ಬಳ್ಳಾರಿ: ಯುಗಾದಿ ಅಂದ್ರೆ ಹೊಸ ಸಂವತ್ಸರ, ಯುಗಾದಿಯಿಂದಲೇ ಹೊಸ ವರ್ಷದ ಆರಂಭವಾಗುತ್ತದೆ. ಪ್ರತಿ ವರ್ಷ ಯುಗಾದಿಯನ್ನು ನಾಡಿನೆಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಿ ಬೇವು ಬೆಲ್ಲ ಹಂಚಿ, ಒಬ್ಬಟ್ಟು ಹೋಳಿಗೆ ತಿಂದು ಹೊಸ ವರ್ಷವನ್ನು ಸ್ವಾಗತ ಮಾಡಿಕೊಳ್ಳುತ್ತಾರೆ. ಆದ್ರೆ ಬಳ್ಳಾರಿ ಜಿಲ್ಲೆಯ ಹತ್ತಾರು ಹಳ್ಳಿಗಳಲ್ಲಿ ಮಾತ್ರ ಯುಗಾದಿ ಆಚರಣೆ ಮಾಡಿದ್ರೆ ಮನೆಯ ಹಿರಿಯರು ಜೀವನೇ ಅಂತ್ಯವಾಗುತ್ತೆ ಅನ್ನೋ ನಂಬಿಕೆಯಿದೆ.
ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಗಜಾಪುರ, ಯಾಲ್ದಳ್ಳಿ, ತಿಮ್ಮಲಾಪುರ ಮತ್ತು ಹಗರಿಬೊಮ್ಮನಹಳ್ಳಿ ಹೀಗೆ ಹತ್ತಾರು ಹಳ್ಳಿಗಳಲ್ಲಿ ವಾಸಿಸುವ ಗಂಗಾಮತ, ನಾಯಕ್, ಉಪ್ಪಾರ ಜನಾಂಗದ ಜನರು ಇಂದಿಗೂ ಯುಗಾದಿ ಹಬ್ಬವನ್ನು ಆಚರಿಸುವುದಿಲ್ಲ. ಜೊತೆಗೆ ಯುಗಾದಿ ಹಬ್ಬದ ಮೂರು ದಿನಗಳ ವೇಳೆಯಲ್ಲಿ ಈ ಗ್ರಾಮದ ಜನರು ಹೊಸ ಬಟ್ಟೆ, ಸಿಹಿ ತಿಂಡಿ ಅಷ್ಟೇ ಅಲ್ಲ ದೇವರ ಪೂಜೆ ಸಹ ಮಾಡಲ್ಲ. ಹಿಂದೆ ಈ ಸಮಾಜದ ಹಿರಿಯರು ಯುಗಾದಿ ಹಬ್ಬದ ವೇಳೆಯಲ್ಲಿ ಬೇವು ತರಲು ಹೋಗಿ ಮೃತಪಟ್ಟ ಪರಿಣಾಮ ಈ ಗ್ರಾಮಸ್ಥರು ಇಂದಿಗೂ ಯುಗಾದಿ ಹಬ್ಬ ಅಂದ್ರೆ ಭಯ ಬಿಳುತ್ತಾರೆ.
ಯುಗಾದಿ ಹಬ್ಬದಂದು ಸಾಕಷ್ಟು ಜನರು ಯುಗಾದಿ ಹಬ್ಬವನ್ನೆ ಹೊಸ ವರ್ಷದ ಮೊದಲ ದಿನವೆಂದು ಆಚರಣೆ ಮಾಡಿದ್ರೆ. ರೈತರು ಯುಗಾದಿ ಹಬ್ಬದಂದು ತಮ್ಮ ತಮ್ಮ ಜಮೀನುಗಳಿಗೆ ಪೂಜೆ ಸಲ್ಲಿಸಿ ಯುಗಾದಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡೋದು ರೂಡಿ. ಆದ್ರೆ ಈ ಹತ್ತಾರು ಹಳ್ಳಿಗಳಲ್ಲಿ ಯುಗಾದಿ ಆಚರಣೆ ಮಾಡಿದ್ರೆ ಕೆಡಕು ಉಂಟಾಗುತ್ತೆ ಅನ್ನೋ ಭಯ ಇಲ್ಲಿನ ಗ್ರಾಮಸ್ಥರಲ್ಲಿದೆ. ಹೀಗಾಗಿ ಇವರು ಯುಗಾದಿ ಹಬ್ಬದ ಸಂದರ್ಭದಲ್ಲಿನ ಮೂರು ದಿನಗಳ ಕಾಲ ಹೊಸ ಬಟ್ಟೆ, ಸಿಹಿ ತಿಂಡಿ, ಅಷ್ಟೇ ಅಲ್ಲ ದೇವರ ಪೂಜೆ ಸಹ ಮಾಡದೆ ಯುಗಾದಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಕೆಲವರು ಗ್ರಾಮ, ಮನೆ ಕೂಡ ಬಿಟ್ಟು ಹೊರಹೋಗುವುದಿಲ್ಲ.
ಯುಗಾದಿ ಹಬ್ಬದ ದಿನವನ್ನೆ ಹೊಸ ವರ್ಷದ ಮೊದಲ ದಿನವಾಗಿ ಆಚರಣೆ ಮಾಡೋದು ರೂಢಿ. ಅಲ್ಲದೇ ಯುಗಾದಿಯಂದು ಒಬ್ಬಟ್ಟು ಅಡುಗೆ ಮಾಡಿ, ಹೊಸ ಬಟ್ಟೆ ಧರಿಸಿ ಬೇವು ಬೆಲ್ಲ ಹಚ್ಚಿ ಸಂಭ್ರಮದಿಂದ ಹಬ್ಬ ಆಚರಿಸೋದು ಸಂಪ್ರದಾಯ. ಆದ್ರೆ ಸಂಭ್ರಮದಿಂದ ಆಚರಣೆ ಮಾಡೋ ಯುಗಾದಿ ಹಬ್ಬವನ್ನು ಹತ್ತಾರು ಹಳ್ಳಿಗಳ ಜನರು ಆಚರಣೆ ಮಾಡೋಕೆ ಭಯ ಬೀಳುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.
.