ಬೆಂಗಳೂರು: ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ನಡೆದ ಜೈನಮುನಿ ಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (CBI)ಗೆ ಕೊಡುವ ಅಗತ್ಯವಿಲ್ಲ, ನಮ್ಮ ಪೊಲೀಸರೇ ಸಮರ್ಥರಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G. Parameshwar) ಹೇಳಿದ್ದಾರೆ.
ಜೈನಮುನಿ ಹತ್ಯೆ ಪ್ರಕರಣವನ್ನು (Jain Monk Murder Case) ಶೂನ್ಯ ವೇಳೆಯಲ್ಲಿ ಬಿಜೆಪಿ (BJP)ಸೋಮವಾರ ಪ್ರಸ್ತಾಪ ಮಾಡಿತ್ತು. ಸಿಬಿಐಗೆ ನೀಡುವಂತೆ ಬಿಜೆಪಿ ಶಾಸಕರು ಆಗ್ರಹಿಸಿದ್ದರು. ಇದಕ್ಕೆ ಇಂದು ಸದನದಲ್ಲಿ ಉತ್ತರ ನೀಡಿದ ಪರಮೇಶ್ವರ್, ಇಂತಹ ಘೋರ ಹತ್ಯೆಯನ್ನು ಕಂಡಿರಲಿಲ್ಲ. ಇದು ಅತ್ಯಂತ ನೋವು ತಂದ ಘಟನೆ ಎಂದರು.
ಆಚಾರ್ಯ ಕಾಮಕುಮಾರ ನಂದಿ (Acharya Kamakumar Nandi Maharaj) ಜೈನಮುನಿ ಅವರ ಹಿರೇಕೋಡಿ ಆಶ್ರಮಕ್ಕೆ 4 ಎಕರೆ ಜಮೀನು ಇದೆ. ಹತ್ಯೆ ಆರೋಪಿಗಳಾದ ನಾರಾಯಣ ಬಸಣ್ಣ ಮಾಳಿ, ಹಸನ್ ಸಾಬಾ ಮಕ್ಬೂಲ್ ದಲಾಯಿತಗೆ 6 ಲಕ್ಷ ರೂ. ಸಾಲ ನೀಡಿದ್ದು, ಅದನ್ನು ಮರಳಿಸುವಂತೆ ಕೇಳಿದ್ದರು. ಆ ಕಾರಣಕ್ಕಾಗಿ ಕೊಲೆ ಮಾಡಿ ದೇಹವನ್ನು ತುಂಡು ಮಾಡಿ ಕೊಳವೆ ಬಾವಿಯಲ್ಲಿ ಹಾಕಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಹೇಳಿದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ವರ್ಗಾವಣೆ ‘ವ್ಯಾಪಾರ’ದ ಕಿಚ್ಚು ; ಕಾಂಗ್ರೆಸ್-ಬಿಜೆಪಿ ಮಧ್ಯೆ ಜಟಾಪಟಿ, ಕಲಾಪ ಮುಂದೂಡಿಕೆ
ಪೊಲೀಸರು ಘಟನೆ ನಡೆದ 6 ಗಂಟೆಯಲ್ಲಿ ಆರೋಪಿಗಳನ್ನು ಹಿಡಿದಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಮಾತ್ರ ಹತ್ಯೆ ನಡೆದಿಲ್ಲ. ಎಲ್ಲಾ ಸಂದರ್ಭದಲ್ಲೂ ಹತ್ಯೆಗಳು ನಡೆದಿವೆ. ಆದರೆ ತಾವು ಸಿಬಿಐಗೆ ತನಿಖೆಗೆ ಕೊಡಲು ಬೇಡಿಕೆ ಇಡುತ್ತೀರಿ. ಹಾಗಾದರೆ ನಮ್ಮ ಪೊಲೀಸರಿಗೆ ಸಾಮರ್ಥ್ಯ ಇಲ್ಲವೇ? ನಿಮ್ಮ ಸರ್ಕಾರದ ಅವಧಿಯಲ್ಲಿ ಇದ್ದ ಬೆಸ್ಟ್ ಪೊಲೀಸ್ ಇವಾಗ ಅಸಮರ್ಥರಾದರೇ? ನಮ್ಮ ಪೊಲೀಸರ ಮೇಲೆ ನಮಗೆ ನಂಬಿಕೆ ವಿಶ್ವಾಸ ಇಲ್ಲವೇ? ಕರ್ನಾಟಕ ಪೊಲೀಸ್ ವನ್ ಆಫ್ ದಿ ಬೆಸ್ಟ್ ಪೊಲೀಸ್ ಎಂದು ತಿರುಗೇಟು ಕೊಟ್ಟರು.
Web Stories