Public TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos

Archives

  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಮೋದಿ-ಟ್ರಂಪ್‌ ಫ್ರೆಂಡ್ಸ್‌, ಆದ್ರೂ ಭಾರತ-ಅಮೆರಿಕ ಮುಸುಕಿನ ಗುದ್ದಾಟ; ಯುಎಸ್‌ ಜೊತೆಗಿನ ರಾಜತಾಂತ್ರಿಕ ಸವಾಲು ಹೊಸದೇನಲ್ಲ!

Public TV
Last updated: August 9, 2025 7:27 am
Public TV
Share
6 Min Read
trump modi tariff
SHARE

– ಯುರೋಪ್‌ನಿಂದಲೇ ರಷ್ಯಾದಿಂದ ಅತಿ ಹೆಚ್ಚು ತೈಲ ಖರೀದಿ ಆಗ್ತಿದ್ಯಾ?

ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಟೀಕೆ, ಟ್ಯಾರಿಫ್, ನಿರ್ಬಂಧಗಳ ಬೆದರಿಕೆ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಭಾರತದ ಕೂಡ ಅದಕ್ಕೆ ಬಲವಾದ ಪ್ರತಿದಾಳಿ ಒಡ್ಡುತ್ತಿದೆ. ಪ್ರಸ್ತುತ ದಿನಮಾನಗಳಲ್ಲಿ ಭಾರತ-ಅಮೆರಿಕ ಸಂಯುಕ್ತ ಸಂಸ್ಥಾನಗಳ ಕಾರ್ಯತಂತ್ರದ ಪಾಲುದಾರಿಕೆಯು ಹೊಸ ತಿರುವನ್ನು ಪಡೆದುಕೊಂಡಿದೆ. ಉಕ್ರೇನ್ ವಿರುದ್ಧ ಯುದ್ಧ ನಡೆಯುತ್ತಿರುವ ರಷ್ಯಾ ಜೊತೆ ಭಾರತ ಸಂಬಂಧ ಚೆನ್ನಾಗಿದೆ. ಪಾಶ್ಚಾತ್ಯ ರಾಷ್ಟ್ರಗಳ ನಿರ್ಬಂಧಗಳ ನಡುವೆಯೂ ರಷ್ಯಾದಿಂದ ಭಾರತ (India) ರಕ್ಷಣಾ ಮತ್ತು ಇಂಧನ ಆಮದು ಮಾಡಿಕೊಳ್ಳುತ್ತಿದೆ. ಇದಕ್ಕೆ ಟ್ರಂಪ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತನ್ನ ಮಾತು ಕೇಳದ ಭಾರತದ ಮೇಲೆ ಸುಂಕದ (Tariff) ಅಸ್ತ್ರವನ್ನು ಅಮೆರಿಕ ಪ್ರಯೋಗಿಸಿದೆ.

ಭಾರತದ ಜೊತೆಗಿನ ಅಮೆರಿಕದ (US) ಮುಸುಕಿನ ಗುದ್ದಾಟ ಇದೇ ಮೊದಲೇನಲ್ಲ. ಶತಮಾನಗಳ ಹಿಂದಿನಿಂದಲೂ ಉಭಯ ದೇಶಗಳ ರಾಜತಾಂತ್ರಿಕತೆಯು ಅನೇಕ ಸವಾಲುಗಳನ್ನು ಕಂಡಿದೆ. ಯುರೋಪಿಯನ್ ಒಕ್ಕೂಟ, ಅಮೆರಿಕ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧ ಹಿಂದೆ ಹೇಗಿತ್ತು? ಈಗಿನ ಸವಾಲುಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ಟ್ರಂಪ್‌ ಸುಂಕ ಶಾಕ್‌ ಬೆನ್ನಲ್ಲೇ ಈ ವರ್ಷ ಭಾರತಕ್ಕೆ ಪುಟಿನ್‌ ಭೇಟಿ

Narendra Modi Donald Trump

ಭಾರತದ ಮೇಲೆ 50% ಟ್ಯಾರಿಫ್!
ರಷ್ಯಾದಿಂದ (Russia) ತೈಲ ಖರೀದಿ ಮಾಡುತ್ತಿರುವ ಭಾರತದ ಮೇಲೆ ಟ್ರಂಪ್ 50% ಟ್ಯಾರಿಫ್ ವಿಧಿಸಿದ್ದಾರೆ. ಟ್ರಂಪ್ ನಡೆಗೆ ಭಾರತ ಅಸಮಾಧಾನ ಹೊರಹಾಕಿದೆ. ‘ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಭಾರತವನ್ನು ಗುರಿಯಾಗಿಸಿಕೊಂಡಿರುವುದು ಅಸಮಂಜಸ. ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆರ್ಥಿಕ ಭದ್ರತೆ ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ’ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಟ್ರಂಪ್ ಬೆದರಿಕೆಗೆ ಡೋಂಟ್ ಕೇರ್ ಎಂದಿರುವ ಅಜಿತ್ ದೋವಲ್ ರಷ್ಯಾಗೆ ಭೇಟಿ ನೀಡಿದ್ದರೆ. ಉಭಯ ದೇಶಗಳ ನಡುವಿನ ಸಂಬಂಧ ಬಲಪಡಿಸಲು ಮುಂದಾಗಿದ್ದಾರೆ. ಇತ್ತ ಹಲವು ವರ್ಷಗಳ ಬಳಿಕ ಪ್ರಧಾನಿ ಮೋದಿ ಅವರು ಚೀನಾಗೆ ಭೇಟಿ ನೀಡಲಿದ್ದಾರೆ.

ಯುರೋಪ್‌ನಿಂದಲೇ ರಷ್ಯಾದಿಂದ ಹೆಚ್ಚು ತೈಲ ಖರೀದಿ!
* ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಕಳೆದ ಮೂರು ವರ್ಷಗಳಿಂದ ಜಾಗತಿಕ ವೇದಿಕೆಯಲ್ಲಿ ಭಾರತದ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಿದ್ದಾರೆ. 2022ರ ಮಾರ್ಚ್‌ನಲ್ಲಿ ಆಗಿನ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರ ಸಮ್ಮುಖದಲ್ಲಿ ಮಾತನಾಡಿದ್ದ ಜೈಶಂಕರ್, ನಿರ್ಬಂಧಗಳ ಬಗ್ಗೆ ಮಾತನಾಡುವುದು ಒಂದು ಅಭಿಯಾನದಂತೆ ಕಾಣುತ್ತದೆ. ಯುರೋಪ್ ವಾಸ್ತವವಾಗಿ ಉಕ್ರೇನ್ ಯುದ್ಧಕ್ಕಿಂತ ಮೊದಲು ರಷ್ಯಾದಿಂದ ಹೆಚ್ಚು ತೈಲವನ್ನು ಖರೀದಿಸಿದೆ. ಆ ಸಂದರ್ಭದಲ್ಲಿ ಯುರೋಪ್ ಹಿಂದಿನ ತಿಂಗಳಿಗಿಂತ ಶೇ.15 ಕ್ಕಿಂತ ಹೆಚ್ಚು ರಷ್ಯಾದಿಂದ ತೈಲ ಮತ್ತು ಅನಿಲವನ್ನು ಖರೀದಿಸಿದೆ ಎಂದು ಗಮನಸೆಳೆದಿದ್ದರು. ರಷ್ಯಾದಿಂದ ತೈಲ ಮತ್ತು ಅನಿಲದ ಪ್ರಮುಖ ಖರೀದಿದಾರರನ್ನು ನೋಡಿದರೆ, ಅವರಲ್ಲಿ ಹೆಚ್ಚಿನವರು ಯುರೋಪಿನಲ್ಲಿದ್ದಾರೆ. ನಾವು ನಮ್ಮ ಇಂಧನ ಪೂರೈಕೆಯ ಬಹುಪಾಲು ಮಧ್ಯಪ್ರಾಚ್ಯದಿಂದ ಪಡೆಯುತ್ತೇವೆ. ಹಿಂದೆ ನಮ್ಮ ತೈಲದ ಸುಮಾರು 7.5-8% ಯುಎಸ್‌ನಿಂದಲೇ ಬಂದಿದೆ. ಬಹುಶಃ ಇದು ರಷ್ಯಾದಿಂದ ಶೇಕಡ ಪ್ರಮಾಣಕ್ಕೆ ಹೋಲಿಸಿದರೆ ಹೆಚ್ಚಿದೆ ಎಂದು ಜೈಶಂಕರ್ ತಿಳಿಸಿದ್ದರು.

modi putin

* 2022ರ ಏಪ್ರಿಲ್‌ನಲ್ಲಿ ಜೈಶಂಕರ್ ವಾಷಿಂಗ್ಟನ್ ಡಿಸಿಯಲ್ಲಿ ಮಾತನಾಡುತ್ತಾ, ಯುರೋಪ್ ಕೇವಲ ಒಂದು ದಿನಕ್ಕಿಂತ ಕಡಿಮೆ ಅವಧಿಯಲ್ಲಿ ಖರೀದಿಸಿದ್ದಕ್ಕಿಂತಲೂ ಕಡಿಮೆ ತೈಲವನ್ನು ಭಾರತವು ಒಂದು ತಿಂಗಳಲ್ಲಿ ರಷ್ಯಾದಿಂದ ಖರೀದಿಸಿದೆ. ರಷ್ಯಾದಿಂದ ಇಂಧನ ಖರೀದಿಯನ್ನು ನೋಡುವುದಾದರೆ, ನಿಮ್ಮ ಗಮನ ಯುರೋಪಿನ ಮೇಲೆ ಕೇಂದ್ರೀಕರಿಸಬೇಕು. ನಾವು ಸ್ವಲ್ಪವನ್ನಷ್ಟೇ ಖರೀದಿಸುತ್ತೇವೆ. ಅದು ನಮ್ಮ ಇಂಧನ ಸುರಕ್ಷತೆಗೆ ಅವಶ್ಯಕವಾಗಿದೆ. ಆದರೆ ಅಂಕಿಅಂಶಗಳನ್ನು ನೋಡಿದಾಗ, ಬಹುಶಃ ತಿಂಗಳಿಗೆ ನಮ್ಮ ಒಟ್ಟು ಖರೀದಿಗಳು, ಯುರೋಪ್ ಒಂದೇ ದಿನಕ್ಕೆ ಮಧ್ಯಾಹ್ನದ ವೇಳೆ ಮಾಡುವ ಖರೀದಿಗಿಂತ ಕಡಿಮೆಯಿದೆ ಎಂದು ತಿಳಿಸಿದ್ದಾರೆ. ಯುರೋಪಿನ ಸಮಸ್ಯೆಗಳು ಪ್ರಪಂಚದ ಸಮಸ್ಯೆಗಳು. ಆದರೆ, ಪ್ರಪಂಚದ ಸಮಸ್ಯೆಗಳು ಯುರೋಪಿನ ಸಮಸ್ಯೆಗಳಲ್ಲ ಎಂಬ ಮನಸ್ಥಿತಿಯಿಂದ ಯುರೋಪ್ ಹೊರಬರಬೇಕು ಎಂದಿದ್ದರು. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಶಾಕ್ – ಆಮದುಗಳ ಮೇಲೆ 50% ಸುಂಕ ವಿಧಿಸಿದ ಟ್ರಂಪ್

* 2022ರ ಡಿಸೆಂಬರ್‌ನಲ್ಲಿ ಜೈಶಂಕರ್ ಮಾತನಾಡಿ, ಉಕ್ರೇನ್-ರಷ್ಯಾ ಯುದ್ಧ ಪ್ರಾರಂಭವಾದ ಒಂಬತ್ತು ತಿಂಗಳಲ್ಲಿ ಭಾರತದ ಖರೀದಿಗಳು ಯುರೋಪ್‌ನ ಆರನೇ ಒಂದು ಭಾಗದಷ್ಟಿದೆ. ಪ್ರಸ್ತುತ ಯುರೋಪ್ ಮಧ್ಯಪ್ರಾಚ್ಯದಿಂದ ಬಹಳಷ್ಟು [ಕಚ್ಚಾ] ತೈಲವನ್ನು ಖರೀದಿಸುತ್ತಿದೆ ಎಂಬುದನ್ನು ನೆನಪಿನಲ್ಲಿಡಿ. ಭಾರತದಂತಹ ಆರ್ಥಿಕತೆಗೆ ಮಧ್ಯಪ್ರಾಚ್ಯವು ಸಾಂಪ್ರದಾಯಿಕವಾಗಿ ಪೂರೈಕೆದಾರರಾಗಿದ್ದರು. ಆದ್ದರಿಂದ ಇದು ಮಧ್ಯಪ್ರಾಚ್ಯದಲ್ಲಿಯೂ ಬೆಲೆಗಳ ಮೇಲೆ ಒತ್ತಡ ಹೇರುತ್ತದೆ. ಯುರೋಪಿಯನ್ ಒಕ್ಕೂಟದಲ್ಲಿ ತೈಲ ಆಮದು, ಭಾರತ ಮಾಡಿಕೊಂಡಿದ್ದಕ್ಕಿಂತ ಆರು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

jaishankar 1

ಭಾರತ-ಯುಎಸ್ ಸಂಬಂಧದ ಸವಾಲು
ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವು ದಶಕಗಳಿಂದ ಹಲವಾರು ಸವಾಲುಗಳನ್ನು ಎದುರಿಸಿದೆ. 1971 ರ ಯುದ್ಧದ ಸಮಯದಲ್ಲಿ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದರು. ಆಗಿನಿಂದ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಭಾರತ-ಯುಎಸ್ ಸಂಬಂಧಗಳಲ್ಲಿ ಏರಿಳಿತವನ್ನು ಗುರುತಿಸಬಹುದು. ಯುಎಸ್ ನೌಕಾಪಡೆಯು ಬಂಗಾಳ ಕೊಲ್ಲಿಗೆ ಎಂಟ್ರಿ ಕೊಟ್ಟಿತ್ತು. ಆದರೆ, ಸೋವಿಯತ್ ಒಕ್ಕೂಟದೊಂದಿಗಿನ ಭಾರತದ ಸ್ನೇಹ ಒಪ್ಪಂದವು ಅಮೆರಿಕನ್ನರು ನೇರವಾಗಿ ಯುದ್ಧಕ್ಕೆ ಪ್ರವೇಶಿಸುವುದನ್ನು ತಡೆಯಿತು.

1998ರ ಮೇ ತಿಂಗಳಲ್ಲಿ ಪೋಖ್ರಾನ್‌ನಲ್ಲಿ ನಡೆದ ಪರಮಾಣು ಪರೀಕ್ಷೆಗಳ ನಂತರ ಅಮೆರಿಕ ಮತ್ತು ಹೆಚ್ಚಿನ ಪಶ್ಚಿಮ ದೇಶಗಳು ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸಿದವು. ಭಾರತವು ಅಮೆರಿಕದೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಬಿಕ್ಕಟ್ಟಿನಿಂದ ಹೊರಬಂದಿತು. ಜಸ್ವಂತ್ ಸಿಂಗ್ ಮತ್ತು ಆಗಿನ ಅಮೆರಿಕದ ವಿದೇಶಾಂಗ ಉಪ ಕಾರ್ಯದರ್ಶಿ ಸ್ಟ್ರೋಬ್ ಟಾಲ್ಬಾಟ್ ನಡುವಿನ ಮಾತುಕತೆಗಳು ಅಂತಿಮವಾಗಿ ಒಂದು ದಶಕದ ನಂತರ 2008 ರಲ್ಲಿ ಭಾರತ-ಯುಎಸ್ ಪರಮಾಣು ಒಪ್ಪಂದಕ್ಕೆ ಕಾರಣವಾಯಿತು.

2013ರ ಡಿಸೆಂಬರ್‌ನಲ್ಲಿ ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಗಡೆ ಅವರಿಗೆ ಸಾಕಷ್ಟು ಸಹಾಯ ನೀಡುತ್ತಿಲ್ಲ ಎಂಬ ಆರೋಪದ ಮೇಲೆ ಅವರನ್ನು ಬಂಧಿಸಿ ತಪಾಸಣೆ ನಡೆಸಲಾಯಿತು. ಈ ಘಟನೆಯು ಭಾರತೀಯ ರಾಜತಾಂತ್ರಿಕರನ್ನು ಕೆರಳಿಸಿತು. ಸರ್ಕಾರವು ಒಂದು ಅಂಶವನ್ನು ಸ್ಪಷ್ಟಪಡಿಸಲು ಕ್ರಮಗಳನ್ನು ತೆಗೆದುಕೊಂಡಿತು. ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಸುತ್ತಲಿನ ಭದ್ರತಾ ಬ್ಯಾರಿಕೇಡ್‌ಗಳನ್ನು ತೆಗೆದುಹಾಕುವುದು ಮತ್ತು ಭಾರತದಲ್ಲಿನ ಅಮೆರಿಕದ ರಾಜತಾಂತ್ರಿಕರಿಗೆ ರಾಜತಾಂತ್ರಿಕ ಸವಲತ್ತುಗಳನ್ನು ಪರಿಶೀಲಿಸುವ ಕ್ರಮಕೈಗೊಂಡಿತು. ಆ ಸಮಯದಲ್ಲಿ ಜೈಶಂಕರ್ ಅವರು ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದರು. ಖೋಬ್ರಗಡೆ ಅವರ ಬಿಡುಗಡೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಯುಪಿಎ II ಸರ್ಕಾರದ ಕೊನೆಯ ಆರು ತಿಂಗಳಲ್ಲಿ ಅಮೆರಿಕದೊಂದಿಗಿನ ಸಂಬಂಧಗಳು ತೀವ್ರ ಹಿನ್ನಡೆಯನ್ನು ಅನುಭವಿಸಿದವು. ಸಂಬಂಧಗಳನ್ನು ಮತ್ತೆ ಹಳಿಗೆ ತರಲು 2014 ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಮಾತುಕತೆ ನಡೆಯಿತು. ಇದನ್ನೂ ಓದಿ: ಭಾರತ ಕೊಟ್ಟ ತಿರುಗೇಟಿಗೆ ಸರಿಯಾಗಿ ಉತ್ತರ ನೀಡದೇ ನುಣುಚಿದ ಟ್ರಂಪ್‌

Trump Modi

ಅಧ್ಯಕ್ಷ ಟ್ರಂಪ್ ಜೊತೆ ವ್ಯವಹಾರ
ಇತ್ತೀಚಿನ ದಿನಗಳಲ್ಲಿ ಭಾರತದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸುತ್ತಿದ್ದಾರೆ. ಅದಕ್ಕೆ ಭಾರತ ಕೂಡ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಟ್ರಂಪ್ ಆಡಳಿತದ ದ್ವಂದ್ವ ಮಾನದಂಡಗಳಿಗೆ ಭಾರತ ಕನ್ನಡಿ ಹಿಡಿದಿದೆ. ರಷ್ಯಾ ಜೊತೆಗಿನ ಭಾರತದ ತೈಲ ಖರೀದಿ ಒಪ್ಪಂದವನ್ನು ಖಂಡಿಸುತ್ತಿರುವ ಟ್ರಂಪ್, ಭಾರತದ ಮೇಲೆ ಒಟ್ಟಾರೆ 50% ಸುಂಕ ವಿಧಿಸಿದ್ದಾರೆ. ಆ ಮೂಲಕ ಬೆದರಿಸುವ ತಂತ್ರವನ್ನು ಅನುಸರಿಸಿದ್ದಾರೆ. ಆದರೆ, ಭಾರತ ಇದಕ್ಕೆ ಡೋಂಟ್ ಕೇರ್ ಎಂದಿದೆ. ಪ್ರಧಾನಿ ಮೋದಿ ಕೂಡ ಸುಂಕದ ಬಗ್ಗೆ ಮೌನ ಮುರಿದಿದ್ದಾರೆ. ಇತ್ತ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ರಷ್ಯಾಗೆ ಭೇಟಿ ನೀಡಿ ಪುಟಿನ್ ಜೊತೆ ಮಾತುಕತೆ ನಡೆಸಿದ್ದಾರೆ. ಶತಮಾನಗಳಿಂದ ಭಾರತದ ಜೊತೆ ಸ್ನೇಹಿತನಂತೆ ರಷ್ಯಾ ನಿಂತಿದೆ. ಆ ದೇಶದ ಜೊತೆಗಿನ ಸಂಬಂಧ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಹೆಜ್ಜೆ ಇಟ್ಟಿದೆ.

ಟ್ರಂಪ್ ಅವರ ಮಾತುಗಳು ಮತ್ತು ಕಾರ್ಯಗಳು, ಮಾಜಿ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ಅವರ ಮಾತುಗಳು ಸತ್ಯ ಎಂಬುದನ್ನು ಸಾಬೀತುಪಡಿಸುವಂತಿದೆ. ಅಮೆರಿಕದ ಶತ್ರುವಾಗುವುದು ಅಪಾಯಕಾರಿ, ಆದರೆ ಸ್ನೇಹಿತನಾಗಿರುವುದು ಮಾರಕವಾಗಬಹುದು ಎಂದು ಹೆನ್ರಿ ಹೇಳಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ, ಟ್ರಂಪ್ ಅವರನ್ನು ನಿಭಾಯಿಸುವುದು 1998 ರ ನಂತರದ ಭಾರತೀಯ ರಾಜತಾಂತ್ರಿಕತೆಗೆ ಇರುವ ದೊಡ್ಡ ಸವಾಲಾಗಿದೆ.

TAGGED:donald trumpindiaPM ModirussiaTariffUSಅಮೆರಿಕಟ್ಯಾರಿಫ್ಡೊನಾಲ್ಡ್ ಟ್ರಂಪ್ಪಿಎಂ ಮೋದಿಭಾರತರಷ್ಯಾ
Share This Article
Facebook Whatsapp Whatsapp Telegram

Cinema News

Border Diaries 3
ರಂಗಸಮುದ್ರ ನಿರ್ಮಾಪಕರ ಹೊಸ ಸಿನಿಮಾ – ಹಬ್ಬಕ್ಕೆ ʻಬಾರ್ಡರ್ ಡೈರೀಸ್ʼ
Cinema Latest Sandalwood
Radheya Movie 1
ಅಜಯ್ ರಾವ್ ನಟನೆಯ ರಾಧೇಯ ಚಿತ್ರದ ಟೀಸರ್ ರಿಲೀಸ್
Uncategorized Cinema Latest Sandalwood
Dad Movie
ಡ್ಯಾಡ್ ಸಿನಿಮಾ ಟೀಮ್‌ನಿಂದ ದೀಪಾವಳಿಗೆ ವಿಶೇಷ ಪೋಸ್ಟರ್
Cinema Latest Sandalwood Top Stories
Manasa Holla
ದಾಖಲೆ ಬರೆದ ಗಾಯಕಿ ಮಾನಸ ಹೊಳ್ಳ
Latest Sandalwood Top Stories

You Might Also Like

s 400 2
World

ರಷ್ಯಾದಿಂದ ಶೀಘ್ರದಲ್ಲೇ ಇನ್ನಷ್ಟು S-400 ಭಾರತಕ್ಕೆ – 10,000 ಕೋಟಿ ಡೀಲ್‌ ಫೈನಲ್‌

Public TV
By Public TV
48 minutes ago
H1B Visa
World

H-1ಬಿ ವೀಸಾ ಶುಲ್ಕ ಹೆಚ್ಚಳ – ವಾಸ್ತವ್ಯ ಅವಧಿ ವಿಸ್ತರಣೆ ಕೋರಿದ ಅರ್ಜಿಗಳಿಗೆ ಅನ್ವಯಿಸಲ್ಲ

Public TV
By Public TV
59 minutes ago
Tumkur
Tumakuru

ತುಮಕೂರು | ಕೆರೆಗೆ ಬಿದ್ದು ತಂದೆ, ಮಗಳು ಸೇರಿ ಮೂವರು ಸಾವು

Public TV
By Public TV
1 hour ago
BrahMos
Uncategorized

ಭಾರತೀಯ ಸೇನೆಗೆ ಬ್ರಹ್ಮೋಸ್ ಕ್ಷಿಪಣಿ ಬ್ರಹ್ಮಾಸ್ತ್ರ – ಶೀಘ್ರದಲ್ಲೇ ಮಿಸೈಲ್ ಸಾಮರ್ಥ್ಯ 800 ಕಿಮೀಗೆ ಹೆಚ್ಚಳ

Public TV
By Public TV
2 hours ago
Kolkata Police
Crime

ಆರ್‌ಜಿ ಕರ್ ಅತ್ಯಾಚಾರ ಅಪರಾಧಿಯ ಅಪ್ರಾಪ್ತ ಸೊಸೆ ಶವ ಮನೆ ಕಪಾಟಿನಲ್ಲಿ ಪತ್ತೆ

Public TV
By Public TV
3 hours ago
Delhi Air
Latest

ದಿಲ್ಲಿಯಲ್ಲಿ ಉಸಿರಿಗೆ ವಾಯು ಕಂಟಕ – ಅತ್ಯಂತ ಕಳಪೆಗಿಳಿದ ಗುಣಮಟ್ಟ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?