– ಚೆನ್ನೈನ ಮೂವರು ಘಟಾನುಘಟಿಗಳ ವಿಕೆಟ್ ಕಿತ್ತು ಗಮನ ಸೆಳೆದ 23ರ ಯುವಕ
ಚೆನ್ನೈ: ಋತುರಾಜ್ ಗಾಯಕ್ವಾಡ್, ರಚಿನ್ ರವೀಂದ್ರ ಫಿಫ್ಟಿ ಆಟ ಮತ್ತು ನೂರ್ ಅಹ್ಮದ್ ಬೆಂಕಿ ಬೌಲಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ಗಳಿಗೆ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. 156 ರನ್ ಗುರಿ ಬೆನ್ನತ್ತಿದ ಚೆನ್ನೈ 19.1 ಓವರ್ಗಳಿಗೆ 158 ರನ್ಗಳೊಂದಿಗೆ 4 ವಿಕೆಟ್ಗಳ ಜಯಗಳಿಸಿತು.
ಮೊದಲು ಬ್ಯಾಟ್ ಮಾಡಿದ ಮುಂಬೈ ಕಳೆದ ಪ್ರದರ್ಶನ ನೀಡಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಶೂನ್ಯ ಸುತ್ತಿ ಪೆವಿಲಿಯನ್ಗೆ ಸೇರಿದ್ದು, ಫ್ಯಾನ್ಸ್ಗೆ ನಿರಾಸೆ ಮೂಡಿಸಿತು. ತಿಲಕ್ ವರ್ಮಾ (31), ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ (29), ದೀಪಕ್ ಚಹಾರ್ (28) ಸಮಾಧಾನಕರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಬಿಟ್ಟರೆ ಉಳಿದವರು ನಿರಾಸೆ ಮೂಡಿಸಿದರು. ಚೆನ್ನೈ ಪರ ನೂರ್ ಅಹ್ಮದ್ 4 ವಿಕೆಟ್ ಕಿತ್ತು ಮಿಂಚಿದರು. ಖಲೀಲ್ ಅಹ್ಮದ್ 3, ನಾಥನ್ ಎಲ್ಲಿಸ್, ಆರ್.ಅಶ್ವಿನ್ ತಲಾ 1 ವಿಕೆಟ್ ಕಿತ್ತರು.
ಮುಂಬೈ ನೀಡಿದ 156 ರನ್ಗಳ ಗುರಿ ಬೆನ್ನತ್ತಿದ ಚೆನ್ನೈ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್(53 ರನ್, 26 ಬಾಲ್, 6 ಫೋರ್, 3 ಸಿಕ್ಸರ್) ಹಾಗೂ ರಚಿನ್ ರವೀಂದ್ರ (65 ರನ್, 45 ಬಾಲ್, 2 ಫೋರ್, 4 ಸಿಕ್ಸರ್) ಸ್ಫೋಟಕ ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ನೆರವಾದರು.
ಚೆನ್ನೈನ ಘಟಾನುಘಟಿಗಳ ವಿಕೆಟ್ ಕಿತ್ತ ವಿಘ್ನೇಶ್ ಪುತ್ತೂರು
ಐಪಿಎಲ್ ಹರಾಜಿನಲ್ಲಿ 30 ಲಕ್ಷಕ್ಕೆ ಬಿಡ್ ಆಗಿರುವ ಮುಂಬೈ ತಂಡದ 23ರ ಯುವಕ ವಿಘ್ನೇಶ್ ಪುತ್ತೂರು ಇಂದಿನ ಪಂದ್ಯದಲ್ಲಿ ಗಮನ ಸೆಳೆದರು. ಸ್ಪಿನ್ ಜಾದು ಮಾಡಿದ ಯುವಕ ಚೆನ್ನೈನ ಮೂವರು ಘಟಾನುಘಟಿಗಳ ಗಾಯಕ್ವಾಡ್, ದುಬೆ, ಹೂಡಾ) ವಿಕೆಟ್ ಉದುರಿಸಿದರು. 4 ಓವರ್ಗೆ 32 ರನ್ ನೀಡಿದ ಯುವಕ 3 ವಿಕೆಟ್ ಕಿತ್ತು ಮಿಂಚಿದರು.