ನಂಜನಗೂಡು: ಮೊದಲು ಬಹಳ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸವಿತ್ತು. ಆದ್ರೆ ಕೊನೆ ಎರಡು ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಹಣದ ಹೊಳೆ ಹರಿಸಿತು. ಆದ್ದರಿಂದ ಮತದ ಅಂತರ ಕಡಿಮೆಯಾಗುತ್ತೆ. ಆದ್ರೆ ಗೆಲುವು ನನ್ನದೇ ಅಂತಾ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.
ನಂಜನಗೂಡು ಉಪಚುನಾವಣೆಯ ಫಲಿತಾಂಶ ಇಂದು ಹೊರಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಸುಮಾರು ಐದು ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ಸ್ಥಳೀಯ ಪೊಲೀಸ್ ಇಲಾಖೆಯು ಸರ್ಕಾರ ಜೊತೆ ಸೇರಿತು. ಕೇಂದ್ರ ಚುನಾವಣಾ ಆಯೋಗದಿಂದ ಬಂದವರು ಎಲ್ಲೂ ಸುತ್ತಲಿಲ್ಲ. ಎಷ್ಟೇ ಹಣ ಹಂಚಿದ್ರು ಜನರು ನನ್ನ ಪರವಾಗಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿಗೆ ನನ್ನ ವಿರುದ್ಧ ದ್ವೇಷವಿತ್ತು. ಹಾಗಾಗಿ ರಾಜೀನಾಮೆ ನೀಡಿದೆ. ದುರುದ್ದೇಶದಿಂದ ಮುಖ್ಯಮಂತ್ರಿ ಮಾಡಿದ ರೀತಿ ಯಾರೂ ಅವಮಾನ ಮಾಡಲಿಲ್ಲ. ಆದ್ದರಿಂದ ಇದು ಸ್ವಾಭಿಮಾನ, ಆತ್ಮಗೌರವದ ಪ್ರಶ್ನೆಯಾಗಿದೆ. ಅದನ್ನ ಜನರಿಗೆ ಮನದಟ್ಟು ಮಾಡಿದ್ದೇನೆ. ಈ ಚುನಾವಣೆ ನಂತ್ರ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಆದ್ರೆ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಅಂದ್ರು.
ಇದನ್ನೂ ಓದಿ: ಸರ್ಕಾರದ ಯೋಜನೆಗಳೇ ನನಗೆ ಶ್ರೀರಕ್ಷೆ: ಕಳಲೆ ಕೇಶವಮೂರ್ತಿ
5ನೇ ಸುತ್ತು ಅಂತ್ಯ ಕಳಲೆ ಕೇಶವಮೂರ್ತಿಗೆ 30,061 ಮತಗಳು.. 12,927 ಮತಗಳಿಂದ ಮುನ್ನಡೆ https://t.co/2EyyhJ6c2S #Nanjangud #bypoll #Karnataka #congress pic.twitter.com/YWoKuicimu
— PublicTV (@publictvnews) April 13, 2017