ಹಿಂದುತ್ವ ಅಡಿ ಮತಯಾಚಿಸುವುದು ನಿಮ್ಮ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ವೇ : ಬಿಜೆಪಿಗೆ ರೈ ಪ್ರಶ್ನೆ

Public TV
1 Min Read
mng edavyasa Kamath wife PRAKASH rai

ಮಂಗಳೂರು: ಹಿಂದುತ್ವದ ಉಳಿಬೇಕು ಎಂದರೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಮತಯಾಚನೆ ಮಾಡಿದ್ದ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರ ಪತ್ನಿಯರ ಮಾತಿಗೆ ಪ್ರಕಾಶ್ ರೈ ಕಿಡಿಕಾರಿದ್ದಾರೆ.

ಬಿಜೆಪಿ ಪಕ್ಷದಿಂದ ಚುನಾವಣೆ ಎದುರಿಸುತ್ತಿರುವ ವೇದವ್ಯಾಸ ಕಾಮತ್ ಪರ ಅವರ ಪತ್ನಿ ಪ್ರಚಾರ ನಡೆಸಿ ಮತಯಾಚನೆ ಮಾಡಿದ್ದರು. ಈ ವೇಳೆ ಮಾತನಾಡಿದ ಅವರು ಕೇಂದ್ರದಲ್ಲಿ ಈಗಾಗಲೇ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದೆ. ಕರ್ನಾಟಕದಲ್ಲೂ ಬಿಜೆಪಿ ಅಧಿಕಾರ ಪಡೆಯಬೇಕಿದೆ. ದೇಶದಲ್ಲಿ ಹಿಂದುತ್ವ ಉಳಿಯಲು ಬಿಜೆಪಿ ಅಧಿಕಾರ ವಹಿಸುವುದು ಅನಿವಾರ್ಯ. ಎಲ್ಲರೂ ಬಿಜೆಪಿ ಗೆ ಮತ ನೀಡಿ ವೇದವ್ಯಾಸರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದರು.

https://www.facebook.com/PrakashRajOfficial/videos/1757269180996778/

ಸದ್ಯ ಈ ವಿಡಿಯೋವನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಕಾಶ್ ರೈ, ಧರ್ಮದ ಹೆಸರಿನಲ್ಲಿ ಕೋಮುವಾದಿ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ನಾಚಿಕೆಯಾಗಬೇಕು. ಇದೇನಾ ನಿಮ್ಮ `ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಪ್ರಶ್ನಿಸಿದ್ದಾರೆ.

PRAKASH RAI

Share This Article
Leave a Comment

Leave a Reply

Your email address will not be published. Required fields are marked *