Public TV - Latest Kannada News, Public TV Kannada Live, Public TV News
  • Home
  • State
  • Live
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Facebook Twitter Youtube
Aa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • Live
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Food
  • Videos
Search
  • Home
  • State
  • Live
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US

Home - Cricket - ರಾಹುಲ್‌ ಏಕಾಂಗಿ ಹೋರಾಟ ವ್ಯರ್ಥ, ಶಕೀಬ್‌ ಆಲ್‌ರೌಂಡರ್‌ ಆಟ – ಬಾಂಗ್ಲಾದೇಶಕ್ಕೆ 1 ವಿಕೆಟ್‌ ರೋಚಕ ಜಯ

Cricket

ರಾಹುಲ್‌ ಏಕಾಂಗಿ ಹೋರಾಟ ವ್ಯರ್ಥ, ಶಕೀಬ್‌ ಆಲ್‌ರೌಂಡರ್‌ ಆಟ – ಬಾಂಗ್ಲಾದೇಶಕ್ಕೆ 1 ವಿಕೆಟ್‌ ರೋಚಕ ಜಯ

Public TV
Last updated: 2022/12/04 at 7:35 PM
Public TV
Share
4 Min Read
SHARE

ಢಾಕಾ: ಶಕೀಬ್ ಅಲ್ ಹಸನ್ (Shakib Al Hasan) ಆಲ್‌ರೌಂಡರ್‌ ಆಟ, ಕೊನೆಯಲ್ಲಿ ಮೆಹಿಡಿ ಹಸನ್ ಮಿರಾಜ್ (Mehidy Hasan Miraz) ಜವಾಬ್ದಾರಿ ಬ್ಯಾಟಿಂಗ್‌ ಪ್ರದರ್ಶನದಿಂದ ಬಾಂಗ್ಲಾದೇಶ ತಂಡವು ಭಾರತದ ವಿರುದ್ಧ 1 ವಿಕೆಟ್‌ ರೋಚಕ ಜಯ ಸಾಧಿಸಿತು.

ಢಾಕಾದ ಷೇರ್ ಬಾಂಗ್ಲಾ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ (Bangladesh) ವಿರುದ್ಧ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 50 ಓವರ್‌ ಪೂರ್ಣಗೊಳಿಸುವಲ್ಲಿ ವಿಫಲವಾಯಿತು. 41.2 ಓವರ್‌ಗಳಲ್ಲಿ 186 ರನ್‌ಗಳಿಗೆ ಸರ್ವಪತನ ಕಂಡಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಬಾಂಗ್ಲಾದೇಶ ದೇಶ 46 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿ ಟೀಂ ಇಂಡಿಯಾ (Team India) ಎದುರು ರೋಚಕ ಜಯ ಸಾಧಿಸಿತು.

ಟೀಂ ಇಂಡಿಯಾ (Team India) ಸವಾಲು ಸ್ವೀಕರಿಸಿ ಕಣಕ್ಕಿಳಿದ ಬಾಂಗ್ಲಾದೇಶಕ್ಕೂ ಆರಂಭಿಕ ಆಘಾತ ಎದುರಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದ ನಜ್ಮುಲ್ ಹೊಸೈನ್ ಶಾಂಟೊ, ದೀಪಕ್‌ ಚಹಾರ್‌ ಮಾರಕ ಬೌಲಿಂಗ್‌ ದಾಳಿಗೆ ತುತ್ತಾಗಿ ಒಂದೇ ಎಸೆತಕ್ಕೆ ಔಟಾದರು. ನಂತರ ನಿಧಾನಗತಿಯಲ್ಲೇ ಬ್ಯಾಟಿಂಗ್‌ ಆರಂಭಿಸಿದ ನಾಯಕ ಲಿಟ್ಟನ್ ದಾಸ್ 63 ಎಸೆತಗಳಲ್ಲಿ 41 ರನ್‌ (1 ಸಿಕ್ಸರ್‌, 3 ಬೌಂಡರಿ) ಗಳಿಸಿ ತಂಡಕ್ಕೆ ಆಸರೆಯಾದರು. 3ನೇ ಕ್ರಮಾಂಕದಲ್ಲಿ ಬಂದ ಅನಾಮುಲ್ ಹಕ್ ಕೇವಲ 14 ರನ್‌ಗಳಿಸಿ ಪೆವಿಲಿಯನ್‌ ಸೇರಿದ್ರು.

ಇನ್ನೂ ಬೌಲಿಂಗ್‌ನಲ್ಲಿ ಮಿಂಚಿದ್ದ ಶಕೀಬ್‌ ಬ್ಯಾಟಿಂಗ್‌ನಲ್ಲೂ ಸಮಾಧಾನಕರ ಪ್ರದರ್ಶನ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಶಕೀಬ್‌ 38 ಎಸೆತಗಳಲ್ಲಿ 3 ಬೌಂಡರಿಯೊಂದಿಗೆ 29 ರನ್‌ ಕಲೆಹಾಕಿದರು. ನಂತರ ಜೊತೆಯಾದ ಮುಷ್ಫಿಕೂರ್ ರಹೀಮ್ ಮತ್ತು ಮಹಮದುಲ್ಲಾ ಜೋಡಿ ಉತ್ತಮ ಇನ್ನಿಂಗ್ಸ್‌ ಕಟ್ಟಲು ಮುಂದಾಯಿತು. 80 ಎಸೆತಗಳನ್ನು ಎದುರಿಸಿದ ಈ ಜೋಡಿ 32 ರನ್‌ ಗಳಿಸಿ ಸ್ಥಿರವಾಗಿತ್ತು. ಈ ವೇಳೆ ಸಿರಾಜ್‌ ಹಾಗೂ ಶಾರ್ದೂಲ್‌ ಠಾಕೂರ್‌ ಇವರಿಬ್ಬರ ಆಟಕ್ಕೆ ಬ್ರೇಕ್‌ ಹಾಕಿದರು. ಮುಷ್ಫಿಕೂರ್ ರಹೀಮ್ 45 ಎಸೆತಗಳಲ್ಲಿ 18 ರನ್‌ ಗಳಿಸಿದ್ರೆ, 35 ಎಸೆತ ಎದುರಿಸಿದ ಮಹಮದುಲ್ಲಾ ಕೇವಲ 14 ರನ್‌ಗಳಿಸಿ ಪೆವಿಲಿಯನ್‌ನತ್ತ ಮುಖ ಮಾಡಿದರು.

ಕೊನೆಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡಿದ ಮೆಹಿಡಿ ಹಸನ್ ಮಿರಾಜ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ನಿಧಾನಗತಿಯಲ್ಲೇ ಸಿಕ್ಸರ್‌, ಬೌಂಡರಿಗಳನ್ನು ಪೇರಿಸುತ್ತಾ ಭಾರತದ ಬೌಲರ್‌ಗಳ ಬೆವರಿಳಿಸಿದರು. 39 ಎಸೆತ ಎದುರಿಸಿದ ಮಿರಾಜ್‌ 38 ರನ್‌ (2 ಸಿಕ್ಸರ್‌, 4 ಬೌಂಡರಿ) ಚಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟರು. ಮುಸ್ತಫಿಜೂರ್ ರಹಮಾನ್ 10 ರನ್‌ ಗಳಿಸಿ ಕೊನೆಯ ವರೆಗೂ ಸಾಥ್‌ ನೀಡಿದರು. ಇಯಾಡೋಟ್ ಹೊಸೈನ್ ಮತ್ತು ಹಸನ್ ಮಹಮ್ಮದ್ ಶೂನ್ಯಕ್ಕೆ ನಿರ್ಗಮಿಸಿದರು. ಅಫಿಫ್ ಹೊಸೈನ್ 6 ರನ್‌ ಗಳಿಸಿದರು.

ಟೀಂ ಇಂಡಿಯಾ ಪರ ಮೊಹಮ್ಮದ್‌ ಸಿರಾಜ್‌ 3 ವಿಕೆಟ್‌, ಕುಲ್‌ದೀಪ್‌ ಸೇನ್‌ ವಾಷಿಂಗ್ಟನ್‌ ಸುಂದರ್‌ ತಲಾ 2 ವಿಕೆಟ್‌ ಪಡೆದರು. ದೀಪಲ್‌ ಚಹಾರ್‌ ಹಾಗೂ ಶಾರ್ದೂಲ್‌ ಠಾಕೂರ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಕಿಂಗ್‌ ಕೊಹ್ಲಿ, ಧವನ್‌ ಕಳಪೆ ಬ್ಯಾಟಿಂಗ್‌:
ಆರಂಭಿಕರಾಗಿ ಕಣಕ್ಕಿಳಿದ್ದ ರೋಹಿತ್‌ ಶರ್ಮಾ (Rohit Sharma) ಹಾಗೂ ಶಿಖರ್‌ ಧವನ್‌ ಅಲ್ಪಮೊತ್ತಕ್ಕ ಔಟಾದರು. ರೋಹಿತ್‌ 27 ರನ್‌ ಗಳಿಸಿದ್ರೆ, ಶಿಖರ್‌ ಧವನ್‌ ಕೇವಲ 7 ರನ್‌ಗಳಿಸಿದ್ರು. ಕಿಂಗ್‌ ಕೊಹ್ಲಿ (Virat Kohli) ಸಹ ನಿರೀಕ್ಷಿತ ಆಟವಾಡದೇ 9 ರನ್‌ಗಳಿಗೆ ಪೆವಿಲಿಯನ್‌ ಸೇರಿದ್ರು. ಮೊದಲ 10 ಓವರ್‌ಗಳಲ್ಲಿ 49 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿದ್ದ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಜೊತೆಗೂಡಿದ ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್ ರಾಹುಲ್ (KL Rahul) ನಿಧಾನವಾಗಿ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದ್ರು. ಆದರೆ 43 ರನ್ ಜೊತೆಯಾಟದ ನಂತರ 39 ಎಸೆತಗಳಲ್ಲಿ 24 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್ ಔಟಾದರು. ಇದರಿಂದ ಟೀಂ ಇಂಡಿಯಾ ಮತ್ತೆ ಹಿನ್ನಡೆ ಅನುಭವಿಸಿತ್ತು.

ರಾಹುಲ್‌ ಏಕಾಂಗಿ ಹೋರಾಟ:
ಟೀಂ ಇಂಡಿಯಾ ಉಪನಾಯಕ ಕೆ.ಎಲ್ ರಾಹುಲ್ ಮಾತ್ರ ಏಕಾಂಗಿಯಾಗಿ ಹೋರಾಡಿದರು. 70 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 5 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಮೇತ 73 ರನ್ ಗಳಿಸಿದರು. ‌ಉಳಿದೆಲ್ಲ ಬ್ಯಾಟ್ಸ್‌ಮ್ಯಾನ್‌ಗಳು ಬಾಂಗ್ಲಾ ಬೌಲರ್‌ಗಳ ದಾಳಿಗೆ ಧೂಳಿಪಟವಾದ್ರು.

ನಂತರ ಕ್ರೀಸ್‌ ಗಿಳಿದ ವಾಷಿಂಗ್ಟನ್ ಸುಂದರ್ ಅವರು ಕೆ.ಎಲ್ ರಾಹುಲ್ ಜೊಡಿ 60 ರನ್‌ಗಳ ಜೊತೆಯಾಟವಾಡಿ, ಭಾರತದ ಪಾಳಯದಲ್ಲಿ ನಗು ಮೂಡಿಸಿದ್ದರು. ಆದರೆ 42 ಎಸೆತಗಳಲ್ಲಿ 19 ರನ್‌ಗಳಿಸಿದ್ದ ವಾಷಿಂಗ್ಟನ್‌ ಸುಂದರ್‌ 43ನೇ ಎಸೆತದಲ್ಲಿ ಔಟಾದರು. ಶಾರ್ದೂಲ್‌ ಠಾಕೂರ್‌ 2 ರನ್‌, ಮೊಹಮ್ಮದ್‌ ಸಿರಾಜ್‌ 9 ರನ್‌ ಗಳಿಸಿದ್ರೆ, ಶಹಬಾಜ್‌ ಅಹ್ಮದ್‌, ದೀಪಕ್‌ ಚಹಾರ್‌ ಶೂನ್ಯಕ್ಕೆ ನಿರ್ಗಮಿಸಿದ್ರು. ಕುಲ್‌ದೀಪ್‌ ದೇನ್‌ 2 ರನ್‌ಗಳಿಸಿ ಅಜೇಯರಾಗುಳಿದರು.

ರೋಹಿತ್‌ ಉತ್ತಮ ಬ್ಯಾಟಿಂಗ್‌ ಪಡೆ ಹೊಂದಿದ್ದರೂ ಬಾಂಗ್ಲಾದೇಶ ಯುವ ಬೌಲರ್‌ಗಳ ಬೌಲಿಂಗ್ ದಾಳಿ ಎದುರಿಸುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಹೀಗಾಗಿ ಭಾರತ 200ರ ಗಡಿ ಮುಟ್ಟಲೂ ಅಸಾಧ್ಯವಾಯಿತು.

ಬಾಂಗ್ಲಾದೇಶದ ಪರ ಆಲ್‌ರೌಂಡರ್‌ ಶಕೀಬ್ ಅಲ್ ಹಸನ್ 36 ರನ್‌ ನೀಡಿ 5 ವಿಕೆಟ್‌ ಕಬಳಿಸಿದರೆ, ಎಬಾಡೋಟ್ ಹೊಸೈನ್ 47 ರನ್‌ಗಳಿಗೆ 4 ವಿಕೆಟ್‌ ಪಡೆದು ಮಿಂಚಿದರು. 43 ರನ್‌ ನೀಡಿದ ಮೆಹಿಡಿ ಹಸನ್ ಮಿರಾಜ್ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

Live Tv
[brid partner=56869869 player=32851 video=960834 autoplay=true]

TAGGED: bangladesh, bcci, KL Rahul, Mehidy Hasan Miraz, Mohammed Siraj, ODI Cricket, Rohit Sharma, Shakib Al Hasan, Team india, virat kohli, ಕೆ.ಎಲ್.ರಾಹುಲ್, ಟೀಂ ಇಂಡಿಯಾ, ಬಾಂಗ್ಲಾದೇಶ, ಬಿಸಿಸಿಐ, ಮೊಹಮ್ಮದ್ ಸಿರಾಜ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶಕೀಬ್ ಅಲ್ ಹಸನ್
Share this Article
Facebook Twitter Whatsapp Whatsapp Telegram
Share

Latest News

ಪತ್ನಿ ನೇಣುಬಿಗಿದುಕೊಂಡ ಬೆನ್ನಲ್ಲೇ ಪತಿಯೂ ಸೂಸೈಡ್
By Public TV
ಜೆಡಿಎಸ್‍ನಲ್ಲಿ ತಾರಕಕ್ಕೇರಿದ ಟಿಕೆಟ್ ವಾರ್- ಹಾಸನದಲ್ಲಿ ಕುಮಾರಸ್ವಾಮಿ V/S ರೇವಣ್ಣ ಫೈಟ್ ಶುರು ಆಗುತ್ತಾ?
By Public TV
ಡೈರಿ ಫ್ರೀ – ಮೂರೇ ಪದಾರ್ಥ ಬಳಸಿ ಮಾಡಿ ಸಖತ್ ಟೇಸ್ಟಿ ಐಸ್‌ಕ್ರೀಮ್
By Public TV
ಇಂದಿನಿಂದ SSLC ಪರೀಕ್ಷೆ ಪ್ರಾರಂಭ- ಎಕ್ಸಾಂಗೆ ಸಮವಸ್ತ್ರ ನಿಯಮ ಕಡ್ಡಾಯ
By Public TV
ಚೆಕ್‍ಬೌನ್ಸ್ ಕೇಸ್- ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಬಂಧನದ ಭೀತಿ?
By Public TV
ರಾಜ್ಯದ ಹವಾಮಾನ ವರದಿ 31-03-2023
By Public TV

You Might Also Like

Mandya

ಪತ್ನಿ ನೇಣುಬಿಗಿದುಕೊಂಡ ಬೆನ್ನಲ್ಲೇ ಪತಿಯೂ ಸೂಸೈಡ್

Public TV By Public TV 10 seconds ago
Hassan

ಜೆಡಿಎಸ್‍ನಲ್ಲಿ ತಾರಕಕ್ಕೇರಿದ ಟಿಕೆಟ್ ವಾರ್- ಹಾಸನದಲ್ಲಿ ಕುಮಾರಸ್ವಾಮಿ V/S ರೇವಣ್ಣ ಫೈಟ್ ಶುರು ಆಗುತ್ತಾ?

Public TV By Public TV 36 mins ago
Food

ಡೈರಿ ಫ್ರೀ – ಮೂರೇ ಪದಾರ್ಥ ಬಳಸಿ ಮಾಡಿ ಸಖತ್ ಟೇಸ್ಟಿ ಐಸ್‌ಕ್ರೀಮ್

Public TV By Public TV 16 hours ago
Bengaluru City

ಇಂದಿನಿಂದ SSLC ಪರೀಕ್ಷೆ ಪ್ರಾರಂಭ- ಎಕ್ಸಾಂಗೆ ಸಮವಸ್ತ್ರ ನಿಯಮ ಕಡ್ಡಾಯ

Public TV By Public TV 57 mins ago
Follow US
Go to mobile version
Welcome Back!

Sign in to your account

Lost your password?