ಬೆಂಗಳೂರು: ಲೋಕಸಭಾ ಚುನಾವಣಾ ಪ್ರಚಾರದ ಬ್ಯುಸಿ ಮಧ್ಯೆಯೇ ಗುಪ್ತಚರ ಇಲಾಖೆಯ ವರದಿಯೊಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೈ ಸೇರಿದ್ದು, ಮಾಹಿತಿಯಿಂದ ದೋಸ್ತಿ ಪಕ್ಷದ ವಿರುದ್ಧವೇ ಸಿಎಂ ಅನುಮಾನ ಪಡುವಂತಾಯ್ತಾ ಅನ್ನೋ ಪ್ರಶ್ನೆಯೊಂದು ಮೂಡಿದೆ.
ಹೌದು. ಮೈತ್ರಿಯಿಂದ ಜೆಡಿಎಸ್ಗೆ ಹೆಚ್ಚಿನ ಲಾಭವಿಲ್ಲ ಎಂಬ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಮಾಹಿತಿಯು ಮುಖ್ಯಮಂತ್ರಿಯವರ ಕೈ ಸೇರಿದೆ ಎನ್ನಲಾಗಿದೆ.
ಕಾಂಗ್ರೆಸ್ ಸ್ಪರ್ಧೆ ಮಾಡಿರುವ ಕಡೆಗಳಲ್ಲಿ ಜೆಡಿಎಸ್ನಿಂದ ಸಣ್ಣ ಮಟ್ಟದ ಬೆಂಬಲ ಸಿಗಲಿದೆ. ಆದ್ರೆ ಜೆಡಿಎಸ್ ಸ್ಪರ್ಧಿಸಿರೋ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಿಂದ ಹೆಚ್ಚಿನ ನೆರವು ಸಿಗೋದು ಅನುಮಾನ ಎಂದು ಗುಪ್ತಚರ ವರದಿಯಿಂದ ತಿಳಿದುಬಂದಿದೆ.ವಿಶೇಷವಾಗಿ ಮಂಡ್ಯ, ಹಾಸನ, ತುಮಕೂರಿನಲ್ಲೇ ಮೈತ್ರಿ ನೆರವು ಸಿಗೋದು ಅನುಮಾನವಾಗಿದೆ. ಈ ಮೂಲಕ ದೊಡ್ಡ ದೊಡ್ಡ ನಾಯಕರುಗಳು ಸ್ಪರ್ಧೆ ಮಾಡಿದ್ರೂ ಮುನಿಸು ಮರೆಯಾಗಿಲ್ಲ ಎನ್ನಲಾಗುತ್ತಿದ್ದು, ಕೈ ಕಾರ್ಯಕರ್ತರು ಜೆಡಿಎಸ್ ಪರವಾಗಿ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
ಒಟ್ಟಿನಲ್ಲಿ ಗುಪ್ತಚರ ಇಲಾಖೆ ವರದಿ ಪ್ರಕಾರ ಜೆಡಿಎಸ್ಗೆ ದೋಸ್ತಿಯಿಂದ ಪ್ರಯೋಜನ ಇಲ್ಲವೆಂಬುದು ಜೆಡಿಎಸ್ ಪಾಲಿಗೆ ಗಂಟಲಲ್ಲಿ ಸಿಕ್ಕ ಬಿಸಿ ತುಪ್ಪದಂತಾಗಿದೆ.