Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವೀಡಿಯೋ ವೈರಲ್ ಮಾಡಿದವರನ್ನು ಟ್ರೇಸ್ ಮಾಡೋದು ಕಷ್ಟ: ಪ್ರಿಯಾಂಕ್ ಖರ್ಗೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ವೀಡಿಯೋ ವೈರಲ್ ಮಾಡಿದವರನ್ನು ಟ್ರೇಸ್ ಮಾಡೋದು ಕಷ್ಟ: ಪ್ರಿಯಾಂಕ್ ಖರ್ಗೆ

Bengaluru City

ವೀಡಿಯೋ ವೈರಲ್ ಮಾಡಿದವರನ್ನು ಟ್ರೇಸ್ ಮಾಡೋದು ಕಷ್ಟ: ಪ್ರಿಯಾಂಕ್ ಖರ್ಗೆ

Public TV
Last updated: May 11, 2024 2:57 pm
Public TV
Share
3 Min Read
priyank kharge
SHARE

– ಪ್ರಜ್ವಲ್ ರೇವಣ್ಣ ವೀಡಿಯೋ ರಿಲೀಸ್‌ನಲ್ಲಿ ಬಿಜೆಪಿ ನಾಯಕರ ಕೈವಾಡ ಇದೆ

ಬೆಂಗಳೂರು: ವೀಡಿಯೋ ವೈರಲ್ ಮಾಡಿದವರನ್ನು ಟ್ರೇಸ್ ಮಾಡೋದು ಕಷ್ಟ. ಈ ವೀಡಿಯೋ 2-3 ತಿಂಗಳ ಹಿಂದೆಯೇ ಬಿಡುಗಡೆ ಆಗಿತ್ತು ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದರು.

ನಗರದಲ್ಲಿ ಮಾತನಾಡಿದ ಅವರು, ಸ್ಟೇಡಿಯಂ ಬಳಿಯೂ ಪೆನ್‌ಡ್ರೈವ್‌ ಸಿಕ್ಕಿದೆ. 25 ಸಾವಿರ ಪೆನ್‌ಡ್ರೈವ್ ಅಂದರೆ ಉದ್ದೇಶ ಪೂರ್ವಕವಾಗಿಯೇ ವೀಡಿಯೋ ಬಿಡುಗಡೆ ಆಗಿರುತ್ತದೆ. ಆದರೆ ಮೊದಲು ವೀಡಿಯೋದಲ್ಲಿ ಇರುವ ವ್ಯಕ್ತಿಯ ಮೇಲಿನ ಕೇಸ್ ನಾವು ಫೋಕಸ್ ಮಾಡಬೇಕು. ಅದಾದ ಬಳಿಕ ವೀಡಿಯೋ ವೈರಲ್ ಮಾಡಿರೋರ ಕೇಸ್ ಕೂಡಾ ಗೊತ್ತಾಗುತ್ತದೆ. ವೀಡಿಯೋ ಯಾರೇ ಬಿಡುಗಡೆ ಮಾಡಿದರೂ ಅದು ತಪ್ಪೇ ಎಂದರು. ಇದನ್ನೂ ಓದಿ: ಕ್ಲೀನ್‌ ಚಿಟ್‌ ಕೊಡೋಕೆ ಪ್ರಜ್ವಲ್‌ ಕೇಸನ್ನ ಸಿಬಿಐಗೆ ವಹಿಸಬೇಕಾ: ಎಂ.ಬಿ.ಪಾಟೀಲ್‌ ಪ್ರಶ್ನೆ

h.d.revanna 1

ಪ್ರಜ್ವಲ್ ರೇವಣ್ಣ ವೀಡಿಯೋ ರಿಲೀಸ್‌ನಲ್ಲಿ ಬಿಜೆಪಿ ನಾಯಕರ ಕೈವಾಡ ಇದೆ. ಇದನ್ನ ದೇವರಾಜೇಗೌಡರೇ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಹೀನಾಯ ಕೃತ್ಯ ಮಾಡಿದ್ದು, ವೀಡಿಯೋ ಮಾಡಿದ್ದು ಪ್ರಜ್ವಲ್. ವಿಡಿಯೋ ಕದ್ದಿದ್ದು ಡ್ರೈವರ್. ಕದ್ದ ವಿಡಿಯೋ ಕೊಟ್ಡಿದ್ದು ಬಿಜೆಪಿ ನಾಯಕ ದೇವರಾಜೇಗೌಡ. ವೀಡಿಯೋ ಕೊಟ್ಟಿದ್ದ ಬಿಜೆಪಿ ನಾಯಕನಿಗೆ. ಇದರಲ್ಲಿ ಕಾಂಗ್ರೆಸ್ ಕೈವಾಡ ಎಲ್ಲಿದೆ? ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕೈವಾಡ ಎಲ್ಲಿದೆ ಎಂದು ಪ್ರಶ್ನಿಸಿದರು.

ಬಿಜೆಪಿ-ಜೆಡಿಎಸ್ ಅವರು ಪೆನ್‌ಡ್ರೈವ್ ಹಂಚಿದ್ದರ ಬಗ್ಗೆ ಮಾತ್ರ ಮಾತಾಡ್ತಿದ್ದಾರೆ. ಮನೆ ಮಗ ಇಂತಹ ಘಟನೆ ಮಾಡಿದ್ದಾನೆ ಅಂತ ಯಾರು ಮಾತಾಡ್ತಿಲ್ಲ. ಆಡಿಯೋದಲ್ಲಿ ನಾನು ಕೇಳಿದೆ. ಇದರಲ್ಲಿ ಬಿಜೆಪಿ ವರಿಷ್ಠರಿಗೆ ಎಲ್ಲ ಗೊತ್ತಿತ್ತು ಅಂತ ಹೇಳಿದ್ದಾರೆ. ಎಲ್ಲಾ ಗೊತ್ತಿದ್ದರೂ ಯಾಕೆ ಟಿಕೆಟ್ ಕೊಟ್ಟರು. ಮಾಜಿ ಪ್ರಧಾನಿ ಕ್ಷೇತ್ರದಲ್ಲಿ ಚರ್ಚೆ ಆಗದೇ ಟಿಕೆಟ್ ಕೊಟ್ರಾ? ಯಾರು ದಾರಿ ತಪ್ಪಿದ ಮಗನ ಬಗ್ಗೆ ಮಾತಾಡ್ತಿಲ್ಲ. ಯಾಕೆ ಟಿಕೆಟ್ ಕೊಟ್ರಿ ಅಂತ ಹೇಳ್ತಿಲ್ಲ. ಯಾಕೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನ ನೇಣಿಗೆ ಹಾಕ್ತಿದ್ದೀರಾ? ಎಲ್ಲ ಗೊತ್ತಿದ್ದರು ಯಾಕೆ ಟಿಕೆಟ್ ಕೊಟ್ಟಿದ್ರಿ. ಇದರ ಹಿಂದಿನ ಸಂಚು ಏನು ಎಂದು ಕೇಳಿದರು. ಇದನ್ನೂ ಓದಿ: ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮುಂದುವರಿಯುತ್ತೆ: ಬಿಎಸ್‌ವೈ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನ ಲಾಕ್ ಮಾಡಿ, ಸಿಬಿಐ ಕೇಸ್ ಕೊಟ್ಟು ಅರೆಸ್ಟ್ ಮಾಡೊ ಪ್ಲ್ಯಾನ್ ಮಾಡಿದ್ರಾ? ಕುಮಾರಸ್ವಾಮಿ ಅವರು ಇದಕ್ಕೆ ಉತ್ತರ ಕೊಡಬೇಕು. ಯಾಕೆ ವಿಜಯೇಂದ್ರ, ಅಶೋಕ್ ಇದರ ಬಗ್ಗೆ ಮಾತಾಡ್ತಿಲ್ಲ. ಹುಬ್ಬಳ್ಳಿ ಕೇಸ್‌ನಲ್ಲಿ ತೋರಿಸಿದ್ದ ಮಹತ್ವ ಈ ಕೇಸ್‌ನಲ್ಲಿ ಯಾಕೆ ತೋರಿಸ್ತಿಲ್ಲ. ಯಾಕೆ ಇದೂವರೆಗೂ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಿಲ್ಲ? ಕೇಂದ್ರ ಸರ್ಕಾರವೇ ಪಾಸ್‌ಪೋರ್ಟ್ ರದ್ದು ಮಾಡಿ ಅಂತಾ ಕ್ರಮ ತೆಗೆದುಕೊಳ್ಳಬಹುದು ಅಲ್ಲವಾ? ಈ ಕೇಸ್‌ನಲ್ಲಿ ಕೇಂದ್ರ ಸರ್ಕಾರ ಏನ್ ಮಾಡ್ತಿದೆ. ಅವರು ಹಾಲಿ ಎಂಪಿ. ಕೇಂದ್ರ ಸರ್ಕಾರ ಏನ್ ಕ್ರಮ ಮಾಡ್ತಿದೆ ಹೇಳಲಿ. ಕೇವಲ ಪೇಪರ್ ಹೇಳಿಕೆ ಕೊಟ್ರೆ ಸಾಕಾ? ನಮ್ಮ ಮೇಲೆ ಗೂಬೆ ಕೂರಿಸೋದು ಬಿಟ್ಟು ಯಾವಾಗ ಕ್ರಮ ಮಾಡ್ತೀರಾ ಅಂತ ಕೇಂದ್ರದ ವಿರುದ್ಧ ಕಿಡಿಕಾರಿದರು.

PRAJWAL REVANNA 1 1

ಎಸ್‌ಐಟಿಯಿಂದ ಸಂತ್ರಸ್ತರ ಮೇಲೆ ಒತ್ತಡ ಹಾಕ್ತಿರೋ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಸ್‌ಐಟಿ ಅವರು ಸಂತ್ರಸ್ತರಿಗೆ ಕಾನ್ಫಿಡೆನ್ಸ್ ಬಿಲ್ಡ್ ಮಾಡಬೇಕು. ಈ ಕೆಲಸ ಎಸ್‌ಐಟಿ ಮಾಡ್ತಿದೆ. ಸಿಬಿಐಗೆ ಒಪ್ಪಿಸೋಕೆ ಯಾಕೆ ಆತುರ. ಮೊದಲು ಪ್ರಾಥಮಿಕ ತನಿಖೆ ಆಗಲಿ. ಪರೇಸ್ ಮೆಸ್ತಾ ಕೇಸ್, ಡಿಎಸ್ಪಿ ಗಣಪತಿ ಕೇಸ್‌ನಲ್ಲಿ ಏನ್ ಆಯ್ತು ನಾವು ಕೊಟ್ಟ ತನಿಖೆಯೇ ಅವರು ಒಪ್ಪಿರೋದು. ಮೊದಲು ಪ್ರಾಥಮಿಕ ತನಿಖೆ ಮಾಹಿತಿ ಬರಲಿ. ಯಾಕೆ ಸಿಬಿಐ ತನಿಖೆ ಕೊಡಬೇಕು. ಯಾಕೆ ಕೇಸ್ ಮುಚ್ಚಿ ಹಾಕೋಕಾ? ಜೆಡಿಎಸ್ ಬಳಿ ಏನಾದ್ರು ದಾಖಲೆ ಇದ್ದರೆ ಕೊಡಲಿ. ಜೆಡಿಎಸ್ ಅವರು ಪ್ರಜ್ವಲ್ ಪರ ಮಾತಾಡ್ತಿದ್ದಾರೆ. ಪ್ರಜ್ವಲ್‌ಗೆ ಶಿಕ್ಷೆ ಆಗಬೇಕು ಅಂತಾ ಮಾತಾಡ್ತಿಲ್ಲ. ಕೇಸ್ ದಿಕ್ಕು ತಪ್ಪಿಸೋ ಕೆಲಸ ಮಾಡೋದು ಬೇಡ ಎಂದರು.

ದೇವರಾಜೇಗೌಡರನ್ನ ದೂರಿನ ಮೇಲೆ ಅರೆಸ್ಟ್ ಮಾಡಿದ್ದಾರೆ. ದೇವರಾಜೇಗೌಡ ಅವರೇ ಬಿಜೆಪಿ ನಾಯಕರ ಹೆಸರು ಹೇಳಿರೋದು. ಸಿಟಿ ರವಿ, ವಿಜಯೇಂದ್ರ ಬಳಿ ಆಡಿಯೋ ಇದ್ದರೆ ಸುದ್ದಿಗೋಷ್ಠಿ ಮಾಡಿ ಬಿಡುಗಡೆ ಮಾಡಲಿ. ಏನೇ ಮಾಹಿತಿ ಇದ್ದರೂ ಕೊಡಲಿ. ದೇವರಾಜೇಗೌಡ ಬಂಧನ ರಾಜಕೀಯ ಉದ್ದೇಶಕ್ಕೆ ಅಲ್ಲ. ಅತ್ಯಾಚಾರ ಕೇಸ್ ಬಂದಿತ್ತು. ಅರೆಸ್ಟ್ ಮಾಡಿರೋದು. ಈ ಕೇಸ್‌ನಲ್ಲೂ ಅರೆಸ್ಟ್ ಮಾಡಬಾರದಾ ಎಂದು ಬಂಧನ ಸಮರ್ಥನೆ ಮಾಡಿಕೊಂಡರು.

ವಿಡಿಯೋ ಲೀಕ್‌ನಲ್ಲಿ ರಾಹುಲ್, ಡಿಕೆ ಅರೆಸ್ಟ್ ಆಗ್ತಾರೆ ಎಂಬ ದೇವರಾಜೇಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಫಿಕ್ಸ್ ಮಾಡೋಕೆ ಮಾಡ್ತಿದ್ದಾರೆ. ದೇವರಾಜೇಗೌಡರೇ ಬಿಜೆಪಿ ನಾಯಕರು ನನ್ನ ಹಿಂದೆ ಇದ್ದಾರೆ ಅಂತ ಹೇಳಿದ್ದಾರೆ. ಡಿಕೆ ಶಿವಕುಮಾರ್, ದೇವರಾಜೇಗೌಡ ಜೊತೆ ಮಾತಾಡೋ ಆಡಿಯೋ ನಾನು ಕೇಳಿಲ್ಲ. 30 ಸೆಕೆಂಡ್ ಆಡಿಯೋ ಕೇಳಿದ್ದೇನೆ. ಅದರಲ್ಲಿ ಏನಿಲ್ಲ. ಈ ಕೇಸ್‌ಗೆ ಅಮಿತ್ ಶಾ ಡೈರೆಕ್ಟರ್. ನಿರ್ಮಾಪಕರು ಜೆಡಿಎಸ್ ಅವರು ಇರಬಹುದು. ನಾಯಕ ತಮ್ಮ ಮನೆ ಮಗ ಅಂತಾ ಇವರು ಹೇಳ್ತಿಲ್ಲ ಎಂದರು.

TAGGED:prajwal revannaPriyank Khargeಪ್ರಿಯಾಂಕ್‌ ಖರ್ಗೆ ಪ್ರಜ್ವಲ್‌ ರೇವಣ್ಣ
Share This Article
Facebook Whatsapp Whatsapp Telegram

Cinema news

Veera Kambal Trailer Released The Glory of Tulunad Revealed Adithya SV Rajendra Singh Babu Kadri Manikanth
ವೀರ ಕಂಬಳ ಟ್ರೈಲರ್ ಬಿಡುಗಡೆ : ತುಳುನಾಡಿನ ವೈಭವ ಅನಾವರಣ
Cinema Latest Sandalwood
Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post
Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood
salman khan salim khan
ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಆಸ್ಪತ್ರೆಗೆ ದಾಖಲು
Bollywood Cinema Latest Main Post

You Might Also Like

Ramalinga Reddy
Bengaluru City

Transport Strike – 38ರ ಬದಲು 26 ತಿಂಗಳ ಹಿಂಬಾಕಿಗೆ ಸರ್ಕಾರ ಒಪ್ಪಿಗೆ

Public TV
By Public TV
2 minutes ago
devendra fadnavis
Latest

ಮಹಾರಾಷ್ಟ್ರದಲ್ಲಿ ಮುಸ್ಲಿಮರಿಗೆ ನೀಡಲಾಗಿದ್ಧ ಶೇ.5 ಮೀಸಲಾತಿ ರದ್ದು

Public TV
By Public TV
53 minutes ago
Guru Raghavendra
Districts

ಮಂತ್ರಾಲಯದಲ್ಲಿ ಗುರುರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವ – ರಾಯರ 405ನೇ ಪಟ್ಟಾಭಿಷೇಕ ಮಹೋತ್ಸವ

Public TV
By Public TV
59 minutes ago
Abhishek Sharma
Cricket

ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ಸೊನ್ನೆ – 7 ಇನ್ನಿಂಗ್ಸ್‌ ಪೈಕಿ 5 ರಲ್ಲಿ ಶೂನ್ಯಕ್ಕೆ ಅಭಿಷೇಕ್‌ ಔಟ್‌

Public TV
By Public TV
2 hours ago
ramzan namaz
Latest

ರಂಜಾನ್ | ಇಡೀ ತಿಂಗಳು ಸಂಜೆ 4ಕ್ಕೆ ಕಚೇರಿಯಿಂದ ತೆರಳಲು ಮುಸ್ಲಿಂ ನೌಕರರಿಗೆ ಅವಕಾಶ: ತೆಲಂಗಾಣ ಸರ್ಕಾರ

Public TV
By Public TV
2 hours ago
Suraj Revanna 5
Bengaluru City

ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ – ಆರೋಪ ಮುಕ್ತಗೊಳಿಸುವಂತೆ ಸೂರಜ್‌ ರೇವಣ್ಣ ಸಲ್ಲಿಸಿದ್ದ ಅರ್ಜಿ ವಜಾ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?