ಮಂಗಳೂರು: ಒಂದು ಕಾಲದಲ್ಲಿ ರಮಾನಾಥ ರೈ ಪಾಲಿಗೆ ರಾಜಕೀಯ ಗುರುವಾಗಿದ್ದ ಜನಾರ್ದನ ಪೂಜಾರಿಯವರನ್ನೇ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದರೆಂಬ ಆರೋಪ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇದನ್ನೂ ಓದಿ: ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಕಣ್ಣೀರಿಟ್ಟ ಸಚಿವ ರಮಾನಾಥ ರೈ!
ಸಾರ್ವಜನಿಕ ವೇದಿಕೆಯಲ್ಲಿ ಪೂಜಾರಿಯವರು ಕಣ್ಣೀರು ಹಾಕಿದ್ದು, ಬಿಲ್ಲವರನ್ನು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ರೈ ವಿರುದ್ಧ ಟೀಕೆ ಎದ್ದುಬಂದಿತ್ತು. ಆದರೆ ಮತ್ತೆ ಪೂಜಾರಿಯವರ ಕಣ್ಣೀರಿಗೆ ಪ್ರತಿಯಾಗಿ ರಮಾನಾಥ ರೈ ಕೂಡ ಕಣ್ಣೀರು ಹಾಕಿದ್ದಲ್ಲದೆ, ಆಣೆ ಪ್ರಮಾಣಕ್ಕೆ ಕರೆದಿದ್ದು ಪೂಜಾರಿ ಆಪ್ತರನ್ನು ಕೆರಳಿಸಿತ್ತು. ಇದನ್ನೂ ಓದಿ: ಬಹಿರಂಗ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಕಣ್ಣೀರು
ಇದೀಗ ಸವಾಲನ್ನು ಸ್ವೀಕರಿಸಿರುವ ಪೂಜಾರಿ ಆಪ್ತರಾದ ಹರಿಕೃಷ್ಣ ಬಂಟ್ವಾಳ್ ಮತ್ತು ಅರುಣ್ ಕುವೆಲ್ಲೋ ಆಣೆ ಪ್ರಮಾಣಕ್ಕೆ ಸಿದ್ಧರಾಗಿದ್ದಾರೆ. ಅಲ್ಲದೆ ಧರ್ಮಸ್ಥಳಕ್ಕೆ ಜನಾರ್ದನ ಪೂಜಾರಿ ಯಾಕೆ ಬರಬೇಕು. ನಾವೇ ಬರ್ತೀವಿ. ಯಾಕಂದ್ರೆ ರಮಾನಾಥ ರೈ ಪೂಜಾರಿಯವರನ್ನು ನಿಂದಿಸಿದಾಗ ಅರುಣ್ ಕುವೆಲ್ಲೋ ಸಾಕ್ಷಿಯಾಗಿದ್ರು ಅಂತಾ ಹರಿಕೃಷ್ಣ ಬಂಟ್ವಾಳ್ ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮತ್ತೆ ಕಣ್ಣೀರು!
https://www.youtube.com/watch?v=d0ABn6LEi-w
https://www.youtube.com/watch?v=3tD5oKIc3EY