ಜನಾರ್ದನ್ ರೆಡ್ಡಿಗೂ ‘ಆದಿಕೇಶವ’ ಸಿನಿಮಾ ಕಥೆಗೂ ಸಂಬಂಧ ಇದೆಯಾ?

Public TV
1 Min Read
Adikesava film 3

ವೈಷ್ಣವ್ ತೇಜ್ (Vaishnav Tej) ನಟನೆಯ ‘ಆದಿಕೇಶವ’ (Adikesava) ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಸಮಯದಲ್ಲಿ ಗ್ಲಿಂಪ್ಸ್ ಗೆ (Glimpse) ರಿಲೀಸ್ ಆಗಿತ್ತು. ಆ ಗ್ಲಿಂಪ್ಸ್ ನ ವಿಡಿಯೋ ತುಣುಕೊಂದು ಭಾರೀ ಮಟ್ಟಕ್ಕೆ ಚರ್ಚೆಯಾಗುತ್ತಿದೆ. ಜನಾರ್ದನ್ ರೆಡ್ಡಿ ಸಿರಿತನದ ಅವನತಿಗೆ ಕಾರಣವಾದ ಸುಗ್ಗಳಮ್ಮ ದೇವಿಯ ಹೆಸರು ಪ್ರಸ್ತಾಪವಾಗುತ್ತಿದೆ. ಈ ಕಾರಣದಿಂದಾಗಿಯೇ ರೆಡ್ಡಿಗೂ ಈ ಸಿನಿಮಾಗೂ (Cinema) ಸಂಬಂಧವಿದೆ ಎಂದು ಹೇಳಲಾಗುತ್ತಿದೆ.

Adikesava film 1

ರಿಲೀಸ್ ಆದ ಗ್ಲಿಂಪ್ಸ್ ಡೈಲಾಗ್ ಗಳು ಸಖತ್ ಆಗಿದ್ದು, ಗಾಲಿ ಜನಾರ್ದನ್ ರೆಡ್ಡಿ (Janardhan Reddy) ಜೀವನದಲ್ಲಿ ನಡೆದ ಘಟನೆಗಳನ್ನು ನೆನಪಿಸುತ್ತಿವೆ. ಗ್ಲಿಂಪ್ಸ್ ನಲ್ಲಿ ಊರಲ್ಲೊಂದು ದೇವಸ್ಥಾನ. ಅದರ ಸುತ್ತ ನಡೆಯುವ ಗಣಿಗಾರಿಕೆಯನ್ನು ತೋರಿಸಲಾಗುತ್ತದೆ. ಗಣಿಗಾರಿಕೆಯ ನೆಪದಲ್ಲಿ ದೇವಸ್ಥಾನವನ್ನು ಕೆಡವಲು ತಯಾರಾಗುತ್ತಾರೆ. ಆಗ ದೇವಸ್ಥಾನ ರಕ್ಷಣೆಗೆ ನಾಯಕ ಬರುತ್ತಾನೆ. ಈ ದೃಶ್ಯವೇ ಜನಾರ್ದನ್ ರೆಡ್ಡಿ ಅವರನ್ನು ನೆನಪಿಸುತ್ತದೆ. ಇದನ್ನೂ ಓದಿ:ಲಂಡನ್‌ನಲ್ಲಿ ‘ಸಲಾರ್’ ನಟಿ ಶ್ರುತಿ ಹಾಸನ್ ನ್ಯೂ ಫೋಟೋಶೂಟ್

 

Adikesava film 2

ಜನಾರ್ದನ್ ರೆಡ್ಡಿ ಮೈನಿಂಗ್ ನಡೆಸುತ್ತಿರುವ ಸಂದರ್ಭದಲ್ಲಿ ಆಂಧ್ರ- ಕರ್ನಾಟಕ ಗಡಿ ಭಾಗದಲ್ಲಿರುವ ಸುಗ್ಗಳಮ್ಮ ದೇವಸ್ಥಾನವನ್ನು ಕೆಡವುತ್ತಾರೆ. ಯಾರು ಹೇಳಿದರೂ, ಅವರು ಕೇಳುವುದಿಲ್ಲ. ಆ ದೇವಸ್ಥಾನವನ್ನು ಕೆಡವಿದ ನಂತರವೇ ರೆಡ್ಡಿ ಅವನತಿ ಶುರುವಾಯಿತು ಎಂದು ಈಗಲೂ ಆ ಊರಿನ ಜನತೆ ಮಾತಾಡುತ್ತಾರೆ. ಆ ದೃಶ್ಯವನ್ನೇ ಆದಿಕೇಶವ ಸಿನಿಮಾದಲ್ಲಿ ತರಗಾಲಿದೆ ಎಂದು ಹೇಳಲಾಗುತ್ತಿದೆ.

Share This Article