ರಾಮನಗರ: ಚನ್ನಪಟ್ಟಣ ತಾಲೂಕಿನ ಮಲ್ಲುಂಗೆರೆ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿದ್ದ ಚಿರತೆವೊಂದು ಪತ್ತೆಯಾಗಿದೆ.
ಚಿರತೆ ತೆಂಗಿನ ಮರದಡಿಯಲ್ಲಿ ಮೇಲೇಳಲಾಗದೆ ಸ್ಥಳದಲ್ಲಿ ಬಿದ್ದಿದೆ. ಅಸ್ವಸ್ಥವಾಗಿದ್ರೂ ಚಿರತೆ ಜನರನ್ನು ಕಂಡು ಘರ್ಜಿಸುತ್ತಿದ್ದು, ಚಿರತೆ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಮುಗಿಬಿದ್ದಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆ ಸೆರೆ ಹಿಡಿಯಲು ಬೋನು ಇರಿಸಿದ್ದಾರೆ. ಈ ಚಿರತೆಯನ್ನು ಉಳಿಸಲು ಬನ್ನೇರುಘಟ್ಟದಿಂದ ವೈದ್ಯರು ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳದಲ್ಲೆ ವಲಯ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಬೀಡು ಬಿಟ್ಟಿದ್ದಾರೆ.