ಸೂರತ್: ಪ್ರಧಾನಿ ನರೇಂದ್ರ ಮೋದಿ ಅವರಂತೆ ಭಾಷಣ ಮಾಡಲು ನನಗೆ ಹಲವು ವರ್ಷಗಳು ಬೇಕು. ಆದರೆ ಮೋದಿಗೆ ಭಾಷಣ ಮಾತ್ರ ಬರುತ್ತದೆ ಹೊರತು ಜನರ ಸಮಸ್ಯೆ ಬಗೆಹರಿಸಲು ಬರುವುದಿಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಸೂರತ್ ನಲ್ಲಿ ನಡೆದ ಉದ್ಯಮ ಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಚೆನ್ನಾಗಿ ಭಾಷಣ ಮಾತ್ರ ಮಾಡುತ್ತಾರೆ. ಆದರೆ ಅವರು ನಿಮ್ಮ ಮಾತುಗಳನ್ನು ಕೇಳುವುದಿಲ್ಲ. ನಾವು ನಿಮ್ಮ ಮಾತುಗಳನ್ನು ಕೇಳಿ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತೇವೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವ್ಯತ್ಯಾಸ ಎಂದರು.
ನೀವು ಸಮಸ್ಯೆಗಳನ್ನು ಬರೆದುಕೊಟ್ಟರೆ ಅದಕ್ಕೆ ನಾವು ಗಮನ ನೀಡುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಆ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ನಡೆಸುತ್ತೇವೆ ಎಂದು ಹೇಳಿದರು.
Wow. Felt so proud to see Surat's entrepreneurial skills first hand. You are India's 21st century manufacturing tiger. pic.twitter.com/I1vPGljJT9
— Rahul Gandhi (@RahulGandhi) November 8, 2017
सूरत की उद्योगशीलता और ऊर्जा को करीब से देखकर गर्व होता है। आप 21वीं सदी के भारत की औद्योगिक ताकत हैं। pic.twitter.com/xkr4iMjGUy
— Rahul Gandhi (@RahulGandhi) November 8, 2017