ಮಂಗಳೂರು: ಪಾಕಿಸ್ತಾನದ ವಿರುದ್ಧ ಯುದ್ದ ಬೇಕೇ ಬೇಡವೇ ಎನ್ನುವ ವಿಶೇಷ ಲೈವ್ ಕಾರ್ಯಕ್ರಮ ಪಬ್ಲಿಕ್ ಟಿವಿ ಸೋಮವಾರ ನಡೆಸಿದ್ದು, ರಾಜ್ಯದ ಎಲ್ಲಾ ಜಿಲ್ಲೆಯ ಜನ ಲೈವ್ ನಲ್ಲಿ ಭಾಗಿಯಾಗಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಬಹುತೇಕ ಜನರು ಎಲ್ಲರೂ ಪಾಕಿಸ್ತಾನದ ವಿರುದ್ಧ ಯುದ್ಧವೇ ಬೇಕು ಎಂದು ಆಗ್ರಹಿಸಿದ್ದಾರೆ. ಆದ್ರೆ ಲೈವ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಂಗಳೂರಿನ ಇಸ್ಮಾಯಿಲ್ ರಿಹನಾ ಎಂಬವರು ಪಾಕಿಸ್ತಾನಕ್ಕೆ ಖಡಕ್ ಆಗಿಯೇ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದ ಒಟ್ಟು ಜನಸಂಖ್ಯೆ ಆದ 18 ಕೋಟಿ ಭಾರತದಲ್ಲಿ ಮುಸಲ್ಮಾನರು ಇದ್ದಾರೆ. ಹೀಗಾಗಿ ಭಾರತದ ಒಬ್ಬೊಬ್ಬ ಮುಸನ್ಮಾನರೇ ಪಾಕಿಸ್ತಾನದ ಪ್ರಜೆಗಳನ್ನು ಹೊಡೆದು ಕೊಲ್ಲುವ ತಾಕತ್ತಿದೆ. ಇದಕ್ಕೆಲ್ಲ ಭಾರತದ ಸೈನಿಕರು ಬೇಡ ಎಂದು ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ.
ಪಾಕಿಸ್ತಾನಕ್ಕೆ ಯುದ್ಧ ಮಾಡುವ ಯೋಗ್ಯತೆ ಇಲ್ಲ. ನಮ್ಮ ದೇಶದಿಂದ ಭಿಕ್ಷೆ ಕೊಟ್ಟ ಜಾಗವನ್ನು ಇವರು ತಮ್ಮ ದೇಶವನ್ನು ಮಾಡಿ ನಮ್ಮ ಸೈನಿಕರು ಮಲಗಿದ್ದಾಗ ಹೊಡೆಯುತ್ತಾರೆ. ಇವರಂತಹ ನೀಚರು ಲೋಕದಲ್ಲೇ ಯಾರೂ ಇಲ್ಲ. ಯುದ್ಧ ಆಗಬೇಕು. ಯುದ್ಧ ಆದರೆ ಪಾಕಿಸ್ತಾನ ಭೂಪಟದಲ್ಲಿ ಇರಬಾರದು ಆ ರೀತಿ ಯುದ್ಧ ಆಗಬೇಕು ಎಂದು ಹೇಳಿದ್ದಾರೆ. ಇಸ್ಮಾಯಿಲ್ ಅವರ ಈ ಮಾತು ಇದೀಗ ಎಲ್ಲೆಡೆ ವೈರಲ್ ಆಗಿದೆ.
https://www.youtube.com/watch?v=VB5CSOOgFZo
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv