ಸತತ ಎರಡನೇ ವರ್ಷ ಟಿ20 ಫೈನಲ್ನಲ್ಲಿ (T20 Final) ರಜತ್ ಪಾಟಿದಾರ್ (Rajat Patidar) ಮತ್ತು ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದ ತಂಡಗಳು ಮುಖಾಮುಖಿಯಾಗುತ್ತಿವೆ.
ಹೌದು. ಕಳೆದ ಡಿಸೆಂಬರ್ನಲ್ಲಿ ವರ್ಷ ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ಮಧ್ಯಪ್ರದೇಶ (Madhya Pradesh) ಮತ್ತು ಮುಂಬೈ (Mumbai) ತಂಡಗಳ ಮಧ್ಯೆ ನಡೆದಿತ್ತು.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ್ದ ಮಧ್ಯಪ್ರದೇಶ 8 ವಿಕೆಟ್ ನಷ್ಟಕ್ಕೆ 174 ರನ್ ಹೊಡೆದಿತ್ತು. ನಾಯಕ ಪಾಟಿದಾರ್ ಅಜೇಯ 81 ರನ್(40 ಎಸೆತ, 6 ಬೌಂಡರಿ, 6 ಸಿಕ್ಸ್) ಹೊಡೆದಿದ್ದರು. ಇದನ್ನೂ ಓದಿ: ಬಂದಿದ್ದು ಸಾಮಾನ್ಯ ಆಟಗಾರನಾಗಿ – ಕಟ್ಟಿದ್ದು RCB ಮಹಾ ಸಾಮ್ರಾಜ್ಯ!
ಈ ಮೊತ್ತವನ್ನು ಬೆನ್ನಟ್ಟಿದ ಮುಂಬೈ 17.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 180 ರನ್ ಹೊಡೆಯುವ ಮೂಲಕ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಶ್ರೇಯಸ್ ಅಯ್ಯರ್ 16 ರನ್ ಗಳಿಸಿ ಔಟಾಗಿದ್ದರು.
BCCI President Mr. Roger Binny hands over the trophy to Mumbai Captain Shreyas Iyer 👏👏
Congratulations to Mumbai on winning the Syed Mushtaq Ali Trophy 2024-25 🏆
Scorecard – https://t.co/4J8WAjUsK9#SMAT | @IDFCFIRSTBank | @ShreyasIyer15 | @MumbaiCricAssoc pic.twitter.com/sESEonvYNd
— BCCI Domestic (@BCCIdomestic) December 15, 2024
ಈಗ ಐಪಿಎಲ್ನಲ್ಲಿ ಆರ್ಸಿಬಿಯನ್ನು ರಜತ್, ಪಂಜಾಬ್ ತಂಡವನ್ನು ಶ್ರೇಯಸ್ ಮುನ್ನಡೆಸುತ್ತಿದ್ದಾರೆ. ಕಳೆದ 18 ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಟ್ರೋಫಿ ಗೆದ್ದುಕೊಂಡಿಲ್ಲ. ಆರ್ಸಿಬಿ ಈ ಮೊದಲು 3 ಬಾರಿ ಫೈನಲ್ ಪ್ರವೇಶಿಸಿದ್ದರೆ ಪಂಜಾಬ್ ಒಂದು ಬಾರಿ ಫೈನಲ್ ಆಡಿ ಸೋಲನುಭವಿಸಿತ್ತು. 2014 ರಲ್ಲಿ ಕೋಲ್ಕತ್ತಾ ವಿರುದ್ಧ ಪಂಜಾಬ್ ಕಿಂಗ್ಸ್ ಸೋತಿತ್ತು. ಇದೇ ಮೊದಲ ಬಾರಿಗೆ ಎರಡು ತಂಡಗಳು ಫೈನಲಿನಲ್ಲಿ ಮುಖಾಮುಖಿಯಾಗುತ್ತಿವೆ. ಹೀಗಾಗಿ ಯಾರೇ ಕಪ್ ಗೆದ್ದರೂ ಐಪಿಎಲ್ನಲ್ಲಿ (IPL 2025) ಹೊಸ ಚಾಂಪಿಯನ್ ತಂಡದ ಉದಯವಾಗಲಿದೆ. ಇದನ್ನೂ ಓದಿ: IPL Final: ಆರ್ಸಿಬಿ ಚಾಂಪಿಯನ್ ಆದ್ರೆ ಸಿಗಲಿದೆ 20 ಕೋಟಿ!
ಲೀಗ್ ಹಂತದಲ್ಲಿ ಎರಡು ತಂಡಗಳು ಒಂದೊಂದು ಪಂದ್ಯವನ್ನು ಗೆದ್ದುಕೊಂಡಿದ್ದವು. ಆದರೆ ಕ್ವಾಲಿಫೈಯರ್ನಲ್ಲಿ ಪಂಜಾಬ್ ತಂಡವನ್ನು ಸೋಲಿಸಿ ಆರ್ಸಿಬಿ ಫೈನಲ್ ಪ್ರವೇಶಿಸಿತ್ತು. ಹೀಗಾಗಿ ಎರಡು ತಂಡಗಳ ಮಧ್ಯೆ ಸಮಬಲದ ಹೋರಾಟ ನಡೆಯಲಿದೆ.