ಚೆನ್ನೈ: ಎಐಎಡಿಎಂಕೆ ನಾಯಕರೊಬ್ಬರು ತಮ್ಮ ಮಗನ ಮದುವೆಯನ್ನು ಜಯಲಲಿತಾ ಸಮಾಧಿ ಎದುರು ಮಾಡಿಸಿದ್ದಾರೆ.
ಎಐಎಡಿಎಂಕೆ ನಾಯಕ ಭವಾನಿಶಂಕರ್ ಅವರು ತಮ್ಮ ಮಗ ಸತೀಶ್ ಮದುವೆಯನ್ನು ದೀಪಿಕಾ ಎಂಬವರ ಜೊತೆ ಸಾಂಪ್ರದಾಯಿಕವಾಗಿ ಮಾಡಿಸಿದ್ದಾರೆ. ವಧು-ವರರು ಸಮಾಧಿಯ ಬಲಭಾಗದಲ್ಲಿ ಕುಳಿತು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸತೀಶ್ ಹಾಗೂ ದೀಪಿಕಾ ಮದುವೆಗೆ ಇಬ್ಬರು ಕಡೆಯವರ ಅತಿಥಿಗಳು ಹಾಗೂ ಸಂಬಂಧಿಕರು ಭಾಗಿಯಾಗಿದ್ದರು. ಬುಧವಾರ ಮದುವೆ ಇದ್ದ ಹಿನ್ನೆಲೆಯಲ್ಲಿ ಜಯಲಲಿತಾ ಅವರ ಸಮಾಧಿಯನ್ನು ಹೂ ಹಾಗೂ ಹೂವಿನ ಮಾಲೆಯಿಂದ ಅಲಂಕರಿಸಲಾಗಿತ್ತು.
ಮದುವೆ ಕಾರ್ಯಕ್ರಮ ಮುಗಿದ ನಂತರ ಜಯಲಲಿತಾ ಅವರ ಸಮಾಧಿಗೆ ಆರತಿ ಮಾಡಲಾಯಿತು. ಜಯಲಲಿತಾ ಅವರ ಸಮಾಧಿ ಎದುರು ಮದುವೆ ಆಯೋಜಿಸಲು ಅಧಿಕಾರಿಗಳಿಂದ ಅನುಮತಿ ಪಡೆಯಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
ಜಯಲಲಿತಾ ಅವರಿಗೆ 2016ರ ಸೆಪ್ಟೆಂಬರ್ 22 ರಿಂದ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಸತತ 72 ದಿನಗಳ ಕಾಲ ಸಾವು-ಬದುಕಿನ ಹೋರಾಟ ನಡೆಸಿ, ಡಿಸೆಂಬರ್ 5 ರಂದು ವಿಧಿವಶರಾಗಿದ್ದರು.