Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos

Archives

  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಪಬ್ಲಿಕ್‌ ಟಿವಿಯಿಂದ 10 ಮಂದಿ ಸಾಧಕಿಯರಿಗೆ ನಾರಿ ನಾರಾಯಣಿ ಪ್ರಶಸ್ತಿ ಪ್ರದಾನ

Public TV
Last updated: March 8, 2023 10:13 pm
Public TV
Share
12 Min Read
Nagaveni
SHARE

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದ (International Women’s Day) ಅಂಗವಾಗಿ ಪಬ್ಲಿಕ್ ಟಿವಿ (PUBLiC TV) 10 ಮಂದಿ ಸಾಧಕಿಯರಿಗೆ ನಾರಿ ನಾರಾಯಣಿ ಪಬ್ಲಿಕ್ ಹೀರೋ ವಿಶೇಷ ಪ್ರಶಸ್ತಿ (Nari Narayani PUBLiC Hero Special Award) ಪ್ರದಾನ ಮಾಡಿ ಪುರಸ್ಕರಿಸಿದೆ.

ಯವನಿಕಾ ಸಭಾಂಗಣದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ಹಾಗೂ ಪರಿಶ್ರಮ NEET ಅಕಾಡೆಮಿಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಾಧಕಿಯರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ನಾಗವೇಣಿ
ಇವತ್ತಿನ ಕಾಲಘಟ್ಟದಲ್ಲಿ ಎಷ್ಟು ಸಿಕ್ಕರೂ ಸಾಲದು ಎಂಬ ಮನಸ್ಥಿತಿ ಇರಬೇಕಾದ್ರೆ ಬಂದಿದ್ದರಲ್ಲೇ ಮತ್ತೊಬ್ಬರಿಗೆ ಹಂಚಿ ಬದುಕುವವರು ವಿರಳ. ಅಂತಹ ಉದಾರ ಮನಸಿನ ಸಮಾಜ ಸೇವಕಿ ಮತ್ತು ಸಾಧಕಿ ಬೀದರ್‌ನ ನಾಗವೇಣಿ.

ಬೀದರ್ ತಾಲೂಕಿನ ಕೊಳಾರ ಕೆ ಗ್ರಾಮದ ನಿವಾಸಿಯಾಗಿರುವ ನಾಗವೇಣಿ (Nagaveni) ಖಾನಾವಳಿ ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಇವರ ಸದುದ್ದೇಶ ಇಂದು ಎಷ್ಟೋ ಕುಟುಂಬಗಳ ಜೀವನವನ್ನು ಬೆಳಗಿದೆ. ಕನ್ನಡ ಶಾಲೆಯ ಉಳಿವಿವಾಗಿ ಪಣತೊಟ್ಟಿರುವ ನಾಗವೇಣಿ 22 ವರ್ಷಗಳಿಂದ ರೊಟ್ಟಿ ತಟ್ಟುತ್ತಾ ಬರೋಬ್ಬರಿ 345 ಕಡು ಬಡತನದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ.

Nagaveni 1

ಮಹಾರಾಷ್ಟ್ರ ಮೂಲದವರಾದರೂ ಬೀದರ್ ತಾಲೂಕಿನ ಕೊಳಾರ ಕೆ ಗ್ರಾಮದ ಬಳಿ ವಿದ್ಯಾಚೇತನ ಶಿಕ್ಷಣ ಸಂಸ್ಥೆಯ ಬಸವಚೇತನ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಘಾಳೆಪ್ಪ ಕೋಟೆ ಎಂಬ ಪ್ರೌಢ ಶಾಲೆಯ 345 ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಊಟದ ಮನೆ ಎಂಬ ಖಾನಾವಳಿ ನಡೆಸುತ್ತಿರುವ ಇವರು ಬಂದ ಹಣವನ್ನು ಶಾಲೆಯ 18 ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೂ ನೀಡಿ ಶಿಕ್ಷಣ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ.

22 ವರ್ಷಗಳಿಂದ ಹೋಟೆಲ್‍ನಿಂದ ಬಂದ ಸಂಪಾದನೆಯಲ್ಲಿ ಶಾಲೆ ನಡೆಸುತ್ತಿರುವ ನಾಗವೇಣಿಗೆ ನಡುವೆ ಆರ್ಥಿಕ ಸಂಕಷ್ಟವೂ ಎದುರಾಗಿತ್ತು. ಆದರೆ ಮರಾಠಿ, ತೆಲುಗು, ಉರ್ದು, ಹಿಂದಿ ಸೇರಿದಂತ್ತೆ ಹಲವು ಭಾಷೆಗಳ ಪ್ರಭಾವಿರುವ ಗಡಿ ಜಿಲ್ಲೆಯಲ್ಲಿ ಕನ್ನಡ ಶಾಲೆಯನ್ನು ಉಳಿಸಬೇಕು ಎಂದು ಪಣ ತೊಟ್ಟು ಕಷ್ಟದಲ್ಲೂ ಶಾಲೆಯನ್ನೂ ಕೈಬಿಡದೆ ನಡೆಸಿಕೊಂಡು ಬಂದಿದ್ದಾರೆ. ಈ ಶಾಲೆಯಲ್ಲಿ ಓದಿದ ಅದೇಷ್ಟೋ ಬಡ ವಿದ್ಯಾರ್ಥಿಗಳು ಒಳ್ಳೆಯ ಕೆಲಸ ಪಡೆದಿದು ಸುಂದರ ಜೀವನವನ್ನು ಕಟ್ಟಿಕೊಂಡಿದ್ದಾರೆ. ಮಕ್ಕಳಿಗೆ, ಮೊಮ್ಮಕ್ಕಳಿಗೆ ಕೋಟಿ ಕೋಟಿ ಆಸ್ತಿ ಮಾಡಬೇಕು ಅನ್ನುವವರ ನಡುವೆ ರೊಟ್ಟಿ ತಟ್ಟಿ ಬಂದ ಹಣದಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸುತ್ತಾ ಕನ್ನಡ ಶಾಲೆ ಉಳಿಸುವ ಕೆಲಸ ಮಾಡುತ್ತಿದ್ದಾರೆ.

ಡಾ.ಲತಾ ದಾಮ್ಲೆ
ವಿಜ್ಞಾನ ಮತ್ತು ಔಷಧ ಕ್ಷೇತ್ರದಲ್ಲಿ ಮಹಿಳೆಯರೂ ಕೂಡ ಮಹೋನ್ನತ ಸಾಧನೆಗಳನ್ನು ಮಾಡುತ್ತಿದ್ದಾರೆ. ಅಂತವರಲ್ಲಿ ಡಾಕ್ಟರ್ ಲತಾ ದಾಮ್ಲೆ (Dr. Latha Damle) ಕೂಡ ಪ್ರಮುಖರು. ಮೂಲತಃ ಉಡುಪಿಯ ಕುಂದಾಪುರದವರಾದ ಲತಾ ದಾಮ್ಲೆಯ ತಂದೆ ಯೋಧರಾಗಿದ್ದರು. ಬಾಲ್ಯದಲ್ಲೇ ಸಂಗೀತದ ಮೇಲೆ ಆಸಕ್ತಿ. ತಂದೆ ಮಗಳು ಆಸೆ ಐಎಎಸ್ ಆಗಬೇಕು ಎಂದು ಕನಸು ಕಂಡಿದ್ದರು. ಆದರೆ ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಡುವ ಲತಾ ದಾಮ್ಲೆ ಇವತ್ತು ಅಟ್ರಿಮೆಡ್ ಬಯೋಟೆಕ್ ಸಂಸ್ಥೆ ಮೂಲಕ ಔಷಧ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿದ್ದಾರೆ.

ಲಂಡನ್‍ನ ಡ್ರಗ್ ಡಿಸ್ಕವರಿ ಆಂಡ್ ಡೆವಲಪ್ಮೆಂಟ್‍ನಲ್ಲಿ ಎಂಎಸ್ ಮಾಡಿರುವ ಲತಾ ದಾಮ್ಲೆ ಬೆಂಗಳೂರಿನಲ್ಲಿ ಪ್ಲಾಂಟ್ ಫಾರ್ಮಕಾಲಜಿಯಲ್ಲಿ ಎಂಡಿ ಮುಗಿಸಿದ್ದರು. 25 ವರ್ಷಗಳ ಕಾಲ ರೇರ್ ಆಯುರ್ವೇದಿಕ್ ಸೆಂಟರ್‌ನಲ್ಲಿ ಮುಖ್ಯ ವೈದ್ಯೆಯಾಗಿ ಕೆಲಸ ಮಾಡಿರುವ ಲತಾ ದಾಮ್ಲೆ 2016ರಲ್ಲಿ ತನ್ನದೇ ಆದ ಅಟ್ರಿಮೆಡ್ ಬಯೋಟೆಕ್ ಸಂಸ್ಥೆ ಸ್ಥಾಪಿಸುತ್ತಾರೆ. ಇಲ್ಲಿ ಆಯುರ್ವೇದ ಸಸ್ಯಗಳ ಮೇಲೆ ಸಂಶೋಧನೆಗಳನ್ನು ನಡೆಸಿ ಔಷಧಗಳನ್ನು ಕಂಡುಹಿಡಿಯುವ ಕೆಲಸ ಮಾಡುತ್ತಿದ್ದಾರೆ.

Dr. Latha Damle

ಉರಿಯೂತ, ಕ್ಯಾನ್ಸರ್ ಇಮ್ಯುನಾಲಜಿ, ಗಾಯಗಳಿಗೆ ಚಿಕಿತ್ಸೆ, ಚರ್ಮರೋಗಗಳು ಹಾಗೂ ಡಯಾಬಿಟೀಸ್ ರೋಗಕ್ಕೆ ಸಂಬಂಧಪಟ್ಟ ಔಷಧಗಳ ಸಂಶೋಧನೆಯನ್ನು ಇವರು ನಡೆಸಿದ್ದಾರೆ. ಸೋರಿಯಾಸಿಸ್, ಆಸ್ತಮಾ, ಡಯಾಬಿಟಿಸ್, ಅಲರ್ಜಿ ಮುಂತಾದ ರೋಗಗಳಿಗೆ ಹರ್ಬಲ್ ಮೆಡಿಸಿನ್‍ಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ್ದಾರೆ.

ವೈಶಾಲಿ
ಎಷ್ಟೋ ಬಾರಿ ಪ್ರತಿಭೆಗೆ ಅತಿದೊಡ್ಡ ಪ್ರತಿಸ್ಪರ್ಧಿಯಾಗುವುದು ಬಡತನ. ಅದರಲ್ಲೂ ಕ್ರೀಡಾ ಕ್ಷೇತ್ರಗಳಲ್ಲಿ ಸಾಧಿಸಬೇಕು ಅಂದರೆ ಮೊದಲ ಸೋಲಿಸಬೇಕಾಗಿರೋದು ಈ ಬಡತವನ್ನು. ಛಲ ಇದ್ದರೆ ಬಡತನ ಅಡ್ಡಿಬರುವುದಿಲ್ಲ ಎನ್ನುವುದಕ್ಕೆ ಉದಾಹರಣೆಯೇ ಕುರಿಗಾಹಿ ಬಂಗಾರದ ಹುಡುಗಿ ವೈಶಾಲಿ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಯುವತಿ ವೈಶಾಲಿ (Vaishali) ದನದ ಗುಡಿಸಲಿನಲ್ಲಿ ಅರಳಿದ ಕ್ರೀಡಾಪ್ರತಿಭೆ. ಗುರುಪ್ರಕಾಶ ಹಾಗೂ ಲಕ್ಷ್ಮಿದೇವಿಯವರ ಕೊನೆಯ ಮಗಳಾದ ವೈಶಾಲಿ ಕಡುಬಡತನದಲ್ಲೇ ಬೆಳೆದ ಈಕೆಗೆ ಕ್ರೀಡೆಯ ಕಡೆಗೆ ಸೆಳೆತ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಇವರು ಮಲೇಷ್ಯಾದ ಅಂತಾರಾಷ್ಟ್ರೀಯ ಥ್ರೋಬಾಲ್ (Throw Ball) ಸ್ಪರ್ಧೆಗೆ ಆಯ್ಕೆಯಾಗ್ತಾರೆ. ಭಾರತದ ರಾಷ್ಟ್ರೀಯ ಥ್ರೋಬಾಲ್ ತಂಡದಲ್ಲಿ ಸ್ಥಾನ ಪಡೆದ ಬಳಿಕ ಮಲೇಷ್ಯಾಗೆ ತೆರಳಲು ತೀವ್ರ ಹಣಕಾಸಿನ ಅಡಚಣೆಯಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಜಿಲ್ಲೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನಾಗಿರಲಿಲ್ಲ. ಆಗ ವದ್ದಿಕೆರೆ ಗ್ರಾಮಸ್ಥರು ಇಡೀ ಗ್ರಾಮದಲ್ಲಿ ಚಂದ ಹಣ ಸಂಗ್ರಹಿಸಿ ವೈಶಾಲಿ ಗೆದ್ದು ಬರುವಂತೆ ಹರಸಿ ಮಲೇಶಿಯಾಕ್ಕೆ ಕಳುಹಿಸುತ್ತಾರೆ. ಹೀಗಾಗಿ ಛಲ ಬಿಡದೇ ಆಧುನಿಕ ಓಬವ್ಬಳಂತೆ ಸೆಣಸಾಡಿರೊ ವೈಶಾಲಿ ಮಲೇಶಿಯಾದಲ್ಲಿ ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.

Vaishali

ವೈಶಾಲಿಯವರು 2022 ರಿಂದ 2023 ರ ಒಂದು ವರ್ಷದ ಅವಧಿಯಲ್ಲೇ ಕೇರಳ ಹಾಗೂ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಥ್ರೋಬಾಲ್ ಮತ್ತು ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಹಾಗೆಯೇ ಮಲೇಶಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಥ್ರೋಬಾಲ್ ಪಂದ್ಯಾವಳಿಯಲ್ಲೂ ಬಂಗಾರದ ಪದಕ ಗಳಿಸಿ ಮಿಂಚಿದ್ದಾರೆ. ಕುರು ಜಾನುವಾರುಗಳನ್ನು ಕಾದುಕೊಂಡೇ ತಮ್ಮ ಜಮೀನಿನಲ್ಲಿ ಅಭ್ಯಾಸ ಮಾಡ್ತಿದ್ದ ವೈಶಾಲಿ ಇವತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದಿರೋದು ಕೇವಲ ವದ್ದಿಕೆರೆ ಗ್ರಾಮಕ್ಕೆ ಮಾತ್ರವಲ್ಲ ಇಡೀ ಕರ್ನಾಟಕ ರಾಜ್ಯ ಹಾಗೂ ಭಾರತಕ್ಕೂ ಹೆಮ್ಮೆ.

ಡಾ.ಯಮುನಾ ಬಿ ಎಸ್
ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಭಾರತದ ಸಾಂಪ್ರದಾಯಿಕ ಆರ್ಯುವೇದ ವೈದ್ಯ ಪದ್ಧತಿ ಕಡೆಗೆ ಒಲವು ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ದೇಶದ ಆಯುರ್ವೇದ ಕ್ಷೇತ್ರದಲ್ಲಿ ಇವತ್ತು ಹೆಸರು ಮಾಡುತ್ತಿರೋದು ಗುಡುಚಿ-ದಿ ಆಯುರ್ವೇದಿ ಸಂಸ್ಥೆ. 2014ರಲ್ಲಿ ಆರಂಭವಾದ ಈ ಸಂಸ್ಥೆ ಇದು ದೇಶ ವಿದೇಶಗಳಲ್ಲಿ ತನ್ನ ಛಾಪು ಮೂಡಿಸಿದೆ. ಇದರ ಹಿಂದಿರುವ ರೂವಾರಿಯೇ ಮಹಿಳಾ ಸಾಧಕಿ, ಆಯುರ್ವೇದ ವೈದ್ಯೆ ಡಾ ಯಮುನಾ ಬಿಎಸ್.

ಬೆಂಗಳೂರಿನ ಸರ್ಕಾರಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ 2008ರಲ್ಲಿ ಬಿಎಎಂಎಸ್ ಪದವಿ ಮುಗಿಸಿದ ಯಮುನಾ ಬಿಎಸ್ (Dr. Yamuna B S) 2013ರವರೆಗೆ ಅನನ್ಯಾ ಆಯುರ್ವೇದದಲ್ಲಿ ಕೆಲಸ ಮಾಡಿದರು. ನಂತರ ಗುಡುಚಿ ಆಯುರ್ವೇದ (Ayurveda) ಕ್ಲಿನಿಕ್ ಆರಂಭಿಸಿದ ಡಾ.ಯಮುನಾ ಕೆಲವೇ ವರ್ಷಗಳಲ್ಲಿ ಅದನ್ನು ಬ್ರ್ಯಾಂಡ್ ಅನ್ನಾಗಿ ಮಾಡಿದ್ರು. ಕಳೆದ ಎಂಟು ವರ್ಷಗಳಲ್ಲಿ 250ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಿರುವ ಡಾ.ಯಮುನಾ ಉಡುಪಿಯಲ್ಲಿ ಬೃಹತ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದಾರೆ. ಇಲ್ಲಿಂದ ಬ್ರಿಟನ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಆಯುರ್ವೇದ ಉತ್ನನ್ನಗಳು ರಫ್ತಾಗುತ್ತವೆ.

Dr. Yamuna B S

ಔಷಧರಹಿತ ಜೀವನದ ಗುರಿ ಇಟ್ಟುಕೊಂಡು ಸಂತಾನಹೀನತೆ, ಡಯಾಬಿಟಿಸ್, ಪಿಸಿಒಎಸ್, ಹೈಪೋಥೈರಾಯ್ಡ್ ಹಾಗೂ ಕ್ಯಾನ್ಸರ್‌ನಂತಹ ರೋಗಗಳಿಗೆ ಚಿಕಿತ್ಸೆ ನೀಡುತ್ತಾರೆ ಡಾ.ಯಮುನಾ. ಇವತ್ತು ಗುಡುಚಿ ಆಯುರ್ವೇದ 60ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕೊಟ್ಟಿದೆ. ಆರೋಗ್ಯಕರ ಸಮಾಜದ ಗುರಿ ಇಟ್ಟುಕೊಂಡು, ಜೀವನಪರ್ಯಂತ ಔಷಧ ಸೇವಿಸುವಂತ ಕಾಯಿಲೆಯನ್ನೂ ಗುಣಪಡಿಸಿ, ಔಷಧರಹಿತ ಸುದೀರ್ಘ ಜೀವನ ನಡೆಸುವಂತಾಗಲು ಶ್ರಮಿಸುತ್ತಿದ್ದಾರೆ.

ಸುಮಿತಾ ನವಲಗುಂದ
ಸ್ವಾವಲಂಬಿಯಾಗಬೇಕು ಎನ್ನುವ ಹಠ ಅಸಾಮಾನ್ಯ ಸಾಧನೆಗೆ ದಾರಿಯಾಗುತ್ತದೆ. ಬಡತನ, ಪತಿಯ ಅಕಾಲಿಕ ಮರಣ, ಮಗಳನ್ನು ಸಾಕುವ ಜವಾಬ್ದಾರಿ. ಹೀಗೆ ಜೀವನದ ಸವಾಲವನ್ನೇ ಸಾಧನೆಯ ಮೆಟ್ಟಿಲನ್ನಾಗಿ ಮಾಡಿರುವ ಧೀರ ಮಹಿಳೆ ಸುಮಿತಾ ನವಲಗುಂದ.

17 ವರ್ಷಗಳ ಹಿಂದೆನೇ ತನ್ನ ಪತಿಯನ್ನು ಕಳೆದುಕೊಂಡು, ಒಂದು ಹೆಣ್ಣು ಮಗುವಿನ ತಾಯಿಯೂ ಆಗಿರುವ ಸುಮಿತಾ (Sumitha Nvalagunda) ಹೆಗಲ ಮೇಲೆ ಸಂಸಾರದ ಜವಾಬ್ದಾರಿ ಬೀಳುತ್ತದೆ. ತನ್ನ ತಾಯಿಯ ಜೊತೆ ಧಾರವಾಡದ ಮುರುಘಾಮಠದ ಬಳಿ ನೆಲೆಸಿರುವ ಸುಮಿತ್ರಾ ಜೀವನ ಕಟ್ಟಿಕೊಳ್ಳಲು ಆರಂಭದಲ್ಲಿ ಎನ್‍ಜಿಒ ಒಂದರಲ್ಲಿ ಕೆಲಸ ಮಾಡ್ತಾರೆ. ನಂತರ ಬ್ಯೂಟಿ ಪಾರ್ಲರ್ ತೆರೆದ್ರೂ ಜೀವನ ನಡೆಸೋದು ಕಷ್ಟವಾಗಿದ್ದಾಗ ಸುಮಿತ್ರಾ ತೋರಿದ ಅದೊಂದು ಧೈರ್ಯ ಅವರನ್ನು ಇವತ್ತು ಈ ಮಟ್ಟಿಗೆ ತಂದು ನಿಲ್ಲಿಸಿದೆ.

ಕೆಲ ವರ್ಷಗಳ ಹಿಂದೆ ಒಂದು ಮಾರ್ಕೆಟಿಂಗ್ ಕಂಪನಿ ಹುಣಸೇಹಣ್ಣಿನ ಚಿಗಳಿ ಮಾಡುವುದಕ್ಕೆ ಆಹ್ವಾನ ಕೊಟ್ಟಿದ್ದರು. ಇದರಲ್ಲಿ ಭಾಗವಹಿಸಿದ್ದ ಸುಮಿತ್ರಾ ಮನೆಯಲ್ಲೇ ಸ್ವಲ್ಪ ಚಿಗಳಿ ತಯಾರಿಸಿಕೊಂಡು ಹೋಗಿದ್ದರು. ಇವರ ಚಿಗಳಿ ಮಾಡುವ ಆರ್ಡರ್ ಕೊಡ್ತಾರೆ. ಸಿಕ್ಕ ಅವಕಾಶ ತಪ್ಪಿಸಿಕೊಳ್ಳಬಾರದು ಅಂತ ನಿರ್ಧರಿಸಿ ಸುಮಿತ್ರಾ ಹಾಗೂ ಆಕೆಯ ತಾಯಿ ಮೊದಲು ಮನೆಯಲ್ಲೇ ಹಗಲು ರಾತ್ರಿ ಎನ್ನದೇ ಕೈಯಿಂದ ಕುಟ್ಟಿ ಚಿಗಳಿ ತಯಾರು ಮಾಡಿ ಕಳಿಹಿಸುತ್ತಾರೆ. ಆರಂಭದಲ್ಲಿ ಸುಮಿತ್ರಾಗೆ ವಾರಕ್ಕೆ 1800 ಚಿಗಳಿ ಆರ್ಡರ್ ಮಾತ್ರ ಮಾಡಲು ಸಾಧ್ಯವಾಗುತಿತ್ತು. ಆದರೆ ಇವತ್ತು ಇದೇ ಸುಮಿತ್ರಾ ದಿನಕ್ಕೆ 30 ಸಾವಿರ ಚಿಗಳಿ ತಯಾರು ಮಾಡ್ತಾರೆ. ಕೇವಲ 2 ಸಾವಿರ ರೂಪಾಯಿ ಹಣ ಹಾಕಿ ಆರಂಭ ಮಾಡಿದ್ದ ಈ ಚಿಗಳಿ ವ್ಯಾಪಾರ ಈಗ ಲಕ್ಷ ಲಕ್ಷ ಹಣ ಗಳಿಸುತ್ತಿದೆ.

Sumitha Nvalagunda

ಮೊದಲು ತನ್ನ ಮನೆ ನಡೆಸಲು ಕಷ್ಟ ಪಡುತಿದ್ದ ಈ ಮಹಿಳೆ ಈಗ 63 ಕುಟುಂಬಗಳಿಗೆ ಬೆಳಕಾಗಿದ್ದಾರೆ. ಮನೆಯಿಂದ ಆರಂಭವಾದ ಈ ಉದ್ಯಮ ಇಂದು ಒಂದು ಗೋಡೌನ್‍ನಲ್ಲಿ ನಡೆಯುತ್ತಿದ್ದು 63 ಮಹಿಳೆಯರು ಇಲ್ಲಿ ಕೆಲಸ ಮಾಡುತ್ತಾರೆ. ಕಷ್ಟದ ಬದುಕನ್ನ ಸಾಗಿಸುತಿದ್ದ ಈ ಮಹಿಳೆಯರು ಇವತ್ತು ಸುಮಿತ್ರಾ ಕೊಟ್ಟ ಕೆಲಸದಿಂದ ಒಂದು ತುತ್ತು ಅನ್ನ ತಿನ್ನುವಂತೆ ಆಗಿದೆ.

ಡಾ.ಕಿರಣ್ ರೆಡ್ಡಿ
ನಹಿ ಜ್ಞಾನೇನ ಸದೃಶಂ’ ಅಂತ ಭಾರತದ ಪ್ರಾಚೀನ ಗೀತಾಮೃತದಲ್ಲಿ ಹೇಳಲಾಗಿದೆ. ಇಂತಹ ಜ್ಞಾನ ತುಂಬವ ಕೆಲಸವನ್ನು ಮಾಡುತ್ತಿರುವುದು ನಮ್ಮ ಶಿಕ್ಷಣ ಸಂಸ್ಥೆಗಳು. ಕಳೆದ 36 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡು ತನ್ನದೇ ಆದ ಛಾಪು ಮೂಡಿಸಿರುವವರು ಡಾ ಕಿರಣ್ ರೆಡ್ಡಿ.

ಆಚಾರ್ಯ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಸೈನ್ಸ್ (Acharya Institute of Management and Sciences, Bengaluru) ಸಂಸ್ಥೆಯನ್ನು ಹುಟ್ಟುಹಾಕಿದ ಕಿರಣ್ ರೆಡ್ಡಿ (Dr Kiran Reddy) ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಜ್ಞಾನ ಮತ್ತು ಕೌಶಲ್ಯವನ್ನು ಸಂಪಾದನೆ ಮಾಡಿ ನಾಡಿಗೆ ಹೆಸರು ತಂದಿದ್ದಾರೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದರಿಂದ ಹಿಡಿದು ಸಂಸ್ಥೆಯ ಮುಖ್ಯಸ್ಥೆಯಾಗಿ ಆಡಳಿತ ನಡೆಸುತ್ತಾ ವಿವಿಧ ರಾಜ್ಯಮಟ್ಟದ ಶೈಕ್ಷಣಿಕ ಸಮಿತಿಗಳ, ಒಕ್ಕೂಟಗಳ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ ಕಿರಣ್ ರೆಡ್ಡಿ. ಬೆಂಗಳೂರು ವಿಶ್ವವಿದ್ಯಾಲಯದ ಸ್ಥಳೀಯ ವಿಚಾರಣಾ ಸಮಿತಿಯ ಮುಖ್ಯಸ್ಥೆಯಾಗಿಯೂ ಕೆಲಸ ಮಾಡಿದ್ದಾರೆ.

Dr Kiran Reddy

28 ವರ್ಷಗಳಿಂದ ಆಚಾರ್ಯ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್ಮೆಂಟ್ ಆಂಡ್ ಸೈನ್ಸ್‌ ಕಟ್ಟಿ ಬೆಳೆಸಿ ಇವತ್ತು ರಾಷ್ಟ್ರಮಟ್ಟದ ಶಿಕ್ಷಣ ಸಂಸ್ಥೆಗಳ ಜೊತೆ ಸ್ಪರ್ಧಿಸುವಷ್ಟು ಪ್ರಬಲ ಸಂಸ್ಥೆಯನ್ನಾಗಿ ಮಾಡುವುದರಲ್ಲಿ ಇವರ ಕೊಡುಗೆ ದೊಡ್ಡದಿದೆ. ಶಿಕ್ಷಣ ಕ್ಷೇತ್ರದಲ್ಲಿ ಹಲವು ಸಂಶೋಧನೆಗಳನ್ನು ನಡೆಸಿ ಹತ್ತಾರು ಉಪನ್ಯಾಸಗಳನ್ನು ನೀಡಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ ಡಾ.ಕಿರಣ್ ರೆಡ್ಡಿ.

ಜಯಮ್ಮ
2023ನೇ ವರ್ಷವನ್ನು ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನಾಗಿ ( International Year Millets) ಘೋಷಿಸಿದೆ. ಇವತ್ತು ಸಿರಿಧಾನ್ಯಗಳಿಗೆ ಅಷ್ಟರಮಟ್ಟಿಗೆ ಮಹತ್ವವಿದೆ. ಇದೇ ಸಿರಿಧಾನ್ಯ ಕೃಷಿಯಲ್ಲಿ ಅಪೂರ್ವ ಸಾಧನೆ ಮಾಡಿದವರು ಹಾವೇರಿಯ ಜಯಮ್ಮ.

ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ದೊಡ್ಡಗುಬ್ಬಿ ಗ್ರಾಮದ ಜಯಮ್ಮ (Jaymamma) ಆರಂಭದಲ್ಲಿ ನರ್ಸ್ ಆಗಿ ಕೆಲಸ ಮಾಡ್ತಿದ್ದರು. ಸುಮಾರು 4 ವರ್ಷ ನರ್ಸ್ ಆಗಿ ಕೆಲಸ ಮಾಡಿರುವ ಜಯಮ್ಮಗೆ ಕೃಷಿಯ ಕಡೆಗೆ ಒಲವು ಬೆಳೆಯುತ್ತದೆ. ಸಾವಯವ ಕೃಷಿಯ ತರಬೇತಿ ಪಡೆಯುವ ಜಯಮ್ಮ ಇದ್ದ ಒಂದು ಎಕರೆಯಲ್ಲೇ ಸಾವಯವ ಬೆಳೆಯನ್ನು ಬೆಳೆಯಲು ಪ್ರಾರಂಭಿಸುತ್ತಾರೆ. ಅದರಲ್ಲೂ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ನವಣೆ, ಸಾವೆ, ಸಜ್ಜೆ, ಬರಗು, ತೊಗರೆ ಸೇರಿದಂತೆ ವಿವಿಧ ಸಿರಿಧಾನ್ಯಗಳನ್ನ ಬೆಳೆದು ಮಾರಾಟ ಮಾಡುತ್ತಿದ್ದರು. ಅದರೆ ಅದರಲ್ಲಿ ಯಾವುದೇ ಲಾಭ ಸಿಗುತ್ತಿರಲಿಲ್ಲ. ಈ ಸಂದರ್ಭ ಬೆಂಗಳೂರಿನ ಸಹಜ ಸಮೃದ್ಧ ಸಂಸ್ಥೆಯ ಮೂಲಕ ಮಾರ್ಗದರ್ಶನ ಹಾಗೂ ತರಬೇತಿ ಪಡೆದು ಸಿರಿಧಾನ್ಯಗಳಿಂದ ಸ್ವಯಂ ಉತ್ಪನ್ನಗಳನ್ನ ರೆಡಿ ಮಾಡಲು ಪ್ರಾರಂಭಿಸುತ್ತಾರೆ. ಇಲ್ಲಿಂದ ಇವರ ಯಶೋಗಾಥೆ ಆರಂಭವಾಗುತ್ತದೆ.

Jaymamma

2009ರಿಂದ ಸಾವಯವ ಕೃಷಿಯಲ್ಲಿ ಸಿರಿಧಾನ್ಯಗಳನ್ನು ಬೆಳೆದು ತಾವೇ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ ಜಯಮ್ಮ.ಗಗನ್ ಎಂಟರ್‍ಪ್ರೈಸರ್ ಎಂಬ ಸಂಸ್ಥೆಯ ಮೂಲಕ ಹತ್ತಾರು ಮಹಿಳೆಯರಿಗೆ ಉದ್ಯೋಗವನ್ನೂ ನೀಡಿರುವ ಜಯಮ್ಮ ಗ್ರಾಮದ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳಾ ಸದಸ್ಯರಿಗೆ ಸಿರಿಧಾನ್ಯಗಳ ಮಾಹಿತಿ, ಹಾಗೂ ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಗ್ರಾಮದ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುತ್ತಿದ್ದಾರೆ.

ಅಂಜಲಿ ರಾಮಚಂದ್ರ
21ನೇ ಶತಮನಾದಲ್ಲಿ ಮಹಿಳೆ ಮನೆಯೊಳಗೆ ಮಾತ್ರವಲ್ಲ ಮನೆಯ ಹೊರಗೆನೂ ಮಲ್ಟಿಟಾಸ್ಕಿಂಗ್‍ನಲ್ಲಿ ಮಿಂಚುತ್ತಿದ್ದಾಳೆ. ಹೀಗೆ ನಮ್ಮ ನಡುವೆ ಇರುವ ಬಹುಮುಖಪ್ರತಿಭೆಯಲ್ಲೊಬ್ಬರು ಅಂಜಲಿ ರಾಮಚಂದ್ರ. ಸಿನಿಮಾ, ನಿರೂಪಣೆ, ಉಪನ್ಯಾಸ, ನೃತ್ಯ, ಕೊರಿಯಾಗ್ರಫಿ ಹೀಗೆ ಅಂಜಲಿ ಮುಟ್ಟದ ಕ್ಷೇತ್ರಗಳಿಲ್ಲ.

ಕ್ರಿಯೇಟಿಕ್ಸ್ ಮೀಡಿಯಾ ಮತ್ತು ಮಹಾವತಾರ ಮೀಡಿಯಾ ಕಮ್ಯುನಿಕೇಶನ್‍ನ ಸಂಸ್ಥಾಪಕಿ ಮತ್ತು ಸಿಇಒ ಆಗಿರುವ ಅಂಜಲಿ ರಾಮಚಂದ್ರ (Anjali Ramachandra) ಮೀಡಿಯಾ ಟೆಕ್ ಸ್ಟಾರ್ಟಪ್ ಮೂಲಕ ಉದ್ಯಮಕ್ಕೆ ಬಂದವರು. ಮೂಲತಃ ನಟಿಯಾಗಿದ್ದ ಅಂಜಲಿ ಮನರೋಥ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿಯಾಗಿದ್ದರು. ಇದಾದ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದ ಅಂಜಲಿ ನಟನೆಗಷ್ಟೇ ತಮ್ಮನ್ನು ಸೀಮಿತಗೊಳಿಸಲಿಲ್ಲ. ಕ್ರಿಯೇಟಿಕ್ಸ್ ಮೀಡಿಯಾ ಮತ್ತು ಮಹಾವತಾರ್ ಮೀಡಿಯಾ ಕಮ್ಯುನಿಕೇಶನ್ ಪ್ರಾರಂಭಿಸಿದರು.

Anjali Ramachandran

ಜಾಹೀರಾತು, ಕಾರ್ಪೋರೇಟ್ ಫಿಲ್ಮ್ಸ್, ಡಾಕ್ಯುಮೆಂಟರಿಗಳು, ಬ್ರ್ಯಾಂಡ್ ಮ್ಯಾನೇಜ್ಮೆಂಟ್ ಸೇರಿದಂತೆ ಎಲ್ಲವನ್ನೂ ಮಾಡುತ್ತದೆ ಈ ಸಂಸ್ಥೆ. ಇದರ ಜೊತೆಗೆ ಅಂಜಲಿ ಕನ್ನಡದ ಪ್ರಖ್ಯಾತ ಮನರಂಜನಾ ವಾಹಿನಿಗಳಲ್ಲಿ ಆಂಕರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಹಲವು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ತನ್ನ ಪ್ರತಿಭೆ ತೋರಿಸಿದ್ದಾರೆ. ಡ್ಯಾನ್ಸರ್ ಆಗಿಯೂ ಗುರುತಿಸಿಕೊಂಡಿರುವ ಅಂಜಲಿ ಹಲವು ಪ್ರದರ್ಶನಗಳನ್ನು ನೀಡಿದ್ದಾರೆ. ಅಂಜಲಿ ಸ್ಕೂಲ್ ಆಫ್ ಡ್ಯಾನ್ಸ್ ಆಂಡ್ ಮ್ಯೂಸಿಕ್ ಅನ್ನೋ ಸಂಸ್ಥೆಯ ಮೂಲಕ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೆಳಕಾಗಿದ್ದಾರೆ. ಇವರ ಸಾಧನೆಗೆ ಡಾಟರ್ ಆಫ್ ಇಂಡಿಯಾ, ರಾಮ್‍ನಾಥ್ ಗೋಯೆಂಕಾ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ.

ದಿವ್ಯಜ್ಯೋತಿ
ಕಷ್ಟ ಕಾಲಕ್ಕೆ ಆದವರೇ ನಿಜವಾದ ನೆಂಟರು ಎಂಬ ಮಾತಿದೆ. ಸ್ತ್ರೀ ಸ್ವಸಹಾಯ ಗುಂಪುಗಳು ನಿಸ್ಸಂದೇಹವಾಗಿ ಇಂದು ಆಪತ್ಬಾಂಧವನ ಪಾತ್ರ ನಿರ್ವಹಿಸುತ್ತಿವೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆಂದೇ ರಚನೆಗೊಂಡ ಸ್ವಸಹಾಯ ಸಂಘಗಳ ಪೈಕಿ ಕೊಪ್ಪಳ ಜಿಲ್ಲೆಯ ದಿವ್ಯಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯ್ತಿ (Divya Jyothi Grama Panchayat) ಒಕ್ಕೂಟಕ್ಕೆ ವಿಶೇಷ ಸ್ಥಾನ.

ಕೊಪ್ಪಳ ಜಿಲ್ಲೆ ಕುಕನೂರು ತಾಲೂಕು ಮಂಗಳೂರು ಗ್ರಾಮದ ಈ ಸಂಘ, ಸಾವಿರಾರು ಮಹಿಳೆಯರ ಆದಾಯಕ್ಕೊಂದು ದಾರಿ ಮಾಡಿಕೊಟ್ಟಿದೆ. ಈ ಒಕ್ಕೂಟದಿಂದ ನೆರವು ಪಡೆದ ಅದೆಷ್ಟೋ ವನಿತೆಯರು ಸ್ವಯಂ ಸಮೃದ್ಧ ಬದುಕು ಕಟ್ಟಿಕೊಂಡಿದ್ದಾರೆ. ದಿವ್ಯಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟ ಆರಂಭವಾಗಿದ್ದು 2015ರಲ್ಲಿ. ಕೇವಲ ಒಂದು ಲಕ್ಷ ರೂಪಾಯಿ ಸದಸ್ಯರ ಬಂಡವಾಳದೊಂದಿಗೆ ಶುರುವಾದ ಈ ಒಕ್ಕೂಟ ಇಂದು ಹೆಮ್ಮರವಾಗಿ ಬೆಳೆದಿದೆ. ಸದ್ಯ ಈ ಸ್ವಸಹಾಯ ಗುಂಪಿನ ಬಳಿ ಒಂದೂವರೆ ಕೋಟಿ ರೂಪಾಯಿ ಸಮುದಾಯ ಬಂಡವಾಳ ನಿಧಿ ಇದೆ ಎಂದರೆ ಅದು ಇವರ ಪರಿಶ್ರಮ ಸಿಕ್ಕ ಬೆಲೆ.

Divya Jyothi Grama Panchayat

ಮಂಗಳೂರು ಗ್ರಾಮದಲ್ಲಿ ಕೆಲವರು ಕೃಷಿ ಮಾಡ್ತಾರೆ, ತರಕಾರಿ ಬೆಳೆದು ಮಾರುತ್ತಾರೆ, ಕೌದಿ ಹೊಲೆಯುತ್ತಾರೆ, ಕಿರಾಣಿ ಅಂಗಡಿ, ಹಿಟ್ಟಿನ ಗಿರಣಿ ಇಟ್ಕೊಂಡಿದ್ದಾರೆ. ಹೀಗೆ ಸ್ವಸಹಾಯ ಗುಂಪಿನಿಂದ ಸಾಲ ಪಡೆದು ನಿತ್ಯ ದುಡಿಮೆ ಮಾಡುತ್ತಿದ್ದಾರೆ. ಬಸಮ್ಮ ಎಂಬಾಕೆಯ ಬಟ್ಟೆ ಅಂಗಡಿ 10 ಲಕ್ಷ ರೂಪಾಯಿವರೆಗೂ ವಹಿವಾಟು ನಡೆಸುತ್ತಿದೆ ಎಂದರೆ ನೀವು ನಂಬಲೇಬೇಕು. ಇಡೀ ಗ್ರಾಮದಲ್ಲಿ ಪ್ರತಿ ಮನೆಯಲ್ಲಿ ಒಬ್ಬೊಬ್ಬರು ಸ್ವಸಹಾಯ ಗುಂಪಿನ ಸದಸ್ಯರಾಗಿ. ಅದರ ಲಾಭ ಪಡೆದು ಸ್ವಾವಲಂಬಿಗಳಾಗಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ವತಿಯಿಂದ 10 ಸಾಧಕಿಯರಿಗೆ ನಾರಿ ನಾರಾಯಣಿ ಪಬ್ಲಿಕ್ ಹೀರೋ 2022 ವಿಶೇಷ ಪ್ರಶಸ್ತಿ ಪ್ರದಾನ

ರಮ್ಯಾ
ಸಾಮಾನ್ಯವಾಗಿ ಮನೆಯಲ್ಲಿ ಅಡುಗೆ ಮನೆ ಜವಾಬ್ದಾರಿ ಹೆಣ್ಣುಮಕ್ಕಳದ್ದೇ ಆಗಿದ್ರೂ ಹೋಟೆಲ್ ಉದ್ಯಮದಲ್ಲಿ ಮಹಿಳೆಯರು ಹೆಸರು ಮಾಡಿರುವುದು ವಿರಳ. ಇದಕ್ಕೆ ಅಪವಾದ ಎಂಬಂತೆ ಇದ್ದಾರೆ ರಮ್ಯಾ. ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಪದವಿ ಮುಗಿಸಿದ ರಮ್ಯಾ (Ramya) ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಶಾರ್ಟ್‍ಟರ್ಮ್ ಕೋರ್ಸ್ ಮಾಡಿದ್ದಾರೆ. ಆಹಾರಗಳ ಮೇಲೆ ವಿಶೇಷ ಆಸಕ್ತಿಹೊಂದಿದ್ದ ರಮ್ಯಾ ಎಂಟು ವರ್ಷಗಳ ಕಾಲ ಹೋಟೆಲ್ ಉದ್ಯಮದಲ್ಲಿ ಕೆಲಸ ಮಾಡಿದ್ದರು.

ತಾನು ಎಲ್ಲರಿಗಿಂತ ವಿಭಿನ್ನವಾದದ್ದನ್ನು ಜನರಿಗೆ ಕೊಡಬೇಕು ಎನ್ನುವುದು ಇವರಿಗೆ ಯಾವಾಗಲೂ ಕಾಡುತ್ತಿತ್ತು. ಲಾಕ್‍ಡೌನ್ ಸಮಯದಲ್ಲಿ ತನ್ನ ಸೋದರಿ ಶ್ವೇತಾ ಜೊತೆ ಸೇರಿ ಆರ್‍ಎನ್‍ಆರ್ ದೊನ್ನೆ ಬಿರಿಯಾನಿ ಹೋಟೆಲ್ (RNR Donne Biryani Hotel) ಶುರುಮಾಡುತ್ತಾರೆ. ಸಾಂಪ್ರದಾಯಿಕ ದೊನ್ನೆ ಬಿರಿಯಾನಿಗೆ ವಿಶಿಷ್ಟವಾದ ಮಸಾಲೆ ಮತ್ತು ಫ್ಲೇವರ್‌ ಸೇರಿಸಿ ಕಡಿಮೆ ಅವಧಿಯಲ್ಲೇ ಜನಪ್ರಿಯತೆ ಗಳಿಸುತ್ತಾರೆ.

Ramya

ಸದ್ಯ ಬೆಂಗಳೂರಿನಲ್ಲಿ ಮನೆ ಮಾತಾಗಿರುವ ಆರ್‌ಎನ್‍ಆರ್ ದೊನ್ನೆ ಬಿರಿಯಾನಿ 2020ನೇ ಸಾಲಿನ `ಬೆಸ್ಟ್ ಬ್ರ್ಯಾಂಡ್ ಲಾಂಚ್’ ಅನ್ನೋ ಹೆಸರು ಗಳಿಸಿತ್ತು. ಈ ಮೂಲಕ ಹೋಟೆಲ್ ಉದ್ಯಮದಲ್ಲಿ ತನ್ನದೇ ಆದ ಬ್ರ್ಯಾಂಡ್ ಸೃಷ್ಟಿಸಿದ್ದಾರೆ ರಮ್ಯಾ.

TAGGED:international womens daynari narayani awardPublic TVನಾರಿ ನಾರಾಯಣಿ ಪ್ರಶಸ್ತಿಪಬ್ಲಿಕ್ ಟಿವಿಮಹಿಳಾ ದಿನಾಚರಣೆಸಾಧನೆ
Share This Article
Facebook Whatsapp Whatsapp Telegram

Cinema News

Chikkanna
`ಜೋಡೆತ್ತು’ ಮಾಡ್ತಾ ನಮ್ಗೂ ಜೋಡೆತ್ತು ಸಿಕ್ತು – ಮದ್ವೆ ಬಗ್ಗೆ ಚಿಕ್ಕಣ್ಣ ಫಸ್ಟ್ ರಿಯಾಕ್ಷನ್
Cinema Latest Sandalwood Top Stories
Kantara Chapter 1 2
ಮೂರು ದಿನದಲ್ಲಿ 52 ಕೋಟಿ – ಹಿಂದಿಯಲ್ಲೂ ಕಮಾಲ್‌ ಆರಂಭಿಸಿದ ಕಾಂತಾರ
Bollywood Cinema Latest Sandalwood
Jodettu
ಜೋಡೆತ್ತು ಸಿನಿಮಾಗೆ ಚಿಕ್ಕಣ್ಣ ಹೀರೋ
Cinema Latest Sandalwood
kantara chapter 1 droupadi murmu
ರಾಷ್ಟ್ರಪತಿ ಭವನದಲ್ಲಿ ‘ಕಾಂತಾರ’ ಪ್ರದರ್ಶನ – ರಿಷಬ್‌ ಚಿತ್ರತಂಡದ ಜೊತೆ ದ್ರೌಪದಿ ಮುರ್ಮು ಸಿನಿಮಾ ವೀಕ್ಷಣೆ
Cinema Latest Sandalwood Top Stories

You Might Also Like

Odisha
Latest

ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಕಲ್ಲು ತೂರಾಟ – ಇಂಟರ್ನೆಟ್ ಸ್ಥಗಿತ, 36 ಗಂಟೆಗಳ ಕಾಲ ಕರ್ಫ್ಯೂ

Public TV
By Public TV
2 hours ago
Womens World Cup 2025 1
Sports

ಮಹಿಳಾ ವಿಶ್ವಕಪ್‌ | ಭಾರತದ ವನಿತೆಯರ ಪರಾಕ್ರಮ – ಪಾಕ್‌ ವಿರುದ್ಧ 88 ರನ್‌ಗಳ ಭರ್ಜರಿ ಜಯ

Public TV
By Public TV
2 hours ago
Bihar Election
Latest

ಬಿಹಾರ ಚುನಾವಣೆಯಲ್ಲಿ 17 ಹೊಸ ಉಪಕ್ರಮ ಅಳವಡಿಸಿಕೊಂಡ ಚುನಾವಣಾ ಆಯೋಗ; ದೇಶದೆಲ್ಲೆಡೆ ಜಾರಿ

Public TV
By Public TV
3 hours ago
Male Mahadeshwara Hills Tiger
Chamarajanagar

ಹಸು ಬೇಟೆಯಾಡಿದ್ದಕ್ಕೆ ಸೇಡು – ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಕೊಂದಿದ್ದ ನಾಲ್ವರು ಅರೆಸ್ಟ್‌

Public TV
By Public TV
3 hours ago
Bengaluru Tree Fall 3
Bengaluru City

ಬೆಂಗಳೂರಲ್ಲಿ ಬೃಹತ್ ಗಾತ್ರದ ಮರದ ಕೊಂಬೆ ಬಿದ್ದು ಯುವತಿ ಸಾವು ‌

Public TV
By Public TV
3 hours ago
Heavy traffic jam on the highway in Nelamangala Bengaluru
States

ಸಾಲು ಸಾಲು ರಜೆ ಮುಗಿಸಿ ಬೆಂಗ್ಳೂರಿಗೆ ವಾಪಸ್‌ ಆಗ್ತಿರೋ ಜನ – ನೆಲಮಂಗಲದಲ್ಲಿ ಭಾರೀ ಟ್ರಾಫಿಕ್ ಜಾಮ್

Public TV
By Public TV
4 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?