ಇನ್ನೆರಡು ದಿನಗಳಲ್ಲಿ ರಾಜ್ಯದ ಜನರಿಗೆ ಸಹಿ ಸುದ್ದಿ – ಸಚಿವ ರೇವಣ್ಣ

Public TV
1 Min Read
REVANNA HDK

ಚಿಕ್ಕಮಗಳೂರು: ಸರ್ಕಾರ ಸುಭದ್ರವಾಗಿದೆ, ಆರಾಮಾಗಿದೆ ಮಾಧ್ಯಮದವರು ಧೃತಿಗೇಡುವುದು ಬೇಡ. ಇನ್ನು ಎರಡು ದಿನಗಳಲ್ಲಿ ರಾಜ್ಯದ ಜನರಿಗೆ ಸಹಿ ಸುದ್ದಿ ಸಿಗಲಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಚಿಕ್ಕಮಗಳೂರಿಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನೈದು ದಿನಗಳಲ್ಲಿ ರಾಜ್ಯದ ಜನರಿಗೆ ಸಿಹಿ ಸುದ್ದಿ ಸಿಗಲಿದೆ. ರೈತರ ಸಾಲ ಸಂಪೂರ್ಣ ಮನ್ನಾ ಆಗುತ್ತಾ ಅಥವಾ ಭಾಗಶಃ ಮನ್ನಾ ಆಗುತ್ತಾ ಎಂಬ ಗೊಂದಲ ಬೇಡ. ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡೇ ಮಾಡುತ್ತಾರೆ ಎಂಬ ಭರವಸೆ ನೂರಕ್ಕೆ ನೂರು ಇದೆ ಎಂದರು.

ಈ ಬಾರಿಯ ಹೊಸ ಬಜೆಟ್ ನಲ್ಲಿ ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಜೊತೆಗೆ, ನಮ್ಮ ಕೆಲ ಅಂಶಗಳನ್ನು ಸೆರಿಸಲಾಗುತ್ತೆ ಎಂದರು. ಅಲ್ಲದೇ ಮಲೆನಾಡಿನ ಚಾರ್ಮಾಡಿ, ಆಗುಂಬೆ, ಶಿರಾಡಿಘಾಟ್ ಸೇರಿದಂತೆ ನಾಲ್ಕು ಘಾಟಿಗಳನ್ನು ಪರಿಶೀಲನೆ ನಡೆಸಿದ್ದೇನೆ. ಚಾರ್ಮಾಡಿ ದುರಸ್ಥಿಗಾಗಿ 250 ಕೋಟಿ ರೂ. ಪ್ರಸ್ತಾವನೆ ಕಳಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *