Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಶ್ರೀರಾಂಪುರದ ಫುಟ್‍ಪಾತ್‍ನಿಂದ ಇಲ್ಲಿಯವರೆಗೂ ಬಂದವನು: ಜಗ್ಗೇಶ್ ಕಿಡಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಶ್ರೀರಾಂಪುರದ ಫುಟ್‍ಪಾತ್‍ನಿಂದ ಇಲ್ಲಿಯವರೆಗೂ ಬಂದವನು: ಜಗ್ಗೇಶ್ ಕಿಡಿ

Bengaluru City

ಶ್ರೀರಾಂಪುರದ ಫುಟ್‍ಪಾತ್‍ನಿಂದ ಇಲ್ಲಿಯವರೆಗೂ ಬಂದವನು: ಜಗ್ಗೇಶ್ ಕಿಡಿ

Public TV
Last updated: September 22, 2019 10:18 pm
Public TV
Share
3 Min Read
jaggesh 3
SHARE

-ಚಾಲೆಂಜ್ ಸ್ವೀಕರಿಸಿ ಗೆದ್ದರೆ ನಾನು ನಿಮ್ಮ ದಾಸ
-ಫೇಕ್ ಐಡಿ ಆಗದಿರಿ ಪ್ಲೀಸ್

ಬೆಂಗಳೂರು: ನಾನು ಶ್ರೀರಾಂಪುರದ ಫುಟ್‍ಪಾತ್‍ನಿಂದ ಇಲ್ಲಿಯವರೆಗೂ ಬಂದವನು. ನಾನು ಯಾವುದನ್ನು ಹುಡುಕಿಕೊಂಡು ಹೋದ ವ್ಯಕ್ತಿ ಅಲ್ಲ ಎಂದು ನವರಸನಾಯಕ ಜಗ್ಗೇಶ್ ಟ್ವಿಟ್ಟರ್ ನಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಕರ್ನಾಟಕದಲ್ಲಿ ಉಪ ಚುನಾವಣೆ ಘೋಷಣೆ ಆಗುತ್ತಿದ್ದಂತೆ ನಟ ಜಗ್ಗೇಶ್ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿತಯುವ ಇಂಗಿತವನ್ನು ಮಾರ್ಮಿಕವಾಗಿಯೇ ಹೊರ ಹಾಕಿದ್ದರು. ಈ ಹಿಂದೆಯೂ ನಾನು 9 ದಿನದಲ್ಲಿ 64 ಸಾವಿರ ಮತಗಳನ್ನು ಪಡೆದಿದ್ದೇನೆ. ಈ ಬಾರಿಯ ಉಪಚುನಾವಣೆಗೆ ಸ್ಪರ್ಧಿಸಬೇಕಾ ಅಥವಾ ತ್ಯಾಗ ಮಾಡಬೇಕಾ ಎಂದು ಪ್ರಶ್ನೆ ಮಾಡಿದ್ದರು. ಇಂದು ಮತ್ತೊಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ಪ್ರತಿ ಒಬ್ಬರಿಗು ಅವರ ಭಾವನೆ ವ್ಯೆಕ್ತಪಡಿಸಲು ಸ್ವಾತಂತ್ರ್ಯವಿದೆ!ಹಂಚಿಕೊಂಡೆ ಅಷ್ಟೆ!ಎಲ್ಲೋ ಇದ್ದ ಅನ್ಯ ಪಕ್ಷದ #fake IDಗಳೆಲ್ಲಾ immediate activeಆಗಿ ಹುಡುಕಿಬಂದು ನನ್ನ #page ಮೇಲೆ ವಾಂತಿಮಾಡಿದರು!ನೆನಪಿಡಿ ನಾನು ಜಗ್ಗೇಶ್ ರಾಯರಮಗ
ನನಗೆ ಬೇಕಾದ್ದು ನನ್ನ ಹುಡುಕಿಬರುತ್ತದೆ😎ಶ್ರೀರಾಮಪುರದ ಫುಟ್ಪಾತಿನಿಂದ ಇಲ್ಲಿವರೆಗು ಬಂದವ ನಾನು😂 https://t.co/YhcHebxv0Y

— ನವರಸನಾಯಕ ಜಗ್ಗೇಶ್ (@Jaggesh2) September 22, 2019

ಜಗ್ಗೇಶ್ ಟ್ವೀಟ್:
ಪ್ರತಿಯೊಬ್ಬರಿಗೂ ಅವರ ಭಾವನೆ ವ್ಯಕ್ತಪಡಿಸಲು ಸ್ವಾತಂತ್ರ್ಯವಿದೆ. ಹಂಚಿಕೊಂಡಿದ್ದೇನೆ ಅಷ್ಟೆ. ಎಲ್ಲೋ ಇದ್ದ ಅನ್ಯ ಪಕ್ಷದ ಫೇಕ್ ಐಡಿಗಳೆಲ್ಲ ದಿಢೀರ್ ಅಂತ ಹುಡುಕಿ ಬಂದು ನನ್ನ ಪೇಜ್ ಮೇಲೆ ವಾಂತಿ ಮಾಡಿದರು. ನೆನಪಿಡಿ ನಾನು ಜಗ್ಗೇಶ್ ರಾಯರ ಮಗ. ನನಗೆ ಬೇಕಾದ್ದು ನನ್ನ ಹುಡುಕಿ ಬರುತ್ತದೆ. ಶ್ರೀರಾಮಪುರದ ಫುಟ್ ಪಾತ್‍ನಿಂದ ಇಲ್ಲಿಯವರೆಗು ಬಂದವ ನಾನು ಎಂದು ವಿರೋಧಿಗಳಿಗೆ ಮಾತಿನ ಮೂಲಕ ಚಾಟಿ ಬೀಸಿದ್ದಾರೆ.

ಒಬ್ಬರಿಗೆ ಹಂಗಿಸುವಮುನ್ನ ನನ್ನ #challenge ಸ್ವೀಕರಿಸಿ!ಹಂಗಿಸುವ ಮುನ್ನ ನಿಮ್ಮಬದುಕಲ್ಲಿ 1ಘಂಟೆ ಯಾರ ನೀವು ಅಣಕಿಸುತ್ತೀರಿ ಅಂತವರು ಮಾಡಿದಷ್ಟು ಸಾಧನೆ ನಿಮ್ಮ ಬದುಕಲ್ಲಿ ಸಾಧಿಸಿ ತೋರಿಸಿ! ಹಾಗೆ ನೀವು ಸಾಧಿಸಿದರೆ ನಾನು ನಿಮ್ಮದಾಸ!ಆಗದಿದ್ದರೆ ನಿಮ್ಮಅನ್ನಕ್ಕೆ ದಾರಿಹುಡುಕಿ ಬದುಕಿ ತಂದೆತಾಯಿ ಜೊತೆ ಸಂತೋಷವಾಗಿ ಬಾಳಿ!fake id ಆಗದಿರಿpls!

— ನವರಸನಾಯಕ ಜಗ್ಗೇಶ್ (@Jaggesh2) September 22, 2019

ಒಬ್ಬರಿಗೆ ಹಂಗಿಸುವ ಮುನ್ನ ನನ್ನ ಚಾಲೆಂಜ್ ಸ್ವೀಕರಿಸಿ. ಹಂಗಿಸುವ ಮುನ್ನ ನಿಮ್ಮ ಬದುಕಲ್ಲಿ 1 ಗಂಟೆ ಯಾರ ನೀವು ಅಣಕಿಸುತ್ತೀರಿ ಅಂತವರು ಮಾಡಿದಷ್ಟು ಸಾಧನೆ ನಿಮ್ಮ ಬದುಕಲ್ಲಿ ಸಾಧಿಸಿ ತೋರಿಸಿ. ಹಾಗೆ ನೀವು ಸಾಧಿಸಿದರೆ ನಾನು ನಿಮ್ಮ ದಾಸ. ಆಗದಿದ್ದರೆ ನಿಮ್ಮ ಅನ್ನಕ್ಕೆ ದಾರಿ ಹುಡುಕಿ ಬದುಕಿ ತಂದೆ-ತಾಯಿ ಜೊತೆ ಸಂತೋಷವಾಗಿ ಬಾಳಿ. ಫೇಕ್ ಐಡಿ ಆಗದಿರಿ ಪ್ಲೀಸ್.

ನನ್ನ ಬದುಕಲ್ಲಿ ಕಂಡಿರುವಷ್ಟು ಕಷ್ಟ-ಸುಖ, ಏಳು-ಬೀಳು, ಅಪಮಾನ, ಸನ್ಮಾನ, ನಂಬಿಕೆ ದ್ರೋಹ ಬೆನ್ನಿಗೆ ಚೂರಿ ಹಾಕಿಸಿಕೊಂಡರು ಯಾರಿಗು ಅರಿವಾಗದಂತೆ ಒಳಗೊಳಗೆ ನೋವುಂಡು ಅನ್ಯರ ನಗಿಸಿ 57ರ ಗಡಿಗೆ ಬೇಕಾದ್ದು ರಾಯರ ದಯೆಯಿಂದ ಪಡೆದು ದಡ ಸೇರಿರುವೆ. ಬಹುತೇಕರು ನನ್ನ ಮಕ್ಕಳ ವಯಸ್ಕರರು. ನೀವಂದುಕೊಂಡಷ್ಟು ಸುಲಭವಲ್ಲ ಬದುಕು. ನಾನು ಇಷ್ಟು ಮಾತ್ರ ಹೇಳಲು ಸಮರ್ಥ.

ನನ್ನಬದುಕಲ್ಲಿ ಕಂಡಿರುವಷ್ಟು
ಕಷ್ಟಸುಖ!ಏಳುಬೀಳು!ಅಪಮಾನ ಸನ್ಮಾನ!ನಂಬಿಕೆದ್ರೋಹ!ಬೆನ್ನಿಗೆ ಚೂರಿ ಹಾಕಿಸಿಕೊಂಡರು ಯಾರಿಗು ಅರಿವಾಗದಂತೆ ಒಳಗೊಳಗೆ ನೋವುಂಡು
ಅನ್ಯರನಗಿಸಿ 57ರ ಗಡಿಗೆ ಬೇಕಾದ್ದು ರಾಯರದಯೆಯಿಂದ ಪಡೆದು ದಡಸೇರಿರುವೆ!ಬಹುತೇಕರು ನನ್ನಮಕ್ಕಳ
ವಯಸ್ಕರರು ತಾವು!ನೀವಂದುಕೊಂಡಷ್ಟು ಸುಲಭವಲ್ಲ ಬದುಕು!ಇಷ್ಟುಮಾತ್ರ ಹೇಳಲು ಸಮರ್ಥ ನಾನು!

— ನವರಸನಾಯಕ ಜಗ್ಗೇಶ್ (@Jaggesh2) September 22, 2019

ರಾಯರ ಭಕ್ತರು ಸ್ವಾಭಿಮಾನಿಗಳು, ರಾಯರೇ ಭಕ್ತರ ಬೆನ್ನಿಗೆ ಇರಬೇಕಾದರೆ ಭಿಕ್ಷೆ ಬೇಡುವುದಿಲ್ಲ ಮತ್ತು ತಲೆ ಬಾಗುವುದಿಲ್ಲ. ಆಟೋ ಬೇಕು ಎಂದ ನನ್ನಂಥ ಪಾಮರನಿಗೆ ಜಗಮೆಚ್ಚಿದ ಮಗನ ಮಾಡಿದ್ದಾರೆ. ಅಧಿಕಾರ ದುಡ್ಡು ಮಿತ್ಯ, ರಾಯರು ಸತ್ಯ. ವರ್ಷಾನುಗಟ್ಟಲೆ ನನ್ನ ಅಣಕಿಸಿದವರ ಮುಂದೆ ರಾಯರು ನನಗೆ ಬೇಕಾದ್ದು ಕೊಟ್ಟು ಹರಸಿದ್ದಾರೆ. ರವಿಚಂದ್ರನ್ ಕಂಪನಿಯಲ್ಲಿ 1987ರಲ್ಲಿ 18 ರೂ.ಗೆ ಕೂಲಿ ಮಾಡುತ್ತಿದ್ದ ನಾನು ಇಂದು ವರ್ಷಕ್ಕೆ 20 ಲಕ್ಷ ರೂ. ತೆರಿಗೆ ಕಟ್ಟುವ ಶಕ್ತಿ ನೀಡಿರುವ ರಾಯರು ಹಾಗೂ ನನ್ನ ಪ್ರೀತಿಸುವ ಕನ್ನಡಿಗರೆ ಸಾಕು. ಬದುಕಿದ್ದಾಗಲೆ ಈ ಹಳ್ಳಿ ಹುಡುಗನ ಕಥೆ ಬದುಕುವ ಛಲದವರಿಗೆ ಮಾರ್ಗದರ್ಶನವಾಗಲಿ. ನಾನು ಸತ್ತಾಗ ಹೊಗಳಬೇಡಿ ಬದುಕಿದ್ದಾಗ ಅನುಸರಿಸಿ ಸಾಕು. ಶುಭರಾತ್ರಿ

ಶನಿವಾರ ಜಗ್ಗೇಶ್ ಚುನಾವಣೆ ಕುರಿತು ತಮ್ಮ ಭಾವನೆಗಳನ್ನು ಟ್ವಿಟ್ಟರ್ ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಜಗ್ಗೇಶ್ ಟ್ವೀಟ್‍ಗೆ ಕಮೆಂಟ್ ಪರ-ವಿರೋಧ ಅಭಿಪ್ರಾಯಗಳು ಸಹ ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಜಗ್ಗೇಶ್ ಎಲ್ಲ ಕಮೆಂಟ್ ಗಳಿಗೆ ಉತ್ತರ ನೀಡಿದ್ದಾರೆ.

ರಾಯರ ಭಕ್ತರು ಸ್ವಾಭಿಮಾನಿಗಳು!
ರಾಯರೆ ಭಕ್ತರಬೆನ್ನಿಗೆ ಇರಬೇಕಾದರೆ!
ರಾಯರ ಭಕ್ತರು ಭಿಕ್ಷೆ ಬೇಡುವುದಿಲ್ಲಾ!
ತಲೆಬಾಗುವುದಿಲ್ಲಾ!
ಆಟೋ ಬೇಕು ಎಂದ ನನ್ನಂಥ ಪಾಮರನಿಗೆ
ಜಗಮೆಚ್ಚಿದ ಮಗನ ಮಾಡಿದ್ದಾರೆ!
ಅಧಿಕಾರದುಡ್ಡು ಮಿತ್ಯ! ರಾಯರು ಸತ್ಯ!
ವರ್ಷಾನುಗಟ್ಟಲೆ ನನ್ನ ಅಣಕಿಸಿದವರ ಮುಂದೆ ರಾಯರು ನನಗೆ ಬೇಕಾದ್ದುಕೋಟ್ಟು ಹರಸಿದ್ದಾರೆ ಅಷ್ಟುಸಾಕು

— ನವರಸನಾಯಕ ಜಗ್ಗೇಶ್ (@Jaggesh2) September 22, 2019

ಶನಿವಾರದ ಟ್ವೀಟ್:
ಬೈ ಎಲೆಕ್ಷನ್ ಬಂತು. 2018ರಲ್ಲಿ ಕಡೆಗಳಿಗೆ ಅಭ್ಯರ್ಥಿಯಾದ ನಾನು ಮಾಜಿ ಶಾಸಕ, ವಿಧಾನ ಪರಿಷತ್ ಸದಸ್ಯ. ತನು, ಮನ, ಧನ ಕಳೆದುಕೊಂಡು 9 ದಿನದಲ್ಲಿ 60,400 ಮತಗಳನ್ನು ಪಡೆದ ಅಭ್ಯರ್ಥಿ ನಾನು. ಮೌನವಾಗಿ ಇರಲೋ? ವಲಸೆ ಬಂದವರಿಗಾಗಿ ನಾನು ಪಕ್ಕ ಸರಿಯಲೋ..? ಇಲ್ಲಾ ಮೌನವಾಗಿ ತ್ಯಾಗಿಯಾಗಲೋ..? ಕಾಡಿನಲ್ಲಿ ಕಳೆದುಹೋದ ಮಗುವಂತಾಗಿರುವೆ ಎಂದು ಬರೆದುಕೊಂಡಿದ್ದರು.

ಜಗ್ಗೇಶ್ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ 59,308 ಮತಗಳನ್ನು ಪಡೆದು ಸೋತಿದ್ದರು. ಈ ವೇಳೆ ಭರ್ಜರಿ ಪೈಪೋಟಿ ನೀಡಿದ್ದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್.ಟಿ.ಸೋಮಶೇರ್ 1,15,273 ಮತಗಳನ್ನು ಪಡೆದು ಗೆಲವು ಸಾಧಿಸಿದ್ದರು. ಜೆಡಿಎಸ್‍ನ ಅಭ್ಯರ್ಥಿ 1,04,562 ಮತಗಳನ್ನು ಗಳಿಸಿ ಪರಾಭವಗೊಂಡಿದ್ದರು.

ರವಿಚಂದ್ರನ್ ಕಂಪನಿಯಲ್ಲಿ 1987ರಲ್ಲಿ 18ರೂ ಗೆ
ಕೂಲಿ ಮಾಡುತ್ತಿದ್ದ ನಾನು ಇಂದು ವರ್ಷಕ್ಕೆ
20ಲಕ್ಷ ತೆರಿಗೆ ಕಟ್ಟುವ ಶಕ್ತಿ ನೀಡಿರುವ
ರಾಯರು ಹಾಗು ನನ್ನ ಪ್ರೀತಿಸುವ ಕನ್ನಡಿಗರೆ ಸಾಕು!ಬದುಕಿದ್ದಾಗಲೆ ಈ ಹಳ್ಳಿ ಹುಡುಗನ ಕಥೆ ಬದುಕುವ ಛಲದವರಿಗೆ
ಮಾರ್ಗದರ್ಶನವಾಗಲಿ!ನಾನು ಸತ್ತಾಗ ಹೊಗಳಬೇಡಿ ಬದುಕಿದ್ದಾಗ ಅನುಸರಿಸಿ ಸಾಕು!ಶುಭರಾತ್ರಿ

— ನವರಸನಾಯಕ ಜಗ್ಗೇಶ್ (@Jaggesh2) September 22, 2019

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಎಸ್.ಟಿ.ಸೋಮಶೇಖರ್ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ.

TAGGED:jaggeshKarnataka By ElectionPublic TVಕರ್ನಾಟಕ ಉಪ ಚುನಾವಣೆಜಗ್ಗೇಶ್ಪಬ್ಲಿಕ್ ಟಿವಿ
Share This Article
Facebook Whatsapp Whatsapp Telegram

Cinema news

Toxic
ʻಟಾಕ್ಸಿಕ್‌ʼ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ – ಸಿನಿಮಾ ವಿರುದ್ಧ ಕ್ರೈಸ್ತರ ಒಕ್ಕೂಟ ದೂರು
Bengaluru City Cinema Latest Main Post Sandalwood
nandini milk sudha rani
ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ ಆಯ್ಕೆ
Bengaluru City Cinema Latest Main Post Sandalwood
ranveer singh deepika padukone 2
ಬಿಷ್ಣೋಯ್ ಗ್ಯಾಂಗ್‌ ಹೆಸರಲ್ಲಿ ರಣವೀರ್ ಸಿಂಗ್‌ಗೆ ಬೆದರಿಕೆ – ವಾಯ್ಸ್‌ ಮೆಸೇಜ್‌ನಲ್ಲಿ ಕೋಟಿ ಕೋಟಿ ಡಿಮ್ಯಾಂಡ್‌
Bollywood Cinema Crime Latest Top Stories
Gilli
ಗಿಲ್ಲಿ ನಾಯಕನಾಗಿ ನಟಿಸಿರೋ `ಸೂಪರ್ ಹಿಟ್’ ಚಿತ್ರ ಫೆ.27 ರಂದು ತೆರೆಗೆ
Cinema Latest Sandalwood Top Stories

You Might Also Like

Bharat Bandh
Latest

ಗುರುವಾರ ಕಾರ್ಮಿಕ ಸಂಘಟನೆಗಳಿಂದ ಭಾರತ್‌ ಬಂದ್‌

Public TV
By Public TV
9 minutes ago
Bengaluru Metro Double decker
Bengaluru City

ಹೆಬ್ಬಾಳ-ಸರ್ಜಾಪುರ ಮೆಟ್ರೋ – ಕೇಂದ್ರದ ಅನುದಾನಕ್ಕೆ ಡಬಲ್ ಡೆಕ್ಕರ್ ನಿಯಮ ಅಡ್ಡಿ

Public TV
By Public TV
29 minutes ago
basavaraj bommai ashwini vaishnaw
Gadag

ಗದಗ-ಯಲವಿಗಿ ರೈಲ್ವೆ ಯೋಜನೆ ಶೀಘ್ರ ಆರಂಭಿಸಲು ಕೇಂದ್ರ ರೈಲ್ವೆ ಸಚಿವರಿಗೆ ಸಂಸದ ಬಸವರಾಜ ಬೊಮ್ಮಾಯಿ ಮನವಿ

Public TV
By Public TV
58 minutes ago
rafale jet ne2
Latest

ಭಾರತದ ರಕ್ಷಣಾ ಇತಿಹಾಸದಲ್ಲೇ ದೊಡ್ಡ ಡೀಲ್: 3.25 ಲಕ್ಷ ಕೋಟಿಗೆ 114 ರಫೇಲ್ ಜೆಟ್‌

Public TV
By Public TV
1 hour ago
Parameshwar
Bengaluru City

ಗನ್ ಹಿಡಿದು `ಕೈ’ ಮುಖಂಡ ಡ್ಯಾನ್ಸ್ – ಕ್ರಮ ನಿಶ್ಚಿತ ಎಂದ ಪರಮೇಶ್ವರ್

Public TV
By Public TV
1 hour ago
Vasanth Naik Murder Case Kamalakar Bhat gets a honeytrap from Suchitra
Court

ಕೊಲೆ ಕೇಸ್; ಕಮಲಾಕರ್ ಭಟ್ ಸೇರಿ ಐವರಿಗೆ ಫೆ.21 ರವರೆಗೆ ನ್ಯಾಯಾಂಗ ಬಂಧನ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?