ಚಿಕ್ಕೋಡಿ: ಉಚ್ಚಾಟನೆಯ ವಿಷಯ ತಿಳಿಯುತ್ತಿದ್ದಂತೆ ಕೂಡಲಸಂಗಮ ಪೀಠದ (Panchamasali Jagadguru Peeta) ಜಯಮೃತ್ಯುಂಜಯ ಶ್ರೀಗಳು (Jaya Mruthyunjaya Swamiji) ಬೇಸರ ವ್ಯಕ್ತಪಡಿಸಿದರು.
ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಸ್ವಾಮೀಜಿ ಉಚ್ಚಾಟನೆ ವಿಷಯ ತಿಳಿಯುತ್ತಿದ್ದಂತೆ ಶ್ರೀಗಳ ಧ್ವನಿಯಲ್ಲಿ ಹತಾಶೆ ಭಾವ ಮೂಡಿತ್ತು. ಬದಲಾವಣೆ ಬಯಸಿದಂತಹ ವ್ಯಕ್ತಿಗಳಿಗೆ ತೊಂದರೆ ಕೊಡುವುದು ಸಹಜ. ಅದು ಯಾರನ್ನೂ ಬಿಟ್ಟಿಲ್ಲ. ಬಸವಣ್ಣನವರನ್ನು ಬಿಟ್ಟಿಲ್ಲ, ಅಂಬೇಡ್ಕರ್ರವರನ್ನು ಸಹ ಬಿಟ್ಟಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೂಡಲಸಂಗಮ ಪಂಚಮಸಾಲಿ ಪೀಠದಿಂದ ಬಸವಜಯಮೃತ್ಯುಂಜಯ ಶ್ರೀ ಉಚ್ಚಾಟನೆ
ನಮ್ಮ ಗುರಿ, ನಿಷ್ಠೆ ಮಾತ್ರ ಅಚಲವಾಗಿರುವಂತದ್ದು. ಎಲ್ಲರೂ ಸೇರಿಕೊಂಡು ಬಸವ ಸಂಪ್ರದಾಯ ಉಳಿಸಬೇಕು. ಶರಣ ಸಮಾಜವನ್ನು ಕಟ್ಟೋಣ ಎಂದ ಶ್ರೀಗಳು ಕರೆ ನೀಡಿದರು. ಇದನ್ನೂ ಓದಿ: ಉಡುಪಿ ಕೃಷ್ಣ ಮಠಕ್ಕೆ ಸುಭದ್ರೆ ಕೊಡಲು ನಿರಾಕರಿಸಿದ ಹೊನ್ನಾಳಿ ಹಿರೇಕಲ್ಮಠ – ಸ್ಥಳದಲ್ಲಿ ಬಿಗುವಿನ ವಾತಾವರಣ