ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಶಶಿಕಲಾಗೆ ಶಿಕ್ಷೆಯಾಗೋಕಿಂತ ದೊಡ್ಡಮ್ಮನನ್ನ ಕೊಲೆ ಮಾಡಿರೋ ಪ್ರಕರಣದಲ್ಲಿ ಶಿಕ್ಷೆಯಾಗಿದ್ದಿದ್ರೆ ಖುಷಿಯಾಗ್ತಿತ್ತು. ಹೀಗಂತ ದಿವಂಗತ ಜಯಲಲಿತಾ ಅವರ ತಂಗಿ ಶೈಲಜಾ ಅವರ ಮಗಳು ಅಮೃತಾ ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕೊಲೆ ಅಂತ ಸಾಬೀತಾಗಿ ಶಶಿಕಲಾಗೆ ಶಿಕ್ಷೆಯಾದ ಬಳಿಕವೇ ನಾನು ದೊಡ್ಡಮ್ಮನ ಸಮಾಧಿಗೆ ಹೋಗಿ ಅವರ ಶವ ತೆಗೆದು ಅಯ್ಯಂಗಾರ್ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸುತ್ತೇನೆ ಅಂತಾ ಪ್ರತಿಜ್ಞೆ ಮಾಡಿದ್ದಾರೆ.
- Advertisement 2-
ಇಷ್ಟು ದಿನ ದೊಡ್ಡಮ್ಮನ ಮುಂದೆ ಮುಖವಾಡ ಹಾಕಿಕೊಂಡಿದ್ದವರ ನಿಜ ಮುಖ ಈಗ ಗೊತ್ತಾಗ್ತಿದೆ. ಅಜಿತ್ ಬಗ್ಗೆ ದೊಡ್ಡಮ್ಮನಿಗೆ ಅಭಿಮಾನವಿತ್ತು ಅಷ್ಟೆ. ಅವರನ್ನ ಸಿಎಂ ಮಾಡೋ ಆಸೆ ಇರಲಿಲ್ಲ ಅಂದಿದ್ದಾರೆ. ಶಶಿಕಲಾಗಿಂತಲೂ ದೀಪಾ ತುಂಬಾ ಡೇಂಜರ್. ಶಶಿಕಲಾ ನೇರವಾಗಿ ಚೂರಿ ಹಾಕಿದ್ರೆ, ದೀಪಾ ಬೆನ್ನಿಗೆ ಚೂರಿ ಹಾಕ್ತಾಳೆ ಅಂತ ಅಮೃತಾ ಹೇಳಿದ್ರು.