Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ, ಮಂಡ್ಯ ನನ್ನ ಬಿಡಲ್ಲ: ಸುಮಲತಾ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ, ಮಂಡ್ಯ ನನ್ನ ಬಿಡಲ್ಲ: ಸುಮಲತಾ

Districts

ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ, ಮಂಡ್ಯ ನನ್ನ ಬಿಡಲ್ಲ: ಸುಮಲತಾ

Public TV
Last updated: June 28, 2022 12:28 pm
Public TV
Share
3 Min Read
sumalatha
SHARE

ಮಂಡ್ಯ: ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ, ಹಾಗೆಯೇ ಮಂಡ್ಯ ಕೂಡ ನನ್ನ ಬಿಡಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಹಿನ್ನೆಲೆ ಕೊಚ್ಚಿವೆಲ್ಲಿ ರೈಲಿನ ಮೂಲಕ ಮಂಡ್ಯಕ್ಕೆ ಆಗಮಿಸಿದ ಸುಮಲತಾ ಅವರು ಇಂದು ಪ್ರಗತಿ ಪರಿಶೀಲನೆ ಹಾಗೂ ದಿಶಾ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ ಆಹ್ವಾನಿಸಲು ಸಿದ್ದರಾಮಯ್ಯ ತೀರ್ಮಾನ

Sumalatha JDS MLA 5

ಇದೇ ವೇಳೆ ಮಂಡ್ಯದ ರೈಲ್ವೆ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಶಪಥ ಹೆದ್ದಾರಿ ಕಾಮಗಾರಿಯಲ್ಲಿ ವಿಳಂಬ ಆಗುತ್ತಿಲ್ಲ. ನಿಗದಿಯಂತೆ ದಸರಾ ವೇಳೆಗೆ ದಶಪಥ ಹೆದ್ದಾರಿ ಉದ್ಘಾಟನೆಯಾಗಲಿದೆ. ಅಲ್ಲಿಯವರೆಗೂ ಸಾರ್ವಜನಿಕರು ಸಹಕರಿಸಬೇಕು. ಕಾಮಗಾರಿ ನಡೆಯುತ್ತಿರುವುದರಿಂದ ಟ್ರಾಫಿಕ್ ಕಿರಿಕಿರಿ ಆಗುತ್ತದೆ. ಹಾಗಾಗಿ ಟ್ರೈನ್ ಮೂಲಕ ಮಂಡ್ಯಕ್ಕೆ ಆಗಮಿಸಿದ್ದೇನೆ. ಸಂಜೆ ಬೆಂಗಳೂರಿಗೆ ವಾಪಸ್ ಆಗುವ ಸಮಯಕ್ಕೆ ಟ್ರೈನ್ ಸಿಕ್ಕರೆ ಅದರಲ್ಲೇ ಹೋಗುತ್ತೇನೆ ಎಂದು ತಿಳಿಸಿದರು.

dashpath highway

ನಾನು ಮಂಡ್ಯ ಬಿಟ್ಟು ಯಾವ ಕ್ಷೇತ್ರಕ್ಕೂ ಹೋಗುವುದಿಲ್ಲ. ನನಗೆ ರಾಜಕೀಯ ಅನಿವಾರ್ಯ ಅಲ್ಲ. ಮಂಡ್ಯ ಹಾಗೂ ಮಂಡ್ಯದ ಜನತೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಮಂಡ್ಯ ಜನರ ಋಣವನ್ನು ತೀರಿಸಲು ನಾನು ರಾಜಕೀಯದಲ್ಲಿದ್ದೇನೆ. ನಾನು ಮಂಡ್ಯ ಬಿಟ್ಟು ಹೋಗಲ್ಲ, ಮಂಡ್ಯ ನನ್ನ ಬಿಡಲ್ಲ. ನಾನು ಮಂಡ್ಯ ಬಿಡುವ ಹಗಲುಗನಸನ್ನು ಕೆಲವರು ಕಾಣುತ್ತಿದ್ದಾರೆ. ಆ ಕನಸು ಯಾವತ್ತೂ ನನಸು ಆಗಲ್ಲ. ನಾನು ಎಂದಿಗೂ ಮಂಡ್ಯದಲ್ಲಿಯೇ ಇರುತ್ತೇನೆ. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆ ಅದಕ್ಕಾಗಿ ಕೆಲವರು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಈ ರೀತಿಯ ಚೀಪ್ ಗಿಮಿಕ್‍ಗಳನ್ನು ಈಗಲಾದರೂ ಬಿಡಿ. ಮಂಡ್ಯ ಅಭಿವೃದ್ಧಿ ಕಡೆಗೆ ಗಮನಹರಿಸೋಣಾ. ನನಗೆ ಅಧಿಕಾರದ ಆಸೆ ಇಲ್ಲ, ಹೀಗಾಗಿ ಯಾವುದೇ ಭಯ ನನಗಿಲ್ಲ. ಜನ ಆಶೀರ್ವಾದ ಇದ್ದರೆ ನಾವು, ಆಶೀರ್ವಾದ ಇಲ್ಲ ಅಂದರೆ ಇಲ್ಲ ಎಂದಿದ್ದಾರೆ. ಇದನ್ನೂ ಓದಿ:  ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರಗ್ಸ್ ವಶ – ಆರೋಪಿಗಳ ಬಗ್ಗೆ ಸಿಕ್ಕಿಲ್ಲ ಸುಳಿವು

abhishek ambarish 1

ಬಿಜೆಪಿಗೆ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ನಾನು ಸದ್ಯ ಯಾವ ಪಕ್ಷವನ್ನು ಸೇರ್ಪಡೆಯಾಗುವ ಆಲೋಚನೆ ಮಾಡಿಲ್ಲ. ಬೆಂಗಳೂರು ಉತ್ತರದಿಂದ ಟಿಕೆಟ್ ಕೇಳಿರುವುದು ಸುಳ್ಳು. ಇದೊಂದು ಹಾಸ್ಯಾಸ್ಪದ ಸುದ್ದಿ. ಈ ರೀತಿ ಕೆಲವರು ಮೂರ್ಖತನದ ಮಾತು ಹೇಳಿದ್ದಾರೆ. ನಾನು ಯಾವ ಪಕ್ಷದ ಮುಂದೆ ಬೇಡಿಕೆ ಇಟ್ಟಿಲ್ಲ. ನನ್ನ ಮಗನಿಗೂ ಟಿಕೆಟ್ ಬೇಡಿಕೆ ಇಟ್ಟಿಲ್ಲ. ಮುಂದೆಯೂ ಮಗನಿಗಾಗಿ ಟಿಕೆಟ್ ಬೇಡಿಕೆ ಇಡುವುದಿಲ್ಲ. ಅಭಿಷೇಕ್ ಯಾವ ಪಕ್ಷಕ್ಕಾದರೂ ಬೇಕು ಅಂದರೆ ಅವರೇ ಕೇಳುತ್ತಾರೆ. ಮೊದಲಿಗೆ ಅಭಿಷೇಕ್‍ಗೆ ರಾಜಕೀಯದ ಆಸಕ್ತಿ ಇರಬೇಕು. ಈಗ ಅಭಿ ಸಿನಿಮಾ ಕ್ಷೇತ್ರದಲ್ಲಿದ್ದಾನೆ. ಸದ್ಯ ಸಿನಿಮಾ ಕ್ಷೇತ್ರದಲ್ಲಿ ಅವನು ಬೆಳೆಯುತ್ತಿದ್ದಾನೆ. ನಾನು ಅವನಿಗಾಗಿ ರಾಜಕೀಯದ ಸ್ಟೂಲ್ ಹಾಕಿಕೊಡಲ್ಲ. ಅವನಿಗೆ ಬೇರೆ ಪಕ್ಷದಿಂದ ಆಫರ್ ಬಂದಿರುವುದು ನಿಜ. ಅದನ್ನು ನಿರ್ಧಾರ ಮಾಡುವುದು ಅಭಿಷೇಕ್‍ಗೆ ಬಿಟ್ಟಿದ್ದು. ಈ ವಿಚಾರದಲ್ಲಿ ನಾನು ನಿರ್ಧಾರ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರತಾಪ್ ಸಿಂಹ ಮತ್ತು ಸುಮಲತಾ ನಡುವೆ ಕೋಲ್ಡ್ ವಾರ್ ವಿಚಾರವಾಗಿ ಮಾತನಾಡಿದ ಅವರು, ನನಗೆ ಯಾರ ಮೇಲೂ ಕೋಲ್ಡ್ ವಾರ್ ಇಲ್ಲ. ನನಗೆ ಕ್ರೆಡಿಟ್ ತೆಗೆದುಕೊಳ್ಳುವ ಅನಿವಾರ್ಯವೂ ಇಲ್ಲ.
ಎಲ್ಲಾ ಕೆಲಸವನ್ನು ಅವರೇ ಮಾಡಿಸುತ್ತಿದ್ದಾರೆ ಎಂದರೆ ನನಗೆ ಬೇಸರ ಇಲ್ಲ. ಹೆದ್ದಾರಿಯ ವಿಚಾರದಲ್ಲಿ ನಮ್ಮ ಜನರಿಗೆ ತೊಂದರೆ ಆದರೆ ನಾನು ಹೋರಾಟ ಮಾಡುತ್ತೇನೆ. ನನ್ನಿಂದ ಯಾವುದೇ ಕಾಮಗಾರಿಗಳು ಡಿಲೇ ಆಗಿಲ್ಲ. ಕೆಹೆಚ್‍ಪಿ ಕಾಲೋನಿಯ ರಸ್ತೆಯ ಬಗ್ಗೆ ಈ ಹಿಂದೆ ಅಧಿಕಾರಿಗಳಿಗೆ ಹೇಳಿದ್ದೆ. ದಿಶಾ ಸಭೆಯಲ್ಲಿ ಈ ರಸ್ತೆ ಸರಿ ಪಡಿಸಲು ಸೂಚನೆ ನೀಡಿದ್ದೆ. ಆ ಕಾಮಗಾರಿ ಪೂರ್ಣವಾಗುವಾಗ ಅವರು ಅಲ್ಲಿಗೆ ಬಂದಿದ್ದಾರೆ. ಅಲ್ಲಿ ಹೋಗಿ ಫೋಟೋ ತೆಗೆಸಿಕೊಂಡು ಹಾಕುವುದರಿಂದ ಏನು ಆಗಲ್ಲ. ಅವರಿಂದಲೇ ಕೆಲಸ ಆಯಿತು ಅಂದರೆ ನಾನು ಏನು ಮಾಡುವುದಕ್ಕೂ ಆಗಲ್ಲ. ನಾನು ಎಲ್ಲವನ್ನು ಫೋಟೋ ತೆಗೆದುಕೊಂಡು ಮೀಡಿಯಾ ಮುಂದೆ ಬರುವುದಕ್ಕೆ ಆಗಲ್ಲ. ಮೀಡಿಯಾ ಮುಂದೆ ಬಂದು ಕೂಳಿತರೆ ಮಾತ್ರ ಕೆಲಸ ಆಗಲ್ಲ ಎಂದು ಹೇಳಿದ್ದಾರೆ.

Live Tv

TAGGED:Abhishek Ambarishmandyapratap simhaSumalatha Ambarishಅಭಿಷೇಕ್ ಅಂಬರೀಶ್ಪ್ರತಾಪ್ ಸಿಂಹಮಂಡ್ಯಸುಮಲತಾ ಅಂಬರೀಶ್
Share This Article
Facebook Whatsapp Whatsapp Telegram

Cinema news

Rachita Ram 3
ಲ್ಯಾಂಡ್ ಲಾರ್ಡ್ ಚಿತ್ರದ `ನಿಂಗವ್ವ ನಿಂಗವ್ವ’ ಸಾಂಗ್ ರಿಲೀಸ್
Cinema Latest Sandalwood Top Stories
Darshan Pavithra
ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಭೇಟಿಗೆ ಪವಿತ್ರಗೌಡ ಶತಪ್ರಯತ್ನ – ನಯವಾಗೇ ನಿರಾಕರಿಸಿದ ದರ್ಶನ್!
Bengaluru City Cinema Crime Latest Top Stories
Nagachaitanya Shobitha Wedding
ಸಮಂತಾಗೂ ಮುನ್ನ ಗುಡ್‌ನ್ಯೂಸ್ ಕೊಡಲು ಸಜ್ಜಾದ್ರಾ ಮಾಜಿ ಪತಿ?
Cinema Latest South cinema Top Stories
Nora Fatehis Special Song in Jailer 2
ತಲೈವ ಜೊತೆ ಸೊಂಟ ಬಳುಕಿಸೋಕೆ ನೋರಾ ಫತೇಹಿ ರೆಡಿ
Latest South cinema Top Stories

You Might Also Like

Toll
Bengaluru City

ನಿಂತಲ್ಲೇ ನಿಂತಿದ್ರೂ ಟೋಲ್ ಶುಲ್ಕ ಕಟ್ – 4 ಬಾರಿ ಫಾಸ್ಟ್‌ಟ್ಯಾಗ್‌ ಬದಲಾವಣೆ ಮಾಡಿದ್ರೂ ನಿಲ್ಲದ ಸಮಸ್ಯೆ!

Public TV
By Public TV
20 minutes ago
Egg
Bagalkot

ಕ್ಯಾನ್ಸರ್‌ ಕಾರಕ ವದಂತಿ ಬೆನ್ನಲ್ಲೇ ಅಲರ್ಟ್‌ – ಖಾಸಗಿ ಲ್ಯಾಬ್‌ನಲ್ಲಿ ಮೊಟ್ಟೆ ಟೆಸ್ಟ್‌ಗೆ ರಾಜ್ಯ ಸರ್ಕಾರ ಅದೇಶ

Public TV
By Public TV
1 hour ago
Gruhalakshmi Scheme
Bengaluru City

ʻಪಬ್ಲಿಕ್‌ ಟಿವಿʼ ವರದಿ ಬೆನ್ನಲ್ಲೇ ಗುಡ್‌ನ್ಯೂಸ್‌; ಹೊಸವರ್ಷಕ್ಕೂ ಮುನ್ನವೇ ರಾಜ್ಯದ ʻಗೃಹಲಕ್ಷ್ಮಿʼಯರ ಖಾತೆಗೆ ಕಾಸು

Public TV
By Public TV
2 hours ago
Honnavara Beach 4
Crime

ಹೊನ್ನಾವರ | ಅಲೆಗಳ ಅಬ್ಬರಕ್ಕೆ ಸಮುದ್ರದ ಪಾಲಾದ ಸಹೋದರರು

Public TV
By Public TV
2 hours ago
Bangladesh 2
Latest

ಗುಂಡೇಟಿಗೆ ವಿದ್ಯಾರ್ಥಿ ನಾಯಕ ಉಸ್ಮಾನ್ ಹಾದಿ ಬಲಿ – ಬಾಂಗ್ಲಾ ಮತ್ತೆ ಧಗಧಗ

Public TV
By Public TV
3 hours ago
Interstate thief wanted in 79 cases arrested 250 grams of gold seized
Crime

79 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರರಾಜ್ಯ ಕಳ್ಳನ ಬಂಧನ – 250 ಗ್ರಾಂ ಚಿನ್ನ ವಶ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?