ಐಟಿ, ಇಡಿ ದಾಳಿಗೊಳಗಾದ ಸಿಎಂ ಆಪ್ತರಿಗಿಲ್ಲ ರಿ-ಪೋಸ್ಟಿಂಗ್ ಭಾಗ್ಯ!

Public TV
1 Min Read
Jayachanda chikkarayappa m

ಬೆಂಗಳೂರು: ಐಟಿ ದಾಳಿ, ಇಡಿ ಶಾಕ್‍ನಿಂದ ನಲುಗಿ ಹೋಗಿದ್ದ ಸಿಎಂ ಆಪ್ತರಿಗೆ ಈಗ ಮತ್ತೆ ರೀ-ಪೋಸ್ಟಿಂಗ್ ಇಲ್ಲವಾಗಿದೆ. ದಾಳಿ ಮುಗಿದು ವರ್ಷವಾದ್ರೂ ಮತ್ತೆ ನೌಕರಿ ಕೊಡೋಕೆ ಯಾರು ಸಿದ್ಧರಿಲ್ಲ.

chikkarayapp

ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಯೋಜನಾಧಿಕಾರಿ ಜಯಚಂದ್ರ ಹಾಗು ಕಾವೇರಿ ನಿಗಮದ ಮುಖ್ಯಸ್ಥರಾಗಿದ್ದ ಚಿಕ್ಕರಾಯಪ್ಪ ಇಬ್ಬರು ಅಧಿಕಾರಿಗಳು ನೋಟು ಬ್ಯಾನ್ ವೇಳೆ ಐಟಿ ಮತ್ತು ಇಡಿ ರೇಡ್ ಗೆ ತುತ್ತಾಗಿದ್ದರು. ಜೈಲಿಗೆ ಹೋಗಿ, ಮತ್ತೆ ಹೊರಗಡೆ ಬಂದು ಐದಾರು ತಿಂಗಳು ಕಳೆದರು ಮತ್ತೆ ನೌಕರಿ ಭಾಗ್ಯ ಸಿಗುತ್ತಿಲ್ಲ.

CyqAFFqUUAA2GvE

ಈ ಇಬ್ಬರು ಅಧಿಕಾರಿಗಳನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬಹುದೇ ಅಂತ ಡಿಪಿಎಆರ್ ಇಲಾಖೆ, ಐಟಿ, ಇಡಿಗೆ ಪತ್ರ ಬರೆದಿದೆ. ಆದರೆ ಐಟಿ ಮತ್ತು ಆದಾಯ ತೆರಿಗೆ ಇಲಾಖೆಯಿಂದ ಈ ಬಗ್ಗೆ ಯಾವುದೇ ಉತ್ತರ ಸಿಕ್ಕಿಲ್ಲ. ಇದನ್ನೆಲ್ಲಾ ಗಮನಿಸ್ತಿರೋ ಡಿಪಿಎಆರ್ ಇಲಾಖೆ, ಸಿಎಂ ಕಚೇರಿಗೆ ಫೈಲ್ ಕಳುಹಿಸಿದೆ. ಇತ್ತ ಇಬ್ಬರು ಆರೋಪಿಗಳಿಗೆ ಮತ್ತೆ ನೌಕರಿ ಭಾಗ್ಯ ಕೊಟ್ಟರೆ ಮುಜುಗರ ಅನುಭವಿಸಬೇಕಾಗುತ್ತದೆ ಅಂತ ಸಿಎಂ ಕಚೇರಿಯ ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *