Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೊಳಕು ಮನಸ್ಸಿಗೆ ʻಮೆದುಳಿನಲ್ಲಿ ಕಸʼವೇ ಕಾರಣವೇ? – ಇದಕ್ಕೆ ಪರಿಹಾರವೇನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಕೊಳಕು ಮನಸ್ಸಿಗೆ ʻಮೆದುಳಿನಲ್ಲಿ ಕಸʼವೇ ಕಾರಣವೇ? – ಇದಕ್ಕೆ ಪರಿಹಾರವೇನು?

Latest

ಕೊಳಕು ಮನಸ್ಸಿಗೆ ʻಮೆದುಳಿನಲ್ಲಿ ಕಸʼವೇ ಕಾರಣವೇ? – ಇದಕ್ಕೆ ಪರಿಹಾರವೇನು?

Public TV
Last updated: February 25, 2025 8:36 am
Public TV
Share
3 Min Read
Brain
SHARE

ಇತ್ತೀಚೆಗಷ್ಟೇ ʻಇಂಡಿಯಾಸ್‌ ಗಾಟ್‌ ಲ್ಯಾಟೆಂಟ್ʼ (India’s Got Latent) ಎಂಬ ಕಾರ್ಯಕ್ರಮದ ಸಂಚಿಕೆಯೊಂದರಲ್ಲಿ ಯುಟ್ಯೂಬರ್‌ ಅಲಹಬಾದಿಯಾ ಅವರು ಅಶ್ಲೀಲ ಹೇಳಿಕೆ ನೀಡಿದ್ದರ ಸಂಬಂಧ ಸುಪ್ರೀಂ ಕೋರ್ಟ್‌ (Supreme Court) ವಿಚಾರಣೆ ನಡೆಸಿತು. ಈ ವೇಳೆ ರಣವೀರ್‌ ಅಲಹಬಾದಿಯ (Ranveer Allahbadia) ಅವರು ನಡೆಸುವ ಕಾರ್ಯಕ್ರಮದಲ್ಲಿ ಆಡಿದ ಕೆಲವು ಮಾತುಗಳು ಅವರ ಕೊಳಕು ಮನಸ್ಸನ್ನು ತೋರಿಸಿದೆ. ಈ ವ್ಯಕ್ತಿಯ ಮನಸ್ಸಿನಲ್ಲಿ ಏನು ಕೊಳಕಿದೆಯೋ ಅದನ್ನು ಈ ಕಾರ್ಯಕ್ರಮದ ಮೂಲಕ ಹರಡಲಾಗುತ್ತಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದರು.

ಈ ಬೆನ್ನಲ್ಲೇ ಮನೋತಜ್ಞರು ಒಂದಿಷ್ಟು ವಿಶ್ಲೇಷಣೆ ನಡೆಸಿದ್ದರು. ಮೂರು ಪೌಂಡ್‌ಗಳಷ್ಟು ತೂಕವಿರುವ ಮೆದುಳಿನಲ್ಲಿ ಅದೆಷ್ಟು ಕಸ (ಕೊಳಕು) ತುಂಬಿರುತ್ತದೆ? ಈ ಮೆದುಳಿನಲ್ಲಿ ಕಸ ಬರೋದಾದ್ರೂ ಹೇಗೆ? ಮೆದುಳಿನ ಕಸ (Brain Garbage) ಅಂದ್ರೆ ಏನು? ಕಸ ತುಂಬಿಕೊಂಡಷ್ಟು ಮನುಷ್ಯನಲ್ಲಿ ಏನೆಲ್ಲಾ ಬದಲಾವಣೆಯಾಗುತ್ತದೆ? ಈ ಮೆದುಳಿನ ಕಸ ತೆಗೆದುಹಾಕೋದು ಹೇಗೆ? ಎಂಬುದನ್ನು ವಿಶ್ಲೇಷಣೆ ಮಾಡಿದ್ದಾರೆ ಅದೇನೆಂಬುದನ್ನು ನೋಡೋಣ…

Ranveer Allahbadia

ಮೆದುಳಿನಲ್ಲಿ ತ್ಯಾಜ್ಯ ಏಕೆ ಸಂಗ್ರಹವಾಗುತ್ತೆ?
ನಮ್ಮ ಮನಸ್ಸು ಮೆಟ್ರೋ ರೈಲಿಗಿಂತಲೂ ಸ್ಪೀಡು, ನಿತ್ಯ ಒಂದಿಲ್ಲೊಂದು ವಿಷಯಗಳ ಹಿಂದೆ ಓಡುತ್ತಲೇ ಇರುತ್ತದೆ. ಹೀಗಾಗಿ ಜೀವ ರಾಸಾಯನಿಕ ಕ್ರಿಯೆ ನಡೆಯುತ್ತಲೇ ಇರುತ್ತದೆ, ಹೀಗಾದಾಗ ಮೆದುಳಿನ ಮೇಲೆ ಒಂದೊಂದೇ ಪದರಗಳು ಸೇರುತ್ತಾ ಹೋಗುತ್ತದೆ. ಜೊತೆಗೆ ಹಾರ್ಮೂನ್‌ಗಳಲ್ಲಿ ಅಸಮತೋಲನ ಉಂಟಾಗುತ್ತದೆ. ಇದನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಮೆದುಳಿನಲ್ಲಿ ಒತ್ತಡ ರೂಪದಲ್ಲಿ ಕಸ ಸಂಗ್ರಹವಾಗುತ್ತದೆ. ಅಲ್ಲದೇ ವಾಯುಮಾಲಿನ್ಯ, ನಮಗೇ ಗೊತ್ತಿಲ್ಲದೇ ದೇಹ ಸೇರುವ ಮೈಕ್ರೋ ಪ್ಲಾಸ್ಟಿಕ್‌, ಮೆದುಳಿಗೆ ತುಂಬಾ ಅಪಾಯಕಾರಿ. ಇವು ದೇಹವನ್ನು ಪ್ರವೇಶಿಸಿ ಮೆದುಳಿಗೆ ಹಾನಿಯುಂಟು ಮಾಡುತ್ತದೆ.

Brain 2

ಸಾಮಾನ್ಯವಾಗಿ ಜನ ಇದನ್ನು ಸಹವಾಸ ದೋಷ ಎನ್ನುತ್ತಾರೆ. ಉದಾಹರಣೆಗೆ ಈ ಹಿಂದೆಲ್ಲ ಮನುಷ್ಯನಲ್ಲಿ ಹಾಸ್ಯಪ್ರಜ್ಞೆ ಇರುತ್ತಿತ್ತು. ನೈಸರ್ಗಿಕವಾಗಿ ನಕ್ಕಷ್ಟು ಮೆದುಳು, ಮನಸ್ಸು ಹಗುರವಾಗುತ್ತಿತ್ತು. ಕೆಲ ವಿಜ್ಞಾನಿಗಳು ಇದನ್ನು ನಿಜ ಎಂದು ಒಪ್ಪಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ಮುಖದಲ್ಲಿ ಹ್ಯಾಸ್ಯ ರಸವೇ ಇಲ್ಲದೇ ಸದಾ ಜಡವಸ್ತುಗಳಂತೆ ವರ್ತಿಸುತ್ತಾರೆ, ಇನ್ನೂ ಕೆಲವರು ಡಬಲ್‌ ಮೀನಿಂಗ್‌ ಹಾಸ್ಯಗಳಲ್ಲೇ ಮುಳುಗುತ್ತಾರೆ. ಇಂತಹ ಹಾಸ್ಯಗಳಿಂದ ಕೆಲವರ ಮೆದುಳಿನಲ್ಲಿ ಕೆಟ್ಟ ಆಲೋಚನೆಗಳು ಬೆಳೆಯುತ್ತಾ ಹೋಗುತ್ತದೆ, ಬಳಿಕ ಮನಸ್ಥಿತಿ ಇದ್ದಂತೆ ಮಾತನಾಡುತ್ತಾರೆ. ರಣವೀರ್‌ ಅಲಹಾಬಾದಿಯಾ ಅವರ ವಿಚಾರದಲ್ಲಿ ಆಗಿರುವುದೂ ಸಹ ಇದೆ ಎನ್ನುತ್ತಾರೆ ವಿಶ್ಲೇಷಕರು.

 

Brain 4

ಮೆದುಳಿನಲ್ಲಿ ಕೊಳಕು ಸಂಗ್ರಹವಾಗುವುದರಿಂದ ಏನಾಗುತ್ತದೆ?
ಮೂರು ಪೌಂಡ್‌ಗಳಷ್ಟು ತೂಕವಿರುವ ಮೆದುಳಿನಲ್ಲಿ ಕಸ ಸ್ವಚ್ಛಗೊಳಿಸದಿದ್ದರೆ, ಅದು ಮೆದುಳನ್ನು ಹಾನಿ ಮಾಡುತ್ತಾ ಹೋಗುತ್ತದೆ. ಮೆದುಳಿನಲ್ಲಿ ಊತ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ, ಇದರಿಂದ ತಲೆ ಭಾರವಾಗುತ್ತದೆ. ನಂತರ ನೆನಪಿನ ಶಕ್ತಿ, ಆಲೋಚನಾ ಶಕ್ತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಎಲ್ಲವೂ ಕಡಿಮೆಯಾಗುತ್ತದೆ. ಈ ಬೆಳವಣಿಗೆ ಮತ್ತೂ ಮುಂದುವರಿದರೆ ಆಲ್ಝಮೈರ್‌ ಮತ್ತು ಬುದ್ಧಿಮಾಂದ್ಯತೆಯಂತಹ ನರವೈಜ್ಞಾನಿಕ ಕಾಯಿಲೆಗಳೂ ಸಂಭವಿಸಬಹುದು. ಉದ್ವೇಗ, ಆತಂಕ ಮತ್ತು ಖಿನ್ನತೆಯ ಸಮಸ್ಯೆಯನ್ನು ತಂದೊಡ್ಡಬಹುದು ಎನ್ನುತ್ತಾರೆ ತಜ್ಞರು.

Brain 3

ಮೆದುಳು ಶುಚಿಯಾಗಬೇಕಾದ್ರೆ ನಾವೇನು ಮಾಡಬೇಕು?
ಈ ಎಲೆಕ್ಟ್ರಾನಿಕ್‌ ಯುಗದಲ್ಲಿ ನಮ್ಮ ಮೆದುಳನ್ನು ಸ್ವಚ್ಛಗೊಳಿಸುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇರಬೇಕು. ಅದಕ್ಕೆ ಒಂದು ಮಾರ್ಗವಿದೆ, ಅದನ್ನ ಗ್ಲಿಂಫಾಟಿಕ್ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ಕುತೂಹಲಕಾರಿ ವಿಷಯವೆಂದರೆ ಈ ಪ್ರಕ್ರಿಯೆಯು ನಿದ್ರೆಯ ಸಮಯದಲ್ಲಿ ಮಾತ್ರ ಸಕ್ರಿಯವಾಗಿರುತ್ತದೆ. ನಿಯಮಿತವಾಗಿ ಮನುಷ್ಯನ ದೇಹಕ್ಕೆ ಅಗತ್ಯವಿರುವಷ್ಟು ಸಮಯ ನಿದ್ರೆ ಮಾಡುವುದರಿಂದ ಮೆದುಳಿನಲ್ಲಿನ ಕಸ ಸ್ವಚ್ಛವಾಗುತ್ತದೆ.

Brain 5

ನಾವು ಗಾಢ ನಿದ್ರೆಯಲ್ಲಿದಷ್ಟು ಮೆದುಳಿನ ಶುದ್ಧೀಕರಣ ಕ್ರಿಯೆ ಸಾಧಾರಣಕ್ಕಿಂತ 10 ಪಟ್ಟು ವೇಗವಾಗಿ ನಡೆಯುತ್ತದೆ. 2013ರಲ್ಲಿ ಅಮೆರಿಕದ ರೋಚೆಸ್ಟರ್‌ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ. ಏಕೆಂದರೆ ನಾವು ನಿದ್ರಿಸುವಾಗ ನಮ್ಮ ಮೆದುಳಿನ ಕೋಶಗಳು ಶೇ.60 ರಷ್ಟು ಕುಗ್ಗುತ್ತವೆ. ಇದರಿಂದಾಗಿ ಗ್ಲಿಂಫಾಟಿಕ್ ವ್ಯವಸ್ಥೆಯು ಮೆದುಳಿನಲ್ಲಿ ಸಂಗ್ರಹವಾಗುವ ಕಸವನ್ನು ಹೊರಹಾಕಲು ಅವಕಾಶ ಮಾಡಿಕೊಡುತ್ತದೆ ಎಂಬುದನ್ನು ಅಧ್ಯಯನ ಕಂಡುಕೊಂಡಿದೆ.

TAGGED:BrainHuman BrainIndia's got latentRanveer Allahbadiaಬೆಂಗಳೂರುಮೆದುಳಿನ ಕಸಮೆದುಳುವಿಜ್ಞಾನ
Share This Article
Facebook Whatsapp Whatsapp Telegram

Cinema news

Keerthy Suresh
ಕೀರ್ತಿ ಇಟ್ಟ ಗುರಿಗೆ ಫೋಟೋಗ್ರಾಫರ್ ಕಣ್ಣೇ ಹೋಯ್ತು..!
Cinema Latest South cinema
Kerala Court 2
ಖ್ಯಾತ ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ – 6 ಆರೋಪಿಗಳಿಗೆ 20 ವರ್ಷ ಜೈಲು
Cinema Court Latest Main Post National South cinema
Salman Khan Sharukh Khan
ಸಲ್ಮಾನ್-ಶಾರುಖ್ ಫ್ಯಾನ್ಸ್‌ಗೆ ಭರ್ಜರಿ ನ್ಯೂಸ್.. ಶೀಘ್ರದಲ್ಲೇ ಪಠಾಣ್-2!
Bollywood Cinema Latest Top Stories
Rishab Shetty
ಕಾಗದದ ಮೇಲೆ ಹುಟ್ಟಿದ ಪಾತ್ರ ಜೀವ ಪಡೆದಾಗ… `ಕಾಂತಾರ’ದ ಆತ್ಮಕಥೆ ಬಿಚ್ಚಿಟ್ಟ ರಿಷಬ್
Cinema Latest Sandalwood Top Stories

You Might Also Like

Mysuru Palace 2
Districts

ಮೈಸೂರು | ಅರಮನೆಯ ಜಯರಾಮ-ಬಲರಾಮ ದ್ವಾರದ ಗೋಡೆಯಲ್ಲಿ ಭಾರೀ ಬಿರುಕು

Public TV
By Public TV
1 hour ago
Shehbaz Sharif
Latest

ಪಾಕ್‌ ಪ್ರಧಾನಿಗೆ ವಿಶ್ವವೇದಿಕೆಯಲ್ಲಿ ಅವಮಾನ – ಪುಟಿನ್‌ ಭೇಟಿಗಾಗಿ 40 ನಿಮಿಷ ಕಾದು ಕುಳಿತ ಶೆಹಬಾಜ್ ಷರೀಫ್

Public TV
By Public TV
2 hours ago
03 5
Latest

MGNREGA | ನರೇಗಾ ಹೆಸರು ಬದಲು – ಪ್ರಮುಖ ನಿರ್ಧಾರಗಳೊಂದಿಗೆ ದೇಶದ ಗಮನ ಸೆಳೆದ ಸಂಸತ್ತು

Public TV
By Public TV
2 hours ago
MB Patil 1 1
Districts

ಶ್ರೀಗಳು ಹಾಕಿಕೊಟ್ಟ ಮಾರ್ಗ ಸೂರ್ಯ, ಚಂದ್ರ ಇರೋವರೆಗೂ ಚಿರಸ್ಥಾಯಿ – ಲಿಂ.ಚನ್ನಬಸವ ಸ್ವಾಮೀಜಿ ಅಂತಿಮ ದರ್ಶನ ಪಡೆದ ಎಂ.ಬಿ.ಪಾಟೀಲ್

Public TV
By Public TV
2 hours ago
Kalaburagi Chariot
Districts

ಕಲಬುರಗಿ | ಕಡಕೋಳ ಜಾತ್ರೆಯಲ್ಲಿ ರಥದ ಚಕ್ರ ಕಟ್ಟಾಗಿ ಅವಘಡ

Public TV
By Public TV
2 hours ago
Madikeri Elephant
Districts

ಕೊಡಗು | ಹೆದ್ದಾರಿಯಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷ – ಬೆಚ್ಚಿಬಿದ್ದ ವಾಹನ ಸವಾರರು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?