ಬೆಂಗಳೂರು ತಂಡ ಪೇಪರ್ ಮೇಲೆ ಬಲಿಷ್ಠ: ವಿಜಯ್ ಮಲ್ಯ ವ್ಯಂಗ್ಯ

Public TV
1 Min Read
mallya

ಬೆಂಗಳೂರು: 2019ರ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪ್ರದರ್ಶನದ ಕುರಿತು ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ವ್ಯಂಗ್ಯವಾಡಿದ್ದಾರೆ.

ಬೆಂಗಳೂರು ತಂಡ ಯಾವಾಗಲೂ ಬಲಿಷ್ಠ ತಂಡವಾಗಿರುತ್ತದೆ. ಆದರೆ ಅದು ಪೇಪರ್ ಮೇಲೆ ಮಾತ್ರ ಎಂದು ಹೇಳಿದ್ದಾರೆ.

Capture 1

ಬ್ಯಾಂಕ್‍ಗಳಿಗೆ ಸಾಲ ಮರುಪಾವತಿ ಮಾಡದೇ ಮಲ್ಯ ದೇಶ ತೋರೆದು ಹೋಗಿರುವುದು ಲ್ಲರಿಗೂ ತಿಳಿಸಿದ ಸಂಗತಿ. 2008 ರಲ್ಲಿ ನಡೆದ ಹರಾಜುಪ್ರಕ್ರಿಯೆಯಲ್ಲಿ ವಿಜಯ್ ಮಲ್ಯ ಆರ್ ಸಿಬಿ ತಂಡ ಮಾಲೀಕತ್ವ ಪಡೆದಿದ್ದರು. ಆದರೆ ಆರಂಭದ ಸೀಸನ್ ಗಳಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಇದುವರೆಗೂ ನಡೆದಿರುವ 12 ಟೂರ್ನಿಗಳಲ್ಲಿ ಬೆಂಗಳೂರು ತಂಡ 2 ಬಾರಿ ಮಾತ್ರ ಫೈನಲ್ ಪ್ರವೇಶ ಮಾಡಿದ್ದು, ಒಮ್ಮೆಯೂ ಪ್ರಶಸ್ತಿಯನ್ನು ಗೆದ್ದಿಲ್ಲ.

2019ರ ಟೂರ್ನಿಯಲ್ಲೂ ಕೂಡ ಆರ್‍ಸಿಬಿ ನೀರಸ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆ ಸ್ಥಾನ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ತಂಡಕ್ಕೆ ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್‍ಗೆ ಮಲ್ಯ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿ ವ್ಯಂಗ್ಯವಾಡಿದ್ದಾರೆ. ಆರ್ ಸಿಬಿ ಯಾವಾಗಲೂ ಉತ್ತಮ ಲೈನಪ್ ಹೊಂದಿರುತ್ತದೆ. ಇಲ್ಲಿ ಯೋಚನೆ ಮಾಡಬೇಕಾದ ವಿಷಯ ಏನೆಂದರೆ ಅದು ಪೇಪರ್ ಮೇಲೆ ಮಾತ್ರ ಎಂದು ಹೇಳಿ ಟ್ವಿಟ್ಟರ್‍ನಲ್ಲಿ ವಂಗ್ಯವಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *