ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

Public TV
1 Min Read
jayashree 1

ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಊಹೆಗೂ ಮೀರಿದ ಟ್ವೀಸ್ಟ್‌ಗಳು ನಡೆಯುತ್ತಿದೆ. ದಿನ ಕಳೆದಂತೆ ಮನೆಯ ರಂಗು ಹೆಚ್ಚುತ್ತಿದೆ. ಬಿಗ್ ಬಾಸ್ ಓಟಿಟಿ ಮುಗಿಯಲು ಎರಡು ವಾರಗಳಿವೆ. ಇದೀಗ ಒಬ್ಬಬ್ಬರೇ ಮನೆಯಿಂದ ಎಲಿಮೀನೇಟ್ ಆಗಿ ಹೊರಬರುತ್ತಿದ್ದಾರೆ. ಆದರೆ ಈ ವಾರದ ಡಬಲ್ ಎಲಿಮಿನೇಷನ್ ಮನೆಮಂದಿಗೆ ಶಾಕ್ ಕೊಟ್ಟಿದೆ. ದೊಡ್ಮನೆಯಿಂದ ಚೈತ್ರಾ ಹಳ್ಳಿಕೇರಿ ಮತ್ತು ಅಕ್ಷತಾ ಕುಕ್ಕಿ ಹೊರನಡೆದಿದ್ದಾರೆ. ಈ ಎಲ್ಲಾ ಬೆಳವಣಿಕೆಗಳ ನಡುವೆ ಜಯಶ್ರೀ ಆರಾಧ್ಯಗೆ ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. ದೊಡ್ಮನೆಯಲ್ಲಿ ಎದೆ ಬಡಿದುಕೊಂಡು ಜಯಶ್ರೀ ಕಣ್ಣೀರಿಟ್ಟಿದ್ದಾರೆ.

jayashree

ದೊಡ್ಮನೆ ಬಿಗ್ ಬಾಸ್ ಸಾಕಷ್ಟು ವಿಚಾರವಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯ ಆಟ ಮತ್ತಷ್ಟು ಟಫ್ ಆಗುತ್ತಿದೆ. ಇದೀಗ ಬಿಗ್ ಬಾಸ್ ಮನೆಯಿಂದ ನಾಲ್ಕನೇ ವಾರಕ್ಕೆ ಚೈತ್ರಾ ಮತ್ತು ಅಕ್ಷತಾ ಕುಕ್ಕಿ ಔಟ್ ಆಗಿದ್ದಾರೆ. ಆತ್ಮೀಯ ಗೆಳತಿ ಚೈತ್ರಾ ಅವರಿಗಾಗಿ ಜಯಶ್ರೀ ಗಳಗಳನೆ ಅತ್ತಿದ್ದಾರೆ.

jayashree bigg boss

ಜಯಶ್ರೀ ಅವರಿಗೆ ಮೊದಲಿನಿಂದಲೂ ಚೈತ್ರ ಅವರಿರೊಂದಿಗೆ ಒಳ್ಳೆಯ ಒಡನಾಟವಿತ್ತು. ಮನೆಯಲ್ಲಿ ಇದ್ದಷ್ಟು ದಿನ ಒಬ್ಬರಿಗೊಬ್ಬರು ಕೆಲಸಗಳಲ್ಲಿ ಮತ್ತು ಟಾಸ್ಕ್ನಲ್ಲಿ ಸಾಥ್ ನೀಡುತ್ತಲೇ ಬಂದಿದ್ದರು. ಆದರೆ ಈಗ ಮನೆಯಿಂದ ಚೈತ್ರ ಹೊರನಡೆದಿರುವುದು ಜಯಶ್ರೀ ಅವರಿಗೆ ಒಂಟಿತನ ಕಾಡಿದೆ. ಚೈತ್ರಾ ಎಲಿಮಿನೇಟ್ ಆದ ದಿನವೇ ಜಯಶ್ರೀ ಸಿಕ್ಕಾಪಟ್ಟೆ ಕಣ್ಣೀರು ಹಾಕಿದ್ದರು. ಬಿಗ್ ಬಾಸ್ ನನಗೆ ಇಲ್ಲಿ ಇರಲು ಆಗುತ್ತಿಲ್ಲ. ತುಂಬಾ ಒಂಟಿತನ ಫೀಲ್ ಆಗುತ್ತಿದೆ. ತುಂಬಾ ವೀಕ್ ಆದಂತೆ ಅನಿಸುತ್ತಿದೆ. ಎಂದು ಗಳಗಳನೆ ಅತ್ತಿದ್ದಾರೆ. ಈ ವೇಳೆ ಇತರ ಸ್ಪರ್ಧಿಗಳು ಸಮಾಧಾನಿಸಲು ಪ್ರಯತ್ನ ಪಟ್ಟಿದ್ದಾರೆ. ಇದನ್ನೂ ಓದಿ:ಪ್ರೀ ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಮಿಂಚಿದ `ಕಮಲಿ’ ಖ್ಯಾತಿಯ ಗೇಬ್ರಿಯೆಲಾ- ಸುಹಾಸ್

jayashree

ಹೊರಗಡೆ ಜೀವನದಲ್ಲಿ ಈ ರೀತಿ ಆದಾಗ ಬೇರೆ ಆಯ್ಕೆ ಇರುತ್ತದೆ. ಮೊಬೈಲ್ ಇರುತ್ತದೆ. ಆದರೆ ಇಲ್ಲಿ ಸಂಪೂರ್ಣ ಒಂಟಿ ಎಂದೆನಿಸುತ್ತಿದೆ ಎಂದು ಜಯಶ್ರೀ ಹೇಳಿಕೊಂಡಿದ್ದಾರೆ. ಚೈತ್ರ ಅವರಿಗಾಗಿ ಜಯಶ್ರೀ ಭಾವುಕರಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article