ನೆಲಮಂಗಲ: ನೆಲಮಂಗಲ (Nelamangala) ಹಾಗೂ ಗೊರಗುಂಟೆಪಾಳ್ಯ (Gorguntepalya) ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಜೀವಕ್ಕೆ ಕುತ್ತು ಬರುವ ಹಾಗೇ ಗುಂಡಿಗಳ ಸಮಸ್ಯೆಯಿತ್ತು. ಇದಕ್ಕೆ ಸಂಬಂಧಿಸಿದಂತೆ ‘ಪಬ್ಲಿಕ್ ಟಿವಿ’ (PUBLiC TV) ವರದಿ ಮಾಡಿತ್ತು.ಇದನ್ನೂ ಓದಿ: ಬಾಲಿವುಡ್ನತ್ತ ನಟ- ‘ಜಬ್ ವಿ ಮೆಟ್’ ನಿರ್ದೇಶಕನ ಸಿನಿಮಾದಲ್ಲಿ ಫಹಾದ್ ಫಾಸಿಲ್
ಪಬ್ಲಿಕ್ ಟಿವಿಯಲ್ಲಿ ವರದಿ ಬಿತ್ತರವಾದ ಹಿನ್ನೆಲೆ ಟೋಲ್ ನಿರ್ವಹಣೆಯ ಸಿಬ್ಬಂದಿ, ಕುಸಿದು ಬಿದ್ದ ಬೃಹತ್ ಸ್ಲಾಬ್ಗಳನ್ನು ದುರಸ್ತಿ ಮಾಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ನಗರದ ಕುಣಿಗಲ್ ಬೈಪಾಸ್ ಬಳಿ ಸ್ಲಾಬ್ಗಳು ಕುಸಿದಿದ್ದವು. ವರದಿ ಬಳಿಕ ಓಡೋಡಿ ಬಂದು ಟೋಲ್ ಸಿಬ್ಬಂದಿಗಳು ದುರಸ್ತಿ ಕಾರ್ಯ ಆರಂಭಿಸಿದ್ದಾರೆ.
ವಾಹನ ಸವಾರರಿಗೆ ಯಮಸ್ವರೂಪಿ ಮೃತ್ಯು ಕೂಪವಾಗಿದ್ದ ಬೃಹತ್ ಗುಂಡಿ ಸ್ಲಾಬ್ಗಳನ್ನು ಅಳವಡಿಸಿದ್ದಾರೆ. ಕಂಡು ಕಾಣದಂತೆ ಇದ್ದ ಟೋಲ್ ನಿರ್ವಹಣೆ ಕಂಪನಿಯ ಸಿಬ್ಬಂದಿ ಬೆಂಗಳೂರು ಹಾಗೂ ತುಮಕೂರು ರಾಷ್ಟ್ರೀಯ ಹೆದ್ದಾರಿಯ (Bengaluru Tumkuru National Highway) ಗುಂಡಿಯನ್ನು ದುರಸ್ತಿ ಮಾಡಿದ್ದು, ಇನ್ನೂ ಸಾಕಷ್ಟು ದುರಸ್ತಿ ಕೆಲಸ ಮಾಡಬೇಕಿದೆ. ರಸ್ತೆಯಲ್ಲಿ ಗುಂಡಿ ಗಂಡಾಂತರ ಜನಾಕ್ರೋಶದ ವರದಿ ಪ್ರಸಾರ ಮಾಡಿದ್ದ ‘ಪಬ್ಲಿಕ್ ಟಿವಿ’ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಹರಿಯಾಣ ವಿಧಾನಸಭೆ ಚುನಾವಣೆ – ಆಪ್, ಕಾಂಗ್ರೆಸ್ ಮೈತ್ರಿ ಹಿಂದಿನ ಲೆಕ್ಕಾಚಾರ ಏನು?