ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಕನ್ನಡಿಗರಿಗೆ ಇಂದಿರಾ ಕ್ಯಾಂಟೀನ್ ಉದ್ಯೋಗದಲ್ಲಿ ಶೇ.50ರಷ್ಟು ಮೀಸಲಾತಿ

Public TV
1 Min Read
bbmp mayor padmavathi

ಬೆಂಗಳೂರು: ಇಂದಿರಾ ಕ್ಯಾಂಟೀನ್ ಉದ್ಯೋಗದಲ್ಲಿ ಶೇ.50ರಷ್ಟು ಮೀಸಲಾತಿಯನ್ನು ಕನ್ನಡಿಗರಿಗೆ ನೀಡುವಂತೆ ಇಂದೇ ಆದೇಶಿಸುತ್ತೇವೆ ಎಂದು ಬಿಬಿಎಂಪಿ ಮೇಯರ್ ಪದ್ಮಾವತಿ ಹೇಳಿದ್ದಾರೆ.

ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ನಾವು ಟೆಂಡರ್ ನೀಡುವಾಗ ಈ ಅಂಶವನ್ನು ಪ್ರಸ್ತಾಪ ಮಾಡಿರಲಿಲ್ಲ. ಇವತ್ತು ನಾವು ಟೆಂಡರ್ ನೀಡಿದ ಕಂಪೆನಿಗಳಿಗೆ ಕನ್ನಡಿಗರಿಗೆ ಉದ್ಯೋಗ ನೀಡುವಂತೆ ಆದೇಶಿಸುತ್ತೇವೆ ಎಂದು ಹೇಳಿದರು.

ಇಂದಿರಾ ಕ್ಯಾಂಟೀನ್‍ನಲ್ಲಿ ಕನ್ನಡಿಗರಿಗೆ ಅನ್ಯಾಯ ಮಾಡಲು ಬಿಡುವುದಿಲ್ಲ. ಕೆಲಸ ನೀಡುವುದರಿಂದ ನೂರಾರು ಜನ ಕನ್ನಡಿಗರಿಗೆ ಉದ್ಯೋಗ ಸಿಕ್ಕಿದಂತಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಕನ್ನಡಿಗರರಿಗೆ ಕೆಲಸ ಕೊಡದೇ ಹೊರರಾಜ್ಯದವರಿಗೆ ಬಿಬಿಎಂಪಿ ಮಣೆ ಹಾಕಿದ್ದ ವಿಚಾರ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಯಲಾಗಿತ್ತು. ಆಂಧ್ರ ಹಾಗೂ ದೆಹಲಿ ಮೂಲದ ಕಂಪನಿಗಳಿಗೆ ಅಡುಗೆ ಟೆಂಡರ್ ನೀಡಲಾಗಿದ್ದು, ಈ ಕಂಪೆನಿಗಳು ಹೈದ್ರಾಬಾದ್ ಹಾಗೂ ಕೊಲ್ಕತ್ತಾ ಮೂಲದ ವ್ಯಕ್ತಿಗಳನ್ನು ಕೆಲಸಕ್ಕೆ ನೇಮಿಸಿತ್ತು.

indira canteen job

indira canteen job 1

indira canteen job 2

indira canteen job 3

indira canteen job 4

indira canteen job 5

indira canteen job 6

indira canteen job 7

indira canteen job 8

indira canteen job 9

indira canteen job 10

indira canteen job 11

Share This Article
Leave a Comment

Leave a Reply

Your email address will not be published. Required fields are marked *