಮಾರಸ್ವಾಮಿ ಅಸ್ಥಿತ್ವ ಉಳಿಸಿಕೊಳ್ಳೋಕೆ ಮಾತಾಡ್ತಾರೆ ಅಷ್ಟೆ. ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಶೂಟಿಂಗ್ ಮುಗಿಸಿದ ಸತೀಶ್ ನೀನಾಸಂ, ಸಪ್ತಮಿ ನಟನೆಯ ʻದಿ ರೈಸ್ ಆಫ್ ಅಶೋಕʼ

ಬೆಲೆ ಏರಿಕೆ ಮಾಡಿ ಗ್ಯಾರಂಟಿ ಕೊಡೋದಾಗಿದ್ರೆ ನಾನು ಕೊಡ್ತಿದ್ದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಟೀ ಅಂಗಡಿ, ಬಟ್ಟೆ ಅಂಗಡಿ ಎಲ್ಲದ್ರಲ್ಲೂ ಪ್ರತಿ ವರ್ಷ ಜಾಸ್ತಿ ಮಾಡ್ತಾರೆ. ಸಂಬಳ ಜಾಸ್ತಿ ಮಾಡಿದ್ದೇವೆ. ಬೆಲೆ ಏರಿಕೆ ಮಾಡದೇ ಸರ್ಕಾರ ನಡೆಸಲು ಆಗುವುದಿಲ್ಲ. ಮನಮೋಹನ್ ಸಿಂಗ್ ಇದ್ದಾಗ ಪೆಟ್ರೋಲ್, ಡಿಸೇಲ್ ಎಷ್ಟಿತ್ತು? ಈಗ ಎಷ್ಟಾಗಿದೆ. ಏನಾದ್ರು ಟೀಕೆ ಮಾಡೋದಾದ್ರೆ ಮಾಹಿತಿ ಇಟ್ಟುಕೊಂಡು ಟೀಕೆ ಮಾಡಿ. ಟೀಕೆ ಮಾಡಬೇಕೆಂದು ಟೀಕೆ ಮಾಡೋದು ಸರಿಯಲ್ಲ ಗುಡುಗಿದ್ದಾರೆ.

ಸರ್ಕಾರ ಮಾತು ಕೊಟ್ಟಂತೆ ಗ್ಯಾರಂಟಿ ಕೊಟ್ಟಿದ್ದೇವೆ. ಕುಮಾರಸ್ವಾಮಿ ಏನು ಮಾಡಿದ್ದಾರೆ ಹೇಳಲಿ. ಟ್ಯಾಕ್ಸ್ ಜಾಸ್ತಿ ಮಾಡಿರೋದು ರೊಟೀನ್ ವಿಷಯ. ಆಗಾಗ ಮಾಡ್ತಿರಬೇಕು. ಹಾಸನ, ಮಂಡ್ಯ, ರಾಮನಗರ ಏನು ಅಭಿವೃದ್ಧಿ ಆಗಿದೆ ಕುಮಾರಸ್ವಾಮಿ ಹೇಳಲಿ. ಅವರು ರಾಜಕೀಯ ಹಾಗೂ ಅಭಿವೃದ್ಧಿ ವಿಚಾರದಲ್ಲೂ ಅವರು ಹಿಂದೆ ಬಿದ್ದಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಅನ್ನು ಯಾಕೆ ಟೀಕೆ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಾವಿನಲ್ಲಿ ವಿಪಕ್ಷಗಳು ರಾಜಕೀಯ ಮಾಡೋದು ಬಿಡಲಿ: ಚಲುವರಾಯಸ್ವಾಮಿ

ಒಂದು ಪಕ್ಷವೇ ಕುಟುಂಬಕ್ಕೆ ಮಾಡಿಕೊಂಡಿರೋ ಪಕ್ಷ ಜೆಡಿಎಸ್. ಇಡೀ ಕುಟುಂಬ ಅವರ ಪಕ್ಷ ಆವರಿಸಿಕೊಂಡಿದೆ. ಅವರ ಮನೆಯಲ್ಲಿ ಎಷ್ಟು ಜನ ಇದ್ದಾರೆ ನಿಂತುಕೊಳ್ಳಿ. ನಮಗೇನು ಹೊಟ್ಟೆ ಉರಿ ಇಲ್ಲ ಅಂತ ಟಾಂಗ್ ಕೊಟ್ಟಿದ್ದಾರೆ.

TAGGED:bengaluruChaluvaraya SwamycongressjdsKumaraswamyಚಲುವರಾಯ ಸ್ವಾಮಿಬೆಂಗಳೂರುಹೆಚ್ ಡಿ ಕುಮಾರಸ್ವಾಮಿ
Share This Article
Facebook Whatsapp Whatsapp Telegram

Cinema news

Actress Amala
ನಾಗಚೈತನ್ಯ ಬಗ್ಗೆ ಮಲತಾಯಿ ನಟಿ ಅಮಲಾ ಮಾತು
Cinema Latest South cinema Top Stories
balaramana dinagalu
ಬಹುಕೋಟಿ ವೆಚ್ಚದಲ್ಲಿ ತಯಾರಾಗ್ತಿದೆ ಬಲರಾಮನ ದಿನಗಳು
Cinema Latest South cinema Top Stories
ashwini gowda
ʻನನ್ ತಲೇಲಿ ಬುದ್ಧಿ ಇಲ್ಲ’ ಹೇಳಲು ಅಶ್ವಿನಿ ಒಪ್ಪಲ್ಲ!
Cinema Latest TV Shows
Bigg Boss
ಗಿಲ್ಲಿ ಜೊತೆ ಕಿರಿಕ್ ಮಾಡ್ಕೊಂಡ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳು
Cinema Latest Sandalwood Top Stories

You Might Also Like

Sri Niranjanananda Puri Swamiji Sri Kanaka Guru Peeta Kaginele
Districts

ಮಠಾಧೀಶರು ಹೇಳಿದ ತಕ್ಷಣ ಸಿಎಂ ಆಗಲು ಅವಕಾಶ ಇದ್ಯಾ – ಕಾಗಿನೆಲೆ ಶ್ರೀ ಪ್ರಶ್ನೆ

Public TV
By Public TV
3 minutes ago
ED Raids
Bengaluru City

ಸಚಿವರ ಆಪ್ತರ ರಿಯಲ್‌ ಎಸ್ಟೇಟ್‌ ಬಿಲ್ಡರ್‌ ಮೇಲೆ ಇಡಿ ದಾಳಿ

Public TV
By Public TV
42 minutes ago
Someshwar Temple
Bengaluru City

ಡಿವೋರ್ಸ್ ಕೇಸ್‌ಗಳಿಗಾಗಿ ಅರ್ಚಕರ ಅಲೆದಾಟ – ಸೋಮೇಶ್ವರ ದೇಗುಲದಲ್ಲಿ ಮದುವೆ ಬಂದ್

Public TV
By Public TV
55 minutes ago
ias officer mahantesh bilagis last rites held in ramadurga
Belgaum

ಐಎಎಸ್​ ಅಧಿಕಾರಿ ಮಹಾಂತೇಶ ಬೀಳಗಿ ಪಂಚಭೂತಗಳಲ್ಲಿ ಲೀನ

Public TV
By Public TV
1 hour ago
Droupadi Murmu
Latest

9 ಭಾಷೆಗಳಲ್ಲಿ ಭಾರತ ಸಂವಿಧಾನದ ಡಿಜಿಟಲ್ ಆವೃತ್ತಿ ಬಿಡುಗಡೆಗೊಳಿಸಿದ ರಾಷ್ಟ್ರಪತಿ ಮುರ್ಮು

Public TV
By Public TV
1 hour ago
Chitradurga court acquits Shivamurthy Murugha Sharana and two others accused under POCSO Act
Chitradurga

ಪೋಕ್ಸೋ ಮೊದಲ ಕೇಸಲ್ಲಿ ಮುರುಘಾ ಶ್ರೀ ಖುಲಾಸೆ – ಕೋರ್ಟ್‌ ಆದೇಶದಲ್ಲಿ ಏನಿದೆ?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?