ಆರ್‌ಸಿಬಿ ವೈಫಲ್ಯಕ್ಕೆ ಟೀಂ ಮ್ಯಾನೇಜ್‍ಮೆಂಟ್ ಕಾರಣ: ಕುಂಬ್ಳೆ

Public TV
1 Min Read
Anil Kumble

ಬೆಂಗಳೂರು: 2019 ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡ ನೀರಸ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದೊಂದಿಗೆ ಟೂರ್ನಿಯಿಂದ ಹೊರ ನಡೆದು ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು. ಆದರೆ ತಂಡ ವೈಫಲ್ಯಕ್ಕೆ ಟೀಂ ಮ್ಯಾನೇಜ್‍ಮೆಂಟ್ ಕಾರಣ ಎಂದು ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ತಂಡ ಉತ್ತಮ ಬ್ಯಾಟಿಂಗ್ ಲೈನ್ ಅಪ್ ಹೊಂದಿದ್ದರೂ ಕೂಡ ಟೂರ್ನಿಯ ಆರಂಭಿಕ 6 ಪಂದ್ಯಗಳಲ್ಲಿ ಸೋತಿತ್ತು. ತಂಡದ ಹರಾಜು ಪ್ರಕ್ರಿಯೆ ವೇಳೆಯೇ ಟೀಂ ಮ್ಯಾನೇಜ್‍ಮೆಂಟ್ ಎಡವಿದ್ದು, ಕೆಲ ಉತ್ತಮ ಆಟಗಾರರನ್ನು ಹೊರತು ಪಡಿಸಿ ಹೊಸ ಆಟಗಾರರನ್ನು ಖರೀದಿ ಮಾಡಿತ್ತು. ಅಲ್ಲದೇ ತಂಡದಲ್ಲಿ ಇರುವ ಉತ್ತಮ ಆಟಗಾರರಿಗೆ ಸರಿಯಾದ ಅವಕಾಶಗಳು ಕೂಡ ಲಭ್ಯವಾಗಿಲ್ಲ. ಒಟ್ಟಾರೆ ತಂಡ ನಿರ್ಧಾರ ಮಾಡುವುದರಲ್ಲಿ ಎಡವಿದ್ದೇ ಪ್ಲೇಆಫ್ ತಲುಪಲು ಕೂಡ ಅಸಾಧ್ಯವಾಯಿತು ಎಂದು ಕುಂಬ್ಳೆ ತಿಳಿಸಿದ್ದಾರೆ.

rcb

ವಿದೇಶಿ ಆಟಗಾರರ ಆಯ್ಕೆಯಲ್ಲಿ ಕೇವಲ 3 ಆಟಗಾರರನ್ನು ಮಾತ್ರ ಆರ್‍ಬಿಸಿ ಆಯ್ಕೆ ಮಾಡಿಕೊಂಡಿತ್ತು. ಅಲ್ಲದೇ ಬ್ಯಾಟಿಂಗ್‍ನಲ್ಲಿ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಮೇಲೆಯೇ ಹೆಚ್ಚಿನ ಒತ್ತಡ ಇತ್ತು. ಅವರು ವಿಫಲರಾದ ಸಂದರ್ಭದಲ್ಲಿ ತಂಡದ ಫಲಿತಾಂಶವೇ ಬೇರೆಯಾಗುತಿತ್ತು. ಬೌಲಿಂಗ್ ನಲ್ಲಿ ಅನುಭವಿ ಬೌಲರ್ ಉಮೇಶ್ ಯಾದವ್ ಅವರು ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದು ಹಾಗೂ ಯುವ ಆಟಗಾರರಾದ ಶಿವಂ ದುವೆ, ಅಕ್ಷ್‍ದೀಪ್‍ನಾಥ್ ನಿರೀಕ್ಷಿತ ಪ್ರದರ್ಶನ ನೀಡಿಲಿಲ್ಲ ಎಂದು 2009 ರಲ್ಲಿ ಆರ್ ಸಿಬಿ ತಂಡವನ್ನು ಮುನ್ನಡೆಸಿದ್ದ ಕುಂಬ್ಳೆ ಹೇಳಿದ್ದಾರೆ.

rcb kkr 2

ಇದೇ ವೇಳೆ ಆರ್ ಸಿಬಿ ತಂಡದಲ್ಲಿರುವ ಉತ್ತಮ ಅಂಶಗಳನ್ನು ಗುರುತಿಸಿರುವ ಕುಂಬ್ಳೆ, ನವದೀಪ್ ಶೈನಿ ಈ ಟೂರ್ನಿಯಲ್ಲಿ ಭರವಸೆಯ ಪ್ರದರ್ಶನ ನೀಡಿದ್ದಾರೆ. ಅವರ ಬೌಲಿಂಗ್ ಪ್ರದರ್ಶನ ಉತ್ತಮವಾಗಿತ್ತು. ಅಲ್ಲದೇ ಹೆಟ್ಮೇಯರ್, ಗುರ್ಕೀರಾತ್ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಆರಂಭಿಕ ಸ್ಥಾನದಲ್ಲಿ ಪಾರ್ಥಿವ್ ಪಟೇಲ್ ನಿರ್ಣಯ ಇನ್ನಿಂಗ್ಸ್ ಗಳನ್ನು ಕಟ್ಟಿದ್ದರು. ಅಲ್ಲದೇ ಡೇಲ್ ಸ್ಟೈನ್ ಗಾಯಗೊಂಡಿದ್ದು ತಂಡಕ್ಕೆ ಹೊಡೆತ ನೀಡಿತು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *