-ಎಲ್ಲ ತಾಲೂಕು ಕೇಂದ್ರದಲ್ಲಿ ತಹಸೀಲ್ದಾರ್ಗೆ ಮನವಿ ಸಲ್ಲಿಕೆ
ಕೊಪ್ಪಳ: ಕಂದಾಯ ಸೇವೆ (Revenue Department) ನೀಡಲು ಅಗತ್ಯ ಮೂಲ ಸೌಲಭ್ಯ ಒದಗಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಗ್ರಾಮಾಡಳಿತ ನೌಕರರ ಸಂಘದಿಂದ ಜಿಲ್ಲಾದ್ಯಂತ ಗುರುವಾರ ಪ್ರತಿಭಟನೆ (Protest) ನಡೆಯಿತು.ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್ – ಕಾಂಗ್ರೆಸ್ ಶಾಸಕ, ಪುತ್ರ, ಪ್ರಭಾವಿಗಳಿಗೆ ಸೇರಿದ 44 ಕೋಟಿ ಮೌಲ್ಯದ ಆಸ್ತಿ ಜಪ್ತಿ
ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕೊಪ್ಪಳ (Koppala) ತಾಲೂಕು ಹಾಗೂ ಗ್ರಾಮಾಡಳಿತ ನೌಕರರ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಸರ್ಕಾರದ ಕಂದಾಯ ಇಲಾಖೆ ಮೂಲಕ 21 ವಿವಿಧ ಪ್ರಮಾಣ ಪತ್ರ ಮತ್ತು ಸೌಲಭ್ಯ ನೀಡುತ್ತದೆ. ಇದನ್ನು ತಂತ್ರಾಶದಲ್ಲಿ ದಾಖಲು ಮಾಡಿ, ಸೇವೆ ನೀಡಬೇಕಿದೆ. ಆದರೆ ಗ್ರಾಮ ಆಡಳಿತಾಧಿಕಾರಿಗಳಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಸೇವೆ ನೀಡುವುದು ಕಷ್ಟಸಾಧ್ಯವಾಗುತ್ತಿದೆ. ಈ ಹಿನ್ನೆಲೆ ಕೂಡಲೇ ಸರ್ಕಾರ ಕಂಪ್ಯೂಟರ್, ಇಂಟರ್ನೆಟ್ ಸೇರಿ ಮೂಲಸೌಲಭ್ಯ ಕಲ್ಪಿಸಬೇಕು. ಶಿಷ್ಠಾಚಾರದ ಕೆಲಸಕ್ಕೆ ಗ್ರಾಮ ಆಡಳಿತ ಅಧಿಕಾರಿಗಳಿಗೆ ರಿಯಾಯಿತಿ ನೀಡಬೇಕು. ಹಕ್ಕು ಬದಲಾವಣೆ ಮಾಡುವ ಅವಧಿ ವಿಸ್ತರಣೆ ಮಾಡಬೇಕು. ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.ಇದನ್ನೂ ಓದಿ: 3 PARAM ರುದ್ರ ಸೂಪರ್ ಕಂಪ್ಯೂಟರ್ಗಳಿಗೆ ಮೋದಿ ಚಾಲನೆ