– ಸುಭಾಷ್ ನಗರದ ಕಟ್ಟಡಕ್ಕೆ ಜೆಡಿಎಸ್ ಕಲರ್
ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರದ ಎಫೆಕ್ಟ್ ಈಗ ಯೋಜನೆಗಳಿಗೂ ತಟ್ಟಿದೆ. ಬೆಂಗಳೂರಿನ ಸುಭಾಷ್ ನಗರದ ಇಂದಿರಾ ಕ್ಯಾಂಟೀನ್ ಹಸಿರು ರಂಗು ಪಡೆದಿದೆ.
ಜೆಡಿಎಸ್ ಪಕ್ಷದ ಲಾಂಛನದ ಬಣ್ಣವನ್ನ ಇಂದಿರಾ ಕ್ಯಾಂಟೀನ್ಗೂ ಹಚ್ಚಲಾಗಿದೆ. ವಿಪರ್ಯಾಸ ಅಂದ್ರೆ ಇಲ್ಲಿನ ಕಾರ್ಪೋರೆಟರ್ ಕಾಂಗ್ರೆಸ್ನ ಗೋವಿಂದ ರಾಜು. ಅರೆ ಇವರಿಗ್ಯಾಕೆ ಜೆಡಿಎಸ್ ಪ್ರೇಮ ಅಂದ್ರೆ. ಇದೇ ರಸ್ತೆಯಲ್ಲಿ ಜೆಡಿಎಸ್ ಪಕ್ಷದ ಕಚೇರಿ ಇದೆ. ಹೀಗಾಗಿ ಮೈತ್ರಿ ತೋರಿಸಿಕೊಳ್ಳಲು ಬಣ್ಣ ಹಚ್ಚಿದ್ದಾರೆ ಅಂತ ಸ್ಥಳೀಯರು ತಿಳಿಸಿದ್ದಾರೆ.
ಅಂದಹಾಗೆ ಇಂದಿರಾ ಕ್ಯಾಂಟೀನ್ಗೆ ಯಾವುದೇ ಬಣ್ಣ ಬಳಿಯುವಂತಿಲ್ಲ. ಯಾವುದೇ ಫೋಟೋವನ್ನು ಹಾಕಂಗಿಲ್ಲ. ಆದ್ರೆ ಸ್ಥಳೀಯ ಶಾಸಕ ದಿನೇಶ್ ಗುಂಡೂರಾವ್ ಹಾಗೂ ಕಾರ್ಪೋರೆಟರ್ ಗೋವಿಂದರಾಜು ಫೋಟೋ ಇಲ್ಲಿ ರಾರಾಜಿಸ್ತಿದೆ. ಇದು ನಿಯಮ ಉಲ್ಲಂಘನೆಯಾಗಿದ್ದು ಕ್ರಮ ಕೈಗೊಳ್ಳುತ್ತೇವೆ ಅಂತ ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಒಟ್ಟಿನಲ್ಲಿ ಬಡವರಿಗೆ ಕೊಡೋ ಊಟದ ಜಾಗದಲ್ಲೂ ರಾಜಕೀಯ ಮಾಡ್ತಿರೋದು ನಿಜಕ್ಕೂ ವಿಪರ್ಯಾಸವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews