ಚಿಕ್ಕಬಳ್ಳಾಪುರ: ಪ್ರತಿ ಬಾರಿ ಕಪ್ ನಮ್ದೆ ಅಂತಿದ್ವಿ, ಈ ಸಲ ಆದ್ರೂ ಕಪ್ ನಮ್ಮದಾಗಲಿ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ (M.C Sudhakar) ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ (Chikkaballapur) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಪಂಜಾಬ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಆರ್ಸಿಬಿ (RCB) ಗೆಲುವಾಗಲಿ ಎಂದು ಶುಭಹಾರೈಸಿದ್ದಾರೆ. ಇದನ್ನೂ ಓದಿ: ಫೈನಲ್ನಲ್ಲಿ ಸೆಣೆಸಲಿರುವ ಆರ್ಸಿಬಿಗೆ ಗಣ್ಯರಿಂದ ಶುಭಾಶಯಗಳ ಮಹಾಪೂರ!
ದೇಶದಲ್ಲಿ ಎಲ್ಲೆಡೆ ಆರ್ಸಿಬಿಗೆ ಅತಿ ಹೆಚ್ಚು ಅಭಿಮಾನಿಗಳಿದ್ದಾರೆ. ಈ ಸಲ ಕಪ್ ನಮ್ಮದಾಗುವ ವಿಶ್ವಾಸ ಇದೆ. ಪ್ರತಿ ಭಾರಿಯೂ ಕಪ್ ನಮ್ಮದೆ ಅಂತ ಹೇಳ್ತಿದ್ದೇವು. ಈ ಬಾರಿಯಾದ್ರೂ ಕಪ್ ನಮ್ಮದಾಗಲಿ, ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಈ ವರ್ಷ ಟ್ರೋಫಿ ಗೆಲ್ಲೋಕೆ ಶ್ರೇಯಸ್ ಅಯ್ಯರ್ ಅರ್ಹರು – ರಾಜಮೌಳಿ