ಹಾವೇರಿ: ಇತ್ತೀಚೆಗೆ ಅಪಘಾತಗಳು ನಡೆದ ಸಂದರ್ಭದಲ್ಲಿ ಜನರು ಅಪಘಾತಕ್ಕೀಡಾದವರನ್ನು ರಕ್ಷಿಸುವ ಬದಲು ತಮ್ಮ ಮೊಬೈಲ್ ಫೋನಿನಲ್ಲಿ ವಿಡಿಯೋ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ. ಇಂತದ್ದೇ ಒಂದು ಘಟನೆ ಇದೀಗ ಹಾವೇರಿಯಲ್ಲೂ ನಡೆದಿದೆ.
ಹೌದು. ಶುಕ್ರವಾರ ಸಂಜೆ ಹಾವೇರಿ ತಾಲೂಕಿನ ತೋಟದ ಯಲ್ಲಾಪುರ ಗ್ರಾಮದ ಬಳಿ ಟಾಟಾ ಅಪೆ ಮತ್ತು ಟಂಟಂ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಪರಿಣಾಮ ನೆಲೋಗಲ್ ಗ್ರಾಮದ 70 ವರ್ಷದ ದಸ್ತಗೀರಸಾಬ ನರಳಾಡುತ್ತಿದ್ರು. ಆದ್ರೂ ಜನ ಅವರ ಸಹಾಯಕ್ಕೆ ಬರದೇ ಕಾಲಹರಣ ಮಾಡುವ ಮೂಲಕ ಮಾನವೀಯತೆ ಮರೆತಿದ್ದರು.
ಅಯ್ಯಯ್ಯೋ… ಯಪ್ಪಾ… ಎಂದು ಗೋಗರೆಯುತ್ತಿದ್ದರೂ ಜನ ನೋಡ್ತಾ ನಿಂತಿದ್ರೇ ಹೊರತು, ಆಸ್ಪತ್ರೆಗೆ ಸೇರಿಸಲಿಲ್ಲ. ಒಂದು ಗಂಟೆ ನರಳಾಡಿದ್ಮೇಲೆ ಆಂಬುಲೆನ್ಸ್ ಬಂದಿದೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬಳಿಕ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಯಿತು.
ಸದ್ಯಕ್ಕೆ ದಸ್ತಗಿರಸಾಬ್ ಪ್ರಾಣಾಪಾಯದಿಂದ ಪಾರಾಗಿದ್ದು, ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
https://www.youtube.com/watch?v=9HAc3AWyIBg&feature=youtu.be