ಬೆಂಗಳೂರು: ಬುಧವಾರ ದೆಹಲಿಯಲ್ಲಿ ರಾಜ್ಯದ ಎಲ್ಲ ಸಂಸದರ ಸಭೆ ಕರೆಯಲಾಗಿದೆ. ಈ ವೇಳೆ ರಾಜ್ಯ ಸರ್ಕಾರವು ಕಿಟ್ ಜೊತೆಗೆ ದುಬಾರಿ ಐಫೋನ್ ನೀಡಿದ್ದನ್ನು ಬಿಜೆಪಿ ಸಂಸದರು ತಿರಸ್ಕರಿಸಿದ್ದಾರೆ.
ಕೇಂದ್ರ ಸಚಿವ ಅನಂತಕುಮಾರ್ ಸೇರಿದಂತೆ ಬಿಜೆಪಿ ಸಂಸದರು ರಾಜ್ಯ ಸರ್ಕಾರದ ಗಿಫ್ಟ್ ಅನ್ನು ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲದೆ ದುಬಾರಿ ಫೋನ್ ತಿರಸ್ಕರಿಸಿ ಗಿಫ್ಟ್ ಕೊಡುತ್ತಿರುವ ಔಚಿತ್ಯವನ್ನು ಟ್ವಿಟ್ಟರ್ ಮೂಲಕ ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.
ಕಾವೇರಿ ಜಲ ವಿವಾದದ ಕುರಿತಾದ ಚರ್ಚೆಗೆ ರಾಜ್ಯದ ಎಲ್ಲ ಸಂಸದರನ್ನು ಸಭೆಗೆ ಕರೆದಿದ್ದಕ್ಕೆ ಧನ್ಯವಾದ. ಆದರೆ ರಾಜ್ಯ ಸರ್ಕಾರ ಏಕೆ ಇಷ್ಟೊಂದು ದುಬಾರಿ ಮೊಬೈಲ್ ನೀಡುತ್ತಿದೆ. ಸಾರ್ವಜನಿಕರ ಹಣದಲ್ಲಿ ಉಡುಗೊರೆ ನೀಡುತ್ತಿದೆ. ಪೌರಕಾರ್ಮಿಕರಿಗೆ ನೀಡಬೇಕಾದ ವೇತನ ನೀಡದೇ ಇಂತಹದಕ್ಕೆ ಖರ್ಚು ಮಾಡುತ್ತಿರವುದು ಸೂಕ್ತವಲ್ಲ ಎಂದು ಬರೆದು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಸಂಸದರಿಗೆ 50 ಸಾವಿರ ಮೌಲ್ಯದ ಐಫೋನ್ ಕೊಟ್ಟಿದ್ದನ್ನು ಸಮರ್ಥಿಸಿಕೊಂಡ ಡಿಕೆಶಿ
Dear @CMofKarnataka @hd_kumaraswamy – Thnk u 4 convng all MPs tmrw to discuss Cauvery issue. But why is ur govt sendng expnsve phones to MPs?
U claim Austerity; pourkarmikas r being denied salaries, but pub money used 4 ths kind of expnsve gifts? ????
Im returng thm to u ???????? pic.twitter.com/0jZKhnXhuM
— Rajeev Chandrasekhar ???????? (@Rajeev_GoI) July 17, 2018
ಸಿಎಂ ಪ್ರತಿಕ್ರಿಯೆ ಏನು?
ಸಂಸದರಿಗೆ ಐಫೋನ್ ಕೊಟ್ಟ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅಷ್ಟಕ್ಕೂ ನಾನು ಐಫೋನ್ ನೀಡುವಂತೆ ಯಾವುದೇ ಸೂಚನೆ ನೀಡಿಲ್ಲ. ಬೇರೆಯವರು ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ನನಗೆ ಈ ಬಗ್ಗೆ ಇರುವುದು ಶೂನ್ಯ ಮಾಹಿತಿ. ಹೀಗಾಗಿ ಇದರ ಬಗ್ಗೆ ತಿಳಿದುಕೊಂಡು ನಂತರ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮಾಧ್ಯಮಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.