ಬೆಂಗಳೂರು: ಪ್ರಧಾನಿ ಮೋದಿಯವರ ಹೇಳಿಕೆ, ಘೋಷಣೆಗಳಿಗೆ ಕಾಂಗ್ರೆಸ್ ನಾಯಕರ ಕೌಂಟರ್ ಇದ್ದೆ ಇರುತ್ತಿತ್ತು. ಆದರೆ ಜನತಾ ಕರ್ಫ್ಯೂಗೆ ಮಾತ್ರ ರಾಜ್ಯ ಕೈ ನಾಯಕರು ಯಾವುದೇ ತಕರಾರು ಇಲ್ಲದೆ ಸೈಲೆಂಟಾಗಿ ಕರ್ಫ್ಯೂ ಮೊರೆ ಹೋಗಿದ್ದಾರೆ.
ಹೆಚ್ಚಿನ ರಾಜಕೀಯ ನಾಯಕರುಗಳು ಇರುವ ಸದಾಶಿವ ನಗರದ ನಾಯಕರುಗಳ ನಿವಾಸ ಸದಾ ಜನಜಂಗುಳಿಯಿಂದ ತುಂಬಿ ತುಳುಕುತಿತ್ತು. ಆದರೆ ಇಡೀ ಸದಾಶಿವ ನಗರ ಫುಲ್ ಸೈಲೆಂಟ್ ಆಗಿತ್ತು. ಸದಾಶಿವನಗರದಲ್ಲಿರೋ ಮಾಜಿ ಡಿಸಿಎಂ ಪರಮೇಶ್ಚರ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ನಿವಾಸವು ಜನರಿಲ್ಲದೆ ಬಿಕೋ ಅನ್ನುತ್ತಿತ್ತು.
ಇನ್ನು ಕುಮಾರ ಪಾರ್ಕ್ ರಸ್ತೆಯಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸವು ಜನರಿಲ್ಲದೆ ಬಿಕೋ ಅನ್ನುತ್ತಿತ್ತು. ಕಾಂಗ್ರೆಸ್ ನ ಯಾವ ನಾಯಕರುಗಳು ಮನೆಯಿಂದ ಹೊರ ಬರಲಿಲ್ಲ. ಯಾರನ್ನು ಭೇಟಿ ಮಾಡದೇ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.