ಬೆಂಗಳೂರು: ಪೊಲೀಸರ ಕಣ್ತಪ್ಪಿಸಲು ಹೋದ ಟ್ರಕ್ ಚಾಲಕನೊಬ್ಬ ಎಡವಟ್ಟು ಮಾಡಿಕೊಂಡಿದ್ದಾನೆ.
- Advertisement 2
- Advertisement 3
ಬೆಂಗಳೂರಿನ ಓಕಳೀಪುರಂನಲ್ಲಿ ರೈಲ್ವೇ ಅಂಡರ್ಪಾಸ್ನಲ್ಲಿ ಬೃಹತ್ ಜೆಸಿಬಿ ಸಿಲುಕಿಕೊಂಡ ಘಟನೆ ನಡೆದಿದೆ. ಲಾರಿ ಚಾಲಕ ಪೊಲೀಸರ ಕಣ್ತಪ್ಪಿಸಲು ಹೋಗಿ ಜೆಸಿಬಿ ಸಿಲುಕಿದೆ. ಟ್ರಕ್ ಮೇಲಿದ್ದ ಜೆಸಿಬಿ ರೈಲ್ವೆ ಟ್ರ್ಯಾಕ್ ಗೆ ತಗುಲಿಕೊಂಡಿದೆ. ಪರಿಣಾಮ ಮೆಜೆಸ್ಟಿಕ್- ಓಕಳಿಪುರಂ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಫುಲ್ ಜಾಮ್ ಆಗಿತ್ತು.
- Advertisement 4
ಜೆಸಿಬಿ ತುಂಬಿದ್ದ ಲಾರಿ ಯಲಹಂಕದ ಕೊಗಿಲುನಿಂದ ಬರುತ್ತಿತ್ತು ಎಂದು ತಿಳಿದುಬಂದಿದೆ. ಅಂಡರ್ಪಾಸ್ನಲ್ಲಿ ಸಿಲುಕಿರೋ ಜೆಸಿಬಿ ಇರುವ ಲಾರಿಯನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಮಾಡಿದ್ದಾರೆ. ಗ್ಯಾಸ್ ಕಟರ್ ಬಳಸಿ ಜೆಸಿಬಿ ಮೆಲ್ಭಾಗ ಕಟ್ ಮಾಡಿದ್ದಾರೆ.