ಬೀದರ್: ಮಗನ ಗೆಲುವಿಗಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ (C.M.Ibrahim) ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರು ಹಾಕಿದ ಘಟನೆ ಬೀದರ್ (Bidar) ಜಿಲ್ಲೆಯ ಚಿಟ್ಟಗುಪ್ಪ ದರ್ಗಾದಲ್ಲಿ ನಡೆದಿದೆ.
ಹಜ್ರತ್ ಸಯ್ಯದ್ ಮಖ್ಬೂಬ್ ಹುಸೇನಿ ದರ್ಗಾಕ್ಕೆ ಪುತ್ರನ ಜೊತೆ ಭೇಟಿ ನೀಡಿದ ವೇಳೆ ಸಿ.ಎಂ ಇಬ್ರಾಹಿಂ ದರ್ಗಾದ ಗೋರಿಯ ಮುಂದೆ ನಿಂತು ಬಿಕ್ಕಿ ಬಿಕ್ಕಿ ಅಳುತ್ತಾ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ರಾಜಕೀಯದಲ್ಲಿ ಟಾಪ್ ಲೀಡರ್ಗಳ ಮೇಲೆ ಟಾರ್ಗೆಟ್ ಮಾಡುವುದು ಸಹಜ: ಸತೀಶ್ ಜಾರಕಿಹೊಳಿ
700 ಕಿಮೀ ದೂರದಿಂದ ಮಗ ಇಲ್ಲಿಗೆ ಬಂದಿದ್ದಾನೆ. ನನ್ನ ಮಗನನ್ನು ನೀನೇ ರಕ್ಷಿಸಬೇಕು. ಅವನಿಗೆ ಜಯವನ್ನು ಕರುಣಿಸಬೇಕು. ಅವನನ್ನು ಕಾಪಾಡಬೇಕು. ನನಗೆ ಇರುವುದು ಒಬ್ಬ ಮಗ. ಆ ಮಗನಿಗೆ ಆಶೀರ್ವಾದ ಮಾಡಿ ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿಕೊಡು ದೇವ ಎಂದು ಬೇಡಿಕೊಂಡಿದ್ದಾರೆ.
ದೇವರ ಮುಂದೆ ಪ್ರಾರ್ಥನೆ ಸಲ್ಲಿಸುವಾಗ ಭಾವುಕರಾಗಿ ಕಣ್ಣೀರು ಬರುವುದು ನಿಜ. ಆದರೆ ಸಿ.ಎಂ. ಇಬ್ರಾಹಿಂ ಆ ಭಾಗದ ಮುಸ್ಲಿಮರನ್ನು ಓಲೈಸುವುದಕ್ಕಾಗಿ ದರ್ಗಾದಲ್ಲಿ ಕಣ್ಣೀರು ಹಾಕಿದರೆ ಎಂಬ ಮಾತುಗಳು ಕೇಳಿ ಬಂದಿವೆ. ಈಗಾಗಲೇ ಹುಮ್ನಾಬಾದ್ ಕ್ಷೇತ್ರದಿಂದ ಸಿ.ಎಂ. ಇಬ್ರಾಹಿಂ ಪುತ್ರ ಫೈಜ್ಗೆ ಜೆಡಿಎಸ್ ಟಿಕೆಟ್ ಘೋಷಣೆಯಾಗಿದ್ದು, ಪುತ್ರನ ಜೊತೆ ಸಿ.ಎಂ. ಇಬ್ರಾಹಿಂ ಕಣ್ಣೀರು ಹಾಕುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಜೆಡಿಎಸ್ ಶಾಸಕ ಶಿವಲಿಂಗೇಗೌಡ 100% ಕಾಂಗ್ರೆಸ್ ಸೇರ್ಪಡೆಯಾಗ್ತಾರೆ: ಸಿದ್ದರಾಮಯ್ಯ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k