ಜನಪದರ ಬಾಯಲ್ಲಿ ಹಾಡಾದ ಪುನೀತ್ – ತಾಯಂದಿರ ಕಣ್ಣಲ್ಲಿ ನೀರು ತರಿಸ್ತಿದೆ ಹಾಡು

Public TV
1 Min Read
janapada namana chamarajanagara

ಚಾಮರಾಜನಗರ: ಚಂದನವನದ ದಿ.ನಟ ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆ ನೋವು ಅಭಿಮಾನಿಗಳ ಮನದಲ್ಲಿ ಇನ್ನೂ ಹಸಿ ಗಾಯದಂತೆಯೇ ಇದೆ. ಅಪ್ಪು ಕುರಿತು ಲೆಕ್ಕವಿಲ್ಲದಷ್ಟು ಮಂದಿ ತಮ್ಮ ಮನದಲ್ಲಿ ಮೂಡಿದ ಭಾವವನ್ನು ಅಕ್ಷರಕ್ಕಿಳಿಸಿದ್ದಾರೆ. ಹಲವರು ಸಾಹಿತ್ಯ ರಚಿಸಿ ಹಾಡುವ ಮೂಲಕ ನಮಿಸಿದ್ದಾರೆ. ಅವರ ಹೆಸರಲ್ಲಿ ನಿತ್ಯ ಒಂದಲ್ಲೊಂದು ವಿಭಿನ್ನ ಕಾರ್ಯಕ್ರಮಗಳು ನಡೆಯುತ್ತಲೇ ಇವೆ.

janapada namana chamarajanagara 1

ಇದೀಗ ಪುನೀತ್ ಜನಪದರ ಬಾಯಲ್ಲೂ ಹಾಡಾಗಿದ್ದಾರೆ. ಅಭಿಮಾನಿಗಳ ಮನದಲ್ಲಿ ಅಪ್ಪು ಅಜರಾಮರ ಎಂಬುದಕ್ಕೆ ಇದು ಮತ್ತೊಂದು ಸೇರ್ಪಡೆಯಾಗಿದೆ. ಹೇಗೆ ಮರಿಯಾಲಿ ಪುನೀತರಾಜು ನಿನ್ನ ಮರೆಸಿ ಮಣ್ಣಿನೊಳಗೆ, ಹೇಗೆ ಬಂತಪ್ಪ ನಿನಗೆ ಸಾವು ಹುಟ್ಟಿ ಬೆಳೆದಿದ್ದು ಎಲ್ಲೋ.. ಸಾವು ಬಂದಿದ್ದು ಎಲ್ಲೋ.. ಬೆಂಗಳೂರಿನಲ್ಲಿತ್ತಾ ಸಾವು? ಹೇಗೆ ಮರಿಯಾಲಿ… ಹೇಗೆ ಮರಿಯಾಲಿ ಪುನೀತರಾಜು ನಿನ್ನ ಎಂದು ಚಾಮರಾಜನಗರ ರಾಮಸಮುದ್ರದ ಸಾವಿತ್ರಮ್ಮ, ಮಣಿಯಮ್ಮ ಅವರ ತಂಡ ಪುನೀತ್ ಸಾವಿನ ಬಗ್ಗೆ ನೋವಿನಿಂದಲೇ ಹಾಡಿದ್ದಾರೆ. ಇದನ್ನೂ ಓದಿ: ನಾಡೋಜ ಡಾ.ಮಹೇಶ್ ಜೋಶಿ ಕನ್ನಡದ ನಿಷ್ಠಾವಂತ ಸೇವಕ: ಅರವಿಂದರಾವ್ ದೇಶಪಾಂಡೆ

janapada namana chamarajanagara 2

ಸಾವಿತ್ರಮ್ಮ, ಮಣಿಯಮ್ಮ ಅನಕ್ಷರಸ್ಥರಾದರೂ ಪುನೀತ್ ರಾಜಕುಮಾರ್ ಮೇಲಿನ ಅಭಿಮಾನದಿಂದ ಜನಪದ ಹಾಡು ಕಟ್ಟಿದ್ದು, ಈ ಹಾಡನ್ನು ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *