ಕೊಲೊಂಬೋ: ರಾಮೇಶ್ವರಂನಿಂದ ಹೊರಟಿದ್ದ 6 ಮಂದಿ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿ ಅವರ ದೋಣಿಗಳನ್ನು ವಶಪಡಿಸಿಕೊಂಡಿದೆ.
ಅಗತ್ಯ ಅನುಮತಿ ಪಡೆದು ರಾಮೇಶ್ವರಂನಿಂದ ಒಟ್ಟು 400 ದೋಣಿಗಳು ಹೋರಟಿತ್ತು. ಅದರಲ್ಲಿ ತಲೈಮನ್ನಾರ್ ಮತ್ತು ನಾಚಿಕುಡವು ಬಳಿ ಮೀನುಗಾರಿಕೆ ನಡೆಸುತ್ತಿದ್ದ 6 ಮಂದಿಯ ದೋಣಿ ಸುತ್ತ ನೌಕಾಪಡೆಯ ಗಸ್ತು ಸುತ್ತುವರೆದಿದ್ದು, ಅಕ್ರಮವಾಗಿ ಮೀನುಗಾರಿಕೆ ಆರೋಪದ ಮೇರೆಗೆ ಅವರನ್ನು ಬಂಧಿಸಿದ್ದಾರೆ.
ಆರಂಭದಲ್ಲಿ 11 ಮೀನುಗಾರರನ್ನು ಬಂಧಿಸಲಾಯಿತು. ಅವರಲ್ಲಿ ಐವರು ದೋಣಿ ಎಂಜಿನ್ ಸ್ಥಗಿತಗೊಂಡಿದ್ದರಿಂದ ಶ್ರೀಲಂಕಾದ ಸಮುದ್ರಕ್ಕೆ ತೇಲಿಹೋಗಿದೆ ಎಂದು ಖಚಿತ ಪಡೆಸಿಕೊಂಡ ಶ್ರೀಲಂಕಾ ನೌಕಾಪಡೆ ನಂತರ ಆ ಐವರನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಪ್ರಮಾಣವಚನ ಸ್ವೀಕಾರ
ಬಂಧಿತರನ್ನು ಬಾಲಮುರುಗನ್, ಅಂತೋನಿ, ತಂಗಪಾಂಡಿ, ಅಜಿತ್, ಕೃಷ್ಣನ್ ಮತ್ತು ಮುದುಗು ಪಿಚೈ ಎಂದು ಗುರುತಿಸಲಾಗಿದೆ. ಮೀನುಗಾರರನ್ನು ತಲೈಮನ್ನಾರ್ ನೇವಿ ಕ್ಯಾಂಪ್ಗೆ ಕರೆದೊಯ್ಯಲಾಗಿದೆ. ಇದನ್ನೂ ಓದಿ: ಡಿಕೆಶಿಗೆ ಜಮೀರ್ ಡಿಚ್ಚಿ – ಸಿದ್ದರಾಮಯ್ಯಗೆ ಜಮೀರ್ ಜಿಂದಾಬಾದ್