ಗದಗ: ಜಿಪಿಎಸ್ ಇಲ್ಲದೆ ಓವರ್ ಲೋಡ್ ಮೂಲಕ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 5 ಲಾರಿಗಳ ಅಧಿಕಾರಿಗಳು ವಶಪಡೆದಿರುವ ಘಟನೆ ಗದಗನಲ್ಲಿ ನಡೆದಿದೆ.
ಮುಂಡರಗಿ ತುಂಗಭದ್ರಾ ನದಿಯಿಂದ ಗದಗ, ಹುಬ್ಬಳ್ಳಿ, ಧಾರವಾಡಕ್ಕೆ ರಾತ್ರೋರಾತ್ರಿ ಅಕ್ರಮವಾಗಿ ಮರಳು ಸಾಗುತ್ತಿರುವ ವಾಹನಗಳನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗದಗ್ ನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಸಂತೋಷ ಹಾಗೂ ಶಹರ ಪೊಲೀಸ್ ಠಾಣೆ ಸಿಬ್ಬಂದಿ ನೇತೃತ್ವದಲ್ಲಿ ರಿಂಗ್ ರೋಡ್ ಬಳಿ ದಾಳಿ ಮಾಡಲಾಗಿದೆ.
ಅಕ್ರಮ ಮರಳು ಸಾಗಾಟ ಆರೋಪದ ಮೇಲೆ ವಿಚಾರಣೆಗೆ ಬಂದ ವೇಳೆ ವಾಹನಗಳ ಚಾಲಕರು ಹಾಗೂ ಮಾಲೀಕರು ಅಧಿಕಾರಿಗಳಿಗೆ ಅವಾಜ್ ಹಾಕಿದ್ದರು. ನಾವು ಜಿಪಿಎಸ್ ಡಿಸ್ ಕನೆಕ್ಟ್ ಮಾಡಿಲ್ಲ. ಎಲೆಕ್ಟ್ರಾನಿಕ್ ವಸ್ತುಗಳು ಹಾಳಾದರೆ ನಾವೇನು ಮಾಡಲು ಸಾಧ್ಯ. ನೀವು ಯಾವ ಉದ್ದೇಶಕ್ಕೆ ನಮ್ಮ ವಾಹನಗಳನ್ನ ಹಿಡಿದ್ರಿ? ಪಾಸ್ ಟೈಮಿಂಗ್ ಇದ್ದರೂ ಹೇಗೆ ಹಿಡಿದ್ರಿ? ನಿತ್ಯ ಎಲ್ಲಾ ವಾಹನಗಳನ್ನ ಹೀಗೆ ಹಿಡಿಯಬೇಕು. ಇಲ್ಲವಾದರೆ ಠಾಣೆ ಹೊರಗೆ ಹೋರಾಟ ಮಾಡುತ್ತೇವೆ ಎಂದು ಅವಾಜ್ ಹಾಕಿದ್ದಾರೆ.
ವಾಹನಗಳ ಚಾಲಕರು ಹಾಗೂ ಮಾಲೀಕರು ಅವಾಜ್ ಗೆ ಬಗ್ಗದ ಅಧಿಕಾರಿಗಳು 5 ಮರಳು ಲಾರಿಗಳ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.